Monday, July 14, 2025

ಮಾಡರ್ನ್ ಕವನ – ದೇಶಭಕ್ತಿ

ಸಾಮಾಜಿಕ ಜಾಲತಾಣ
ತುಂಬಾ
ದೇಶ ಭಕ್ತಿ ಹರಿದಾಡಿದೆ..!

ನಾನು ಜನಸಾಮಾನ್ಯ
ಏನೂ ಮಾಡಲಾಗದು
ನನ್ನ ಕೈಯಲ್ಲಿ ದೇಶಕ್ಕಾಗಿ..!
ಮಾಡಿದರೆ ಇಷ್ಟೇ
ವಾಟ್ಸ್ ಪ್ ಸ್ಟೇಟಸ್ ನಲ್ಲಿ
ಫೇಸ್ ಬುಕ್ ವಾಲ್ನಲ್ಲಿ
ಟಿಕ್ ಟಾಕ್ ವೀಡಿಯೋಗಳಲ್ಲಿ
ಜೈ ಹಿಂದ್ ಘೋಷಣೆ
ಏಕೆಂದರೆ ನಾನು ಜನ ಸಾಮಾನ್ಯ..
ಯುದ್ಧ ಮಾಡುವ ಶಕ್ತಿ ನನಗಿಲ್ಲ..!

ನನ್ನ ದೇಶ ಭಕ್ತಿ ಏನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..
ಎಷ್ಟು ಜನ ಲೈಕ್ ಕೊಟ್ಟಿದ್ದಾರೆ
ಎಷ್ಟು ಕಾಮೆಂಟ್ ಬಂದಿದೆ
ಎಷ್ಟು ಜನ ರೀಡ್ ಮಾಡಿದ್ದಾರೆ
ಇಷ್ಟರಲ್ಲೇ ಬ್ಯುಸಿ ನಾನು..!
ಚಪ್ಪಾಳೆ ತಟ್ಟಿದ್ದೇನೆ
ನಮ್ಮ ಸೈನಿಕರು ಹೊಡೆದುರುಳಿಸಿದಾಗ..
ಕಣ್ಣೀರಿಟ್ಟಿದ್ದೇನೆ
ನಮ್ಮ ಸೈನಿಕರು
ಹುತಾತ್ಮರಾದಾಗ…!
ನೀವು ನನ್ನ ವಾಟ್ಸಾಪ್ ಸ್ಟೇಟಸ್
ನೋಡುತ್ತಿದ್ದರೆ ಗೊತ್ತಾಗುತ್ತಿತ್ತು..!

ಅದೆಷ್ಟು ದೇಶ ಪರ
ಫೋಸ್ಟ್ ಗಳನ್ನು
ವಾಟ್ಸಾಪ್ ನಲ್ಲಿ ಫಾರ್ವರ್ಡ್‌ ಮಾಡಿದ್ದೇನೆ
ಫೇಸ್ಬುಕ್ ನಲ್ಲಿ ಷೇರ್ ಮಾಡಿದ್ದೇನೆ
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದೇನೆ
ಇದೆಲ್ಲಾ ದೇಶ ಭಕ್ತಿಯಿಂದ..!

ಎದೆಬಗೆದು ನೋಡಿದರೆ
ದೇಶಭಕ್ತಿ
ಕಾಣದಿರಬಹುದು
ನನ್ನದೇನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..!

 

✍ಯತೀಶ್ ಕಾಮಾಜೆ

More from the blog

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...