Thursday, February 13, 2025

ಮಾಡರ್ನ್ ಕವನ- ಕನಸು ನನಸಾಗಲಿ

ಬದಲಾಗಬೇಕು
ಬದಲಾಗಿ
ಬದಲಾವಣೆ ಜಗದ ನಿಯಮ..!

ಅಡುಗೆ ಮನೆಯ ಕುಕ್ಕರ್
ವಿಷಲ್ ಗೆ ಓಡಿ ಬರುವ
ಹೌಸ್ ವೈಫ್ ಆಗುವ ಕನಸು
ಬಿಟ್ಟು ಬಿಡಿ
ಗಡಿಯಲ್ಲಿ ಶತ್ರುವಿನ
ಗುಂಡಿಗೆಯ ಸದ್ದಡಗಿಸುವ
ವೀರ ರಾಣಿ
ಆಗಿ ಬಿಡಿ..!

ತರಕಾರಿ ವ್ಯಾಪಾರಿ ಜೊತೆ
ಚೌಕಾಸಿ ಮಾಡಿ
ಬಂದು ಬೀಗಬೇಡಿ
ಪಾರ್ಲಿಮೆಂಟ್ ನಲ್ಲಿ ಕೂತು
ವಿರೋಧ ಪಕ್ಷ
ಮಾತಾಡದಂತೆ ಮಾತಾಡಿ

ಗಂಡನಲ್ಲಿ ವಾಷಿಂಗ್ ಮಿಷನ್ ತನ್ನಿ
ಮಿಕ್ಸಿ ತನ್ನಿ
ಫ್ರಿಜ್ ತನ್ನಿ
ಎಂದೆಲ್ಲಾ ಪೂಸಿ ಒಡೆಯುತ್ತ
ಕೂರಬೇಡಿ
ಜಗತ್ತಿಗೆ ಹೊಸ
ಮಿಷನ್ ಗಳ ಪರಿಚಯ
ಮಾಡಿ ಬಿಡಿ..

ಅವಳೆಂದರೆ ಕ್ಷಮಾಧರಿತ್ರಿ
ಅವಳೆಂದರೆ ಕರುಣಾಮಯಿ
ಅವಳೆಂದರೆ ತ್ಯಾಗಮಯಿ
ಈ ಡೈಲಾಗ್ ಉಬ್ಬಿ ಹೋಗುವುದನ್ನು
ಬಿಟ್ಟುಬಿಡಿ
ಅವಳೆಂದರೆ ಶಕ್ತಿ
ಅವಳೆಂದರೆ ದುರ್ಗಿ
ಅವಳೆಂದರೆ ಕಾಳಿ
ಎನ್ನುವಂತೆ ಆಗಿ ಬಿಡಿ..!

ಆಗ ಗಾಂಧೀಜಿ
ಕಂಡ ಕನಸು
ನನಸಾಗುವುದು…!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...