Wednesday, February 12, 2025

ಮಾಡರ್ನ್ ಕವನ ಮುಗಿದ ಆಟ

ಅಪ್ಪ
ಆಡಿದ್ದ ಆಟ
ಮಗ ಆಡುತ್ತಿಲ್ಲ..!?

ಮೈಯೆಲ್ಲ ಮಣ್ಣಾದರೆ ಆಟ
ಅಮ್ಮನ ಬೈಗುಳದ ನಂತರ ಊಟ
ಅಂಗಳವೇ ಮೈದಾನ
ಮಣ್ಣು, ಕಲ್ಲು, ಹೂ, ತಾಳೆಗರಿ, ಎಲೆ
ಕೋಲು, ನೀರು
ಇವೇ ಆಟದ ಸಾಮಾನು..!

ಮಳೆ ಬಂದರೆ ಬಾವಿ ಆಟ
ಬಿತ್ತುವ ಆಟ,
ಬಿಸಿಲಾದರೆ ಮನೆಯಾಟ,
ದೇವಸ್ಥಾನಕ್ಕೆ ಹೋದರೆ ದೇವರಾಟ,
ಮದುವೆಗ್ಹೋದರೆ ಮದುವೆಯಾಟ,
ಅಜ್ಜಿ ಮನೆಗೆ ಹೋದರೆ ಅಜ್ಜಿಯಾಟ..

ಮಾವಿನ ಮರ
ಗೇರು ಮರ, ನೇರಳೆ ಮರ
ಆಟದಲ್ಲೂ ಪಾಲು ಪಡೆದುಕೊಂಡಿತ್ತು..!
ಮಕ್ಕಳ ಆಟ ನೋಡಲೆಂದೇ
ಅಷ್ಟೊಂದು ಕಾಯಿಗಳು ಬಿಡುತ್ತಿತ್ತು..!?

ಕಾಲ ಬದಲಾಯಿತು
ಮಣ್ಣಲ್ಲಿ ಆಡಲು ಬಿಡುವುದಿಲ್ಲ
ಅಯ್ಯೋ ಮಣ್ಣೇ ಇಲ್ಲ
ಕಾಂಕ್ರೀಟ್ ನೆಲದಲ್ಲಿ..!
ಹುಟ್ಟುತ್ತಲೇ ಚಂದಮಾಮನ ಪರಿಚಯಿಸಿದ್ದೇ
ಮೊಬೈಲ್ ನಲ್ಲಿ
ಊಟ ಮಾಡಿದ್ದು ಮೊಬೈಲ್ ನೋಡಿ
ಆಟನೂ ಮೊಬೈಲ್
ಊಟನೂ ಮೊಬೈಲ್

ದಿನಕ್ಕೊಂದು ಆಟ ಅಪ್ಡೇಟ್ ಆಗುತ್ತೆ..
ಬೆರಳುಗಳೇ ಆಡಿದ್ದು,
ಕಣ್ಣುಗಳೇ ನೋಡಿದ್ದು.
ಕೈ ಕಾಲುಗಳು ಆಡಲೇ ಇಲ್ಲ
ಇದೇ ಅಪ್ಡೇಟ್ ಜನರೇಷನ್..!

ಪರಿಸರವ ಪ್ರೀತಿಸಲು
ಮರೆತದ್ದು ಇಲ್ಲೇ
ಕಡಲನ್ನೂ ನೋಡಿ ಖುಷಿಪಟ್ಟದ್ದು
ಮೊಬೈಲ್ ನಲ್ಲೇ…!

ಎಲ್ಲಾ ಮುಗಿದ ಆಟಗಳು
ಅಂಗಳಗಳಿಲ್ಲದ ಮನೆಯಲ್ಲಿ..!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...