Sunday, February 1, 2026

ಮಾಡರ್ನ್ ಕವನ – ದೇಶಭಕ್ತಿ

ಸಾಮಾಜಿಕ ಜಾಲತಾಣ
ತುಂಬಾ
ದೇಶ ಭಕ್ತಿ ಹರಿದಾಡಿದೆ..!

ನಾನು ಜನಸಾಮಾನ್ಯ
ಏನೂ ಮಾಡಲಾಗದು
ನನ್ನ ಕೈಯಲ್ಲಿ ದೇಶಕ್ಕಾಗಿ..!
ಮಾಡಿದರೆ ಇಷ್ಟೇ
ವಾಟ್ಸ್ ಪ್ ಸ್ಟೇಟಸ್ ನಲ್ಲಿ
ಫೇಸ್ ಬುಕ್ ವಾಲ್ನಲ್ಲಿ
ಟಿಕ್ ಟಾಕ್ ವೀಡಿಯೋಗಳಲ್ಲಿ
ಜೈ ಹಿಂದ್ ಘೋಷಣೆ
ಏಕೆಂದರೆ ನಾನು ಜನ ಸಾಮಾನ್ಯ..
ಯುದ್ಧ ಮಾಡುವ ಶಕ್ತಿ ನನಗಿಲ್ಲ..!

ನನ್ನ ದೇಶ ಭಕ್ತಿ ಏನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..
ಎಷ್ಟು ಜನ ಲೈಕ್ ಕೊಟ್ಟಿದ್ದಾರೆ
ಎಷ್ಟು ಕಾಮೆಂಟ್ ಬಂದಿದೆ
ಎಷ್ಟು ಜನ ರೀಡ್ ಮಾಡಿದ್ದಾರೆ
ಇಷ್ಟರಲ್ಲೇ ಬ್ಯುಸಿ ನಾನು..!
ಚಪ್ಪಾಳೆ ತಟ್ಟಿದ್ದೇನೆ
ನಮ್ಮ ಸೈನಿಕರು ಹೊಡೆದುರುಳಿಸಿದಾಗ..
ಕಣ್ಣೀರಿಟ್ಟಿದ್ದೇನೆ
ನಮ್ಮ ಸೈನಿಕರು
ಹುತಾತ್ಮರಾದಾಗ…!
ನೀವು ನನ್ನ ವಾಟ್ಸಾಪ್ ಸ್ಟೇಟಸ್
ನೋಡುತ್ತಿದ್ದರೆ ಗೊತ್ತಾಗುತ್ತಿತ್ತು..!

ಅದೆಷ್ಟು ದೇಶ ಪರ
ಫೋಸ್ಟ್ ಗಳನ್ನು
ವಾಟ್ಸಾಪ್ ನಲ್ಲಿ ಫಾರ್ವರ್ಡ್‌ ಮಾಡಿದ್ದೇನೆ
ಫೇಸ್ಬುಕ್ ನಲ್ಲಿ ಷೇರ್ ಮಾಡಿದ್ದೇನೆ
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದೇನೆ
ಇದೆಲ್ಲಾ ದೇಶ ಭಕ್ತಿಯಿಂದ..!

ಎದೆಬಗೆದು ನೋಡಿದರೆ
ದೇಶಭಕ್ತಿ
ಕಾಣದಿರಬಹುದು
ನನ್ನದೇನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..!

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...