Wednesday, February 4, 2026

ಮಾಡರ್ನ್ ಕವನ- ಕನಸು ನನಸಾಗಲಿ

ಬದಲಾಗಬೇಕು
ಬದಲಾಗಿ
ಬದಲಾವಣೆ ಜಗದ ನಿಯಮ..!

ಅಡುಗೆ ಮನೆಯ ಕುಕ್ಕರ್
ವಿಷಲ್ ಗೆ ಓಡಿ ಬರುವ
ಹೌಸ್ ವೈಫ್ ಆಗುವ ಕನಸು
ಬಿಟ್ಟು ಬಿಡಿ
ಗಡಿಯಲ್ಲಿ ಶತ್ರುವಿನ
ಗುಂಡಿಗೆಯ ಸದ್ದಡಗಿಸುವ
ವೀರ ರಾಣಿ
ಆಗಿ ಬಿಡಿ..!

ತರಕಾರಿ ವ್ಯಾಪಾರಿ ಜೊತೆ
ಚೌಕಾಸಿ ಮಾಡಿ
ಬಂದು ಬೀಗಬೇಡಿ
ಪಾರ್ಲಿಮೆಂಟ್ ನಲ್ಲಿ ಕೂತು
ವಿರೋಧ ಪಕ್ಷ
ಮಾತಾಡದಂತೆ ಮಾತಾಡಿ

ಗಂಡನಲ್ಲಿ ವಾಷಿಂಗ್ ಮಿಷನ್ ತನ್ನಿ
ಮಿಕ್ಸಿ ತನ್ನಿ
ಫ್ರಿಜ್ ತನ್ನಿ
ಎಂದೆಲ್ಲಾ ಪೂಸಿ ಒಡೆಯುತ್ತ
ಕೂರಬೇಡಿ
ಜಗತ್ತಿಗೆ ಹೊಸ
ಮಿಷನ್ ಗಳ ಪರಿಚಯ
ಮಾಡಿ ಬಿಡಿ..

ಅವಳೆಂದರೆ ಕ್ಷಮಾಧರಿತ್ರಿ
ಅವಳೆಂದರೆ ಕರುಣಾಮಯಿ
ಅವಳೆಂದರೆ ತ್ಯಾಗಮಯಿ
ಈ ಡೈಲಾಗ್ ಉಬ್ಬಿ ಹೋಗುವುದನ್ನು
ಬಿಟ್ಟುಬಿಡಿ
ಅವಳೆಂದರೆ ಶಕ್ತಿ
ಅವಳೆಂದರೆ ದುರ್ಗಿ
ಅವಳೆಂದರೆ ಕಾಳಿ
ಎನ್ನುವಂತೆ ಆಗಿ ಬಿಡಿ..!

ಆಗ ಗಾಂಧೀಜಿ
ಕಂಡ ಕನಸು
ನನಸಾಗುವುದು…!

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...