Friday, February 14, 2025

ಮಾಡರ್ನ್ ಕವನ – ದೇಶಭಕ್ತಿ

ಸಾಮಾಜಿಕ ಜಾಲತಾಣ
ತುಂಬಾ
ದೇಶ ಭಕ್ತಿ ಹರಿದಾಡಿದೆ..!

ನಾನು ಜನಸಾಮಾನ್ಯ
ಏನೂ ಮಾಡಲಾಗದು
ನನ್ನ ಕೈಯಲ್ಲಿ ದೇಶಕ್ಕಾಗಿ..!
ಮಾಡಿದರೆ ಇಷ್ಟೇ
ವಾಟ್ಸ್ ಪ್ ಸ್ಟೇಟಸ್ ನಲ್ಲಿ
ಫೇಸ್ ಬುಕ್ ವಾಲ್ನಲ್ಲಿ
ಟಿಕ್ ಟಾಕ್ ವೀಡಿಯೋಗಳಲ್ಲಿ
ಜೈ ಹಿಂದ್ ಘೋಷಣೆ
ಏಕೆಂದರೆ ನಾನು ಜನ ಸಾಮಾನ್ಯ..
ಯುದ್ಧ ಮಾಡುವ ಶಕ್ತಿ ನನಗಿಲ್ಲ..!

ನನ್ನ ದೇಶ ಭಕ್ತಿ ಏನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..
ಎಷ್ಟು ಜನ ಲೈಕ್ ಕೊಟ್ಟಿದ್ದಾರೆ
ಎಷ್ಟು ಕಾಮೆಂಟ್ ಬಂದಿದೆ
ಎಷ್ಟು ಜನ ರೀಡ್ ಮಾಡಿದ್ದಾರೆ
ಇಷ್ಟರಲ್ಲೇ ಬ್ಯುಸಿ ನಾನು..!
ಚಪ್ಪಾಳೆ ತಟ್ಟಿದ್ದೇನೆ
ನಮ್ಮ ಸೈನಿಕರು ಹೊಡೆದುರುಳಿಸಿದಾಗ..
ಕಣ್ಣೀರಿಟ್ಟಿದ್ದೇನೆ
ನಮ್ಮ ಸೈನಿಕರು
ಹುತಾತ್ಮರಾದಾಗ…!
ನೀವು ನನ್ನ ವಾಟ್ಸಾಪ್ ಸ್ಟೇಟಸ್
ನೋಡುತ್ತಿದ್ದರೆ ಗೊತ್ತಾಗುತ್ತಿತ್ತು..!

ಅದೆಷ್ಟು ದೇಶ ಪರ
ಫೋಸ್ಟ್ ಗಳನ್ನು
ವಾಟ್ಸಾಪ್ ನಲ್ಲಿ ಫಾರ್ವರ್ಡ್‌ ಮಾಡಿದ್ದೇನೆ
ಫೇಸ್ಬುಕ್ ನಲ್ಲಿ ಷೇರ್ ಮಾಡಿದ್ದೇನೆ
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದೇನೆ
ಇದೆಲ್ಲಾ ದೇಶ ಭಕ್ತಿಯಿಂದ..!

ಎದೆಬಗೆದು ನೋಡಿದರೆ
ದೇಶಭಕ್ತಿ
ಕಾಣದಿರಬಹುದು
ನನ್ನದೇನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..!

 

✍ಯತೀಶ್ ಕಾಮಾಜೆ

More from the blog

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...