Wednesday, February 12, 2025

*ಮಾಡರ್ನ್ ಕವನ* – *ಬಾಗಿಲು*

ಮನೆಗೂ ಮನಕ್ಕೂ

ಸಂಬಂಧ
ಇದೆಯೇ…!

ಸಣ್ಣದಿರುವಾಗ
ಅದು ಬಣ್ಣವೇ ಕಾಣದ ಮನೆ
ಇದ್ದಿದ್ದೇ ಎರಡು ಕೋಣೆ
ಒಂದು ಚಾವಡಿ
ಇನ್ನೊಂದು ಅಡುಗೆ ಕೋಣೆ
ಇಲ್ಲಿ ಊಟನೂ
ಒಂದೇ ಜಾಗದಲ್ಲಿ
ನಿದ್ದೆಯೂ ಅದೇ ಮೂಲೆಯಲ್ಲಿ
ಇಲ್ಲಿ ಬಾಗಿಲು ಎರಡೇ
ಒಂದು ಮುಂದಿನ ಬಾಗಿಲು
ಇನ್ನೊಂದು ಹಿಂದಿನ ಬಾಗಿಲು

ಅಪ್ಪ ಅಮ್ಮಅಣ್ಣ ತಮ್ಮ
ಕನಸುಗಳು ಒಂದೇ ಕೊನೆಯಲ್ಲಿ
ಹರಡುತ್ತಿತ್ತು.
ಅಣ್ಣನ ಕೈ ತಮ್ಮನ ಎದೆ ಮೇಲಿತ್ತು
ತಮ್ಮನ ಕಾಲು ಅಣ್ಣನ ಹೊಟ್ಟೆ ಮೇಲಿತ್ತು
ಅಷ್ಟರಲ್ಲೇ ಹೊರಳಾಡಿ
ಸೂರ್ಯ ಬರುವ ಹೊತ್ತಿಗೆ
ಹೊದಿಕೆಯು ಅದಲುಬದಲು ಆಗಿತ್ತು..!
ಬಾಂಧವ್ಯ ಹಾಗೆ ಇತ್ತು..

ದೊಡ್ಡದಾದಾಗ
ಬಣ್ಣ ಬಣ್ಣದ ಗೋಡೆ
ಒಂದು ಹಾಲ್
ಒಂದು ಕಿಚನ್
ಒಂದು ಡೈನಿಂಗ್
ಮೂರು ಬೆಡ್ ರೂಮ್
ಮನೆ ಒಂದು ನೂರು ಬಾಗಿಲು.

ಊಟ ಬೇಕಾದಾಗ
ಡೈನಿಂಗ್ ಲೈಟ್ ಆನ್ ಆಗುತ್ತೆ
ನಿದ್ದೆ ಬಂದಾಗ ರೂಮ್
ಬಾಗಿಲು ಕ್ಲೋಸ್ ಆಗುತ್ತೆ
ಅಣ್ಣ ತಮ್ಮನ ರೂಮ್ ಗೆ ಹೊಕ್ಕಾಗ
ನಾನ್ ಸೆನ್ಸ್
ಬಾಗಿಲು ಬಡಿದು ಬರಬೇಕು
ಗೊತ್ತಿಲ್ವ ಅಂದ..!
ತಮ್ಮ ಅಣ್ಣನ ಬಾಗಿಲು ಬಡಿದಾಗ
ಏ ಲೂಸು.
ಒಂದು ಸಾರಿ ಬಡಿದರೆ ಗೊತ್ತಾಗುತ್ತೆ ಅಂದ..!
ಬಾಲ್ಯ ಈಗೊಂದು ನೆನಪು
ಬೆಳೆಯುತ್ತ ದಾಯದಿಗಳಾದದ್ದು
ತಪ್ಪು

ಮನೆಯ ಬಾಗಿಲುಗಳು
ಹೆಚ್ಚಾದ ಹಾಗೆ
ಮನದ ಬಾಗಿಲು
ಗಟ್ಟಿಯಾಗಿ ಮುಚ್ಚಿತೇ ಹೇಗೆ…!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...