Tuesday, July 15, 2025

*ಮಾಡರ್ನ್ ಕವನ* – *ಬಾಗಿಲು*

ಮನೆಗೂ ಮನಕ್ಕೂ

ಸಂಬಂಧ
ಇದೆಯೇ…!

ಸಣ್ಣದಿರುವಾಗ
ಅದು ಬಣ್ಣವೇ ಕಾಣದ ಮನೆ
ಇದ್ದಿದ್ದೇ ಎರಡು ಕೋಣೆ
ಒಂದು ಚಾವಡಿ
ಇನ್ನೊಂದು ಅಡುಗೆ ಕೋಣೆ
ಇಲ್ಲಿ ಊಟನೂ
ಒಂದೇ ಜಾಗದಲ್ಲಿ
ನಿದ್ದೆಯೂ ಅದೇ ಮೂಲೆಯಲ್ಲಿ
ಇಲ್ಲಿ ಬಾಗಿಲು ಎರಡೇ
ಒಂದು ಮುಂದಿನ ಬಾಗಿಲು
ಇನ್ನೊಂದು ಹಿಂದಿನ ಬಾಗಿಲು

ಅಪ್ಪ ಅಮ್ಮಅಣ್ಣ ತಮ್ಮ
ಕನಸುಗಳು ಒಂದೇ ಕೊನೆಯಲ್ಲಿ
ಹರಡುತ್ತಿತ್ತು.
ಅಣ್ಣನ ಕೈ ತಮ್ಮನ ಎದೆ ಮೇಲಿತ್ತು
ತಮ್ಮನ ಕಾಲು ಅಣ್ಣನ ಹೊಟ್ಟೆ ಮೇಲಿತ್ತು
ಅಷ್ಟರಲ್ಲೇ ಹೊರಳಾಡಿ
ಸೂರ್ಯ ಬರುವ ಹೊತ್ತಿಗೆ
ಹೊದಿಕೆಯು ಅದಲುಬದಲು ಆಗಿತ್ತು..!
ಬಾಂಧವ್ಯ ಹಾಗೆ ಇತ್ತು..

ದೊಡ್ಡದಾದಾಗ
ಬಣ್ಣ ಬಣ್ಣದ ಗೋಡೆ
ಒಂದು ಹಾಲ್
ಒಂದು ಕಿಚನ್
ಒಂದು ಡೈನಿಂಗ್
ಮೂರು ಬೆಡ್ ರೂಮ್
ಮನೆ ಒಂದು ನೂರು ಬಾಗಿಲು.

ಊಟ ಬೇಕಾದಾಗ
ಡೈನಿಂಗ್ ಲೈಟ್ ಆನ್ ಆಗುತ್ತೆ
ನಿದ್ದೆ ಬಂದಾಗ ರೂಮ್
ಬಾಗಿಲು ಕ್ಲೋಸ್ ಆಗುತ್ತೆ
ಅಣ್ಣ ತಮ್ಮನ ರೂಮ್ ಗೆ ಹೊಕ್ಕಾಗ
ನಾನ್ ಸೆನ್ಸ್
ಬಾಗಿಲು ಬಡಿದು ಬರಬೇಕು
ಗೊತ್ತಿಲ್ವ ಅಂದ..!
ತಮ್ಮ ಅಣ್ಣನ ಬಾಗಿಲು ಬಡಿದಾಗ
ಏ ಲೂಸು.
ಒಂದು ಸಾರಿ ಬಡಿದರೆ ಗೊತ್ತಾಗುತ್ತೆ ಅಂದ..!
ಬಾಲ್ಯ ಈಗೊಂದು ನೆನಪು
ಬೆಳೆಯುತ್ತ ದಾಯದಿಗಳಾದದ್ದು
ತಪ್ಪು

ಮನೆಯ ಬಾಗಿಲುಗಳು
ಹೆಚ್ಚಾದ ಹಾಗೆ
ಮನದ ಬಾಗಿಲು
ಗಟ್ಟಿಯಾಗಿ ಮುಚ್ಚಿತೇ ಹೇಗೆ…!

 

✍ಯತೀಶ್ ಕಾಮಾಜೆ

More from the blog

ಆ. 24ರಂದು ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಸೀಸನ್ 3 ಮತ್ತು ನಮ್ಮೂರ ಟೆಕ್ನೀಶಿಯನ್..

ಬಂಟ್ವಾಳ : ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆ ಹತ್ತಲು ಅವಕಾಶ ಸಿಗುವುದು ಕೃಷ್ಣ ವೇಷದ ಮೂಲಕ. ಇಂತಹ ಅವಕಾಶವನ್ನು ಇಲ್ಲಿನ ಪೊಸಳ್ಳಿಯ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳವು ಕೃಷ್ಣ...

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...