Friday, February 14, 2025

ಮಾಡರ್ನ್ ಕವನ- ಪೆದ್ದು

ಪೆದ್ದು ಕಣೆ ನೀನು ಪೆದ್ದು
ಬಸ್ ಹಿಂದೆ ಹೋಡೊದು
ಗಂಡು ಮಕ್ಳಿಗೆ ಬಿಟ್ಟಿದ್ದೆಂದು
ನೀ ಓಡದೆ ಆ ಗಂಡು ಡ್ರೈವರ್‌
ಬಸ್ ನಿಲ್ಸೋದ್ನ ಕಾಯ್ತಿಯಲ್ವೆ
ನೀನೊಮ್ಮೆ ಓಡಿ ನೋಡು
ಪೀಟಿ ಉಷಾನು ನಿಮ್ಮವಳಲ್ವೆ

ನಕ್ಷತ್ರ ನೋಡಿ ಗಂಡನಲ್ಲಿ ಬೇಡಿ
ನಿದ್ದೆಬಿಟ್ಟು ಅತ್ತುಬಿಟ್ಟು
ಅವನ ಕೈಯಲ್ಲಿ ಚೀ ಥೂ ಎಂದು
ಅನ್ನಿಸಿ ಕೊಳ್ಳುವುದ ಬಿಟ್ಟು
ಗೋಣಿ ಹಿಡಿದು ಹೊರಟು ಬಿಡು
ಬಾನೇರಿ ನಕ್ಷತ್ರಗಳ ಲೋಕ
ಸುತ್ತಿದ
ಕಲ್ಪನಾಚಾವ್ಲಳು ನಿಮ್ಮವಳಲ್ವೆ

ಅಡುಗೆ ಮನೆಯಲ್ಲಿ ಎಷ್ಟು
ಮಾತಾಡುವೆ ಸೌಟುಗಳ ಜೊತೆ
ಒದ್ದೆ ಬಟ್ಟೆ ಯ ಜಜ್ಜಿದರು
ಕಲ್ಲಿಗೇನು ಏಟು ಬಿತ್ತೆ
ತಿಕ್ಕಿ ಮಿನುಗಿದ ಬಟ್ಟಳಲಿ
ನಿನ್ನ ಮುಖ ಬೆಳಗಿತೆ
ಮುಟ್ಟಿದ ಕಾಮಿಷ್ಟನ ನೆನೆದು ಅಳುವೆ ಮತ್ತೆ
ಎದೆ ಗುಂದದೆ ಬಡಿದು ಗೆದ್ದು
ಸೌಟು ಹಿಡಿದ ಕೈಗೆ ಬಾಕ್ಸಿಂಗ್ ಕವರ್ ಹಾಕಿಕೊಂಡ
ಮೇರಿಕೊಂ ನಿಮ್ಮವಳಲ್ವೆ

ಪೆದ್ದು ಅಳುಬುರುಕಿ ಅಂಜುಬುರುಕಿ
ಸಾಕು ನಿಲ್ಲಿಸು ನಿನ್ನ ಹಳೆ ರಾಗ
ತಾಯಿ ಅಕ್ಕ ತಂಗಿ ಮಡದಿ ಆದರೆ ಸಾಲದು
ಓಮ್ಮೆ ತಿರುಗಿ ನೋಡು ಎಷ್ಟೊಂದು ಅವತಾರಗಳಿವೆ ನಿನಗೆ
ಆ ಲಕ್ಷ್ಮಿ, ಶಾರದೆ,ಕಾಳಿ ಎಲ್ಲಾ ನಿಮ್ಮವರಲ್ವೆ

 

✍ಯತೀಶ್ ಕಾಮಾಜೆ

More from the blog

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...