ಅದು
ಬಿರು ಬಿಸಿಲಿನ ತಾಪ ತಡೆಯಲಾಗದೆ
ತಲೆಸುತ್ತಿ
ಬಿದ್ದಾಗ ಬಿದ್ದ ಕನಸು..!

ನಾ ಸಾಕಿದ ಮರ
ನನ್ನ ಹಿಂದೆ ನಾಯಿಯಂತೆ ಬರುತ್ತಿತ್ತು
ನಾ ಹೋದಲ್ಲೆಲ್ಲ ನೆರಳು ನೀಡೋ ಕೆಲಸ ಅದಕಿತ್ತು.
ಬೆವರಲು ಬಿಡದು,
ತಂಪಾದ ಗಾಳಿ ಬೀಸೋದು ಅದಕ್ಕೆ ಗೊತ್ತು..
ಮನೆಯಿಂದ ಮಾಲ್ ಗೆ ಹೋದಾಗ
ಮಾಲ್ ಅಂಗಳದ ತನಕ ಬರುತ್ತಿತ್ತು
ನಾ ಕಾರಲಿ ನೂರಿಪ್ಪತ್ತು ಸ್ಪೀಡ್ ನಲ್ಲಿ
ಹೋದರು ಹಿಂಬಾಲಿಸುತ್ತಿತ್ತು..!
ಅದಕ್ಕೆ ಮೋಡವನು ಕರೆದು
ನಮ್ಮನೆಗೆ
ಮಳೆ ಸುರಿಸೋದು ಗೊತ್ತು
ಬೇಕೆಂದಾಗೆಲ್ಲ ಹೂ ಹಣ್ಣು
ಕೊಡುತ್ತಿತ್ತು
ಆ ಮರ ನನ್ನಲೊಬ್ಬನಲ್ಲೇ
ಇದ್ದದ್ದು..
ಕೇಳಿದವರಿಗೆ ಬಾಡಿಗೆ
ನೀಡುತ್ತಿದ್ದೆ..!
ಬೀಜಕ್ಕೆ ಲಕ್ಷಗಟ್ಟಲೆ ಹಣ
ಕೇಳುತ್ತಿದ್ದೆ..!
ಯಾರು ಕದಿಯದಂತೆ ಭದ್ರತೆ
ಒದಗಿಸಿದ್ದೆ..!
ಯಾರೋ ‘ಬಿಸ್ಲರಿ’ ಬಾಟಲಿ ಹಿಡಿದು
ನೀರು ಚಿಮ್ಮಿಸಿದಾಗಲೇ
ಕನಸಿನ ಅರಿವಾದದ್ದು..!
ಎ.ಸಿ ರೂಮೇ
ಸತ್ಯ ಎನಿಸಿದ್ದು..!
✍ಯತೀಶ್ ಕಾಮಾಜೆ