Friday, January 30, 2026

ಮಾಡರ್ನ್ ಕವನ-ಕೀ ಸಿಗಬಹದೇ

ವಾಕಿಂಗ್ ಹೋಗಿ
ಬಂದಾಗ ಮನೆ ಕೀ ಇಲ್ಲ
ಹುಡುಕಾಡಿ ಸುಸ್ತಾಗಿ
ಮತ್ತೆ ವಾಕಿಂಗ್
ಹೋಗಿ ಬಂದ ದಾರಿಗೆ
ಕಣ್ಹಾಯಿಸುತ್ತ ಸಾಗಿದೆ..

ಕಣ್ಣುಗಳಿಗೆ ಕಾಣ ಸಿಕ್ಕಿದ್ದು
ಚಾಕಲೇಟ್ ಪ್ಲಾಸ್ಟಿಕ್ ಗಳು
ಅಂದು ಹತ್ತು ಪೈಸೆಯ ಚಾಕಲೇಟ್ ನಿಂದ
ಹಿಡಿದು
ಇಂದಿನ ನೂರು ಇನ್ನೂರು
ಬೆಲೆಯ ಚಾಕಲೇಟ್ ಪ್ಲಾಸ್ಟಿಕ್ ಇತ್ತು
ಕೆಲವು
ಅರ್ಧ ಮಣ್ಣಲ್ಲಿ ಕರಗಿತ್ತು
ಇನ್ನೂ ಕೆಲವು ಹಾಗೆ ಇತ್ತು
ಆ ಸಿಲ್ವರ್ ಬಣ್ಣ
ನನ್ನ ಕೀಯೇನೋ ಅನ್ನುವಂತಾಗಿ
ಬಗ್ಗಿ ಪರೀಕ್ಷಿಸುವಂತೆ ಮಾಡುತ್ತಿತ್ತು..

ಅಲ್ಲೊಂದು ಇಲ್ಲೊಂದು
ಮಿನರಲ್ ವಾಟರ್ ಡಬ್ಬ
ಅದೇನೋ ಫ್ಯಾಂಟಾ,ಮಾಜಾ
ಪೆಪ್ಸಿ ,ಕೋಕೊ ಕೋಲ
ಹೀಗೆ ಕೆಲವು ಹೆಸರಿನ ಬಾಟಲಿಗಳು
ಲೇಸ್, ಕುರ್ಕುರೆ,
ಬಿಸ್ಕತ್ತ್ ಪ್ಯಾಕೆಟ್ಗಳು..
ಕೆಲವು ಮಣ್ಣು ಮೆತ್ತಿಕೊಂಡಿದ್ದವು
ಇನ್ನೂ ಕೆಲವು ಹೊಸತಂತಿತ್ತು..

ಈ ಗುಟ್ಕಾ ಕವರ್ಗಳಂತು
ಅಲ್ಲಲ್ಲಿ ಬಿದ್ದಿದ್ದವು
ಅವುಗಳ ಹೆಸರು ತಿಳಿದದ್ದೇ ಆಗ
ಸಿದ್ದು,ಮಾರುತಿ,ವಿಮಲ್
ಕೂಲ್ ಲಿಪ್,ಮಧು
ಏನೆಲ್ಲಾ ಹೆಸರು..
ಅವುಗಳು ಅಷ್ಟೇ
ಹಳೇ ಚಂದ ಚಿತ್ರಗಳಿಂದ ಹಿಡಿದು
ಇಂದಿನ ಕ್ಯಾನ್ಸರ್ ಬಾಯಿ ತನಕದ
ಚಿತ್ರಗಳ ಪ್ಲಾಸ್ಟಿಕ್ ಗಳು
ಹಾಗೆ ಇದ್ದುವು..!

ಹೋದ ದಾರಿಗೆ ಸುಂಕ ಇಲ್ಲ
ಎಂಬಂತೆ ಸುಸ್ತಾಗಿ
ಕೂತಾಗ ಕುಂಡೆಗೆ ಚುಚ್ಚಿದಂತಾಗ
ನೆನಪಾದದ್ದು
ಹಿಂದಿನ ಕಿಸೆಯಲ್ಲಿ ಇಟ್ಟದ್ದು
ಆ ಕಿಸೆ ಬಿಟ್ಟು
ಬೇರೆ ಎಲ್ಲಾ ಕಡೆ ಹುಡುಕಿದ್ದು..

ಸಿಕ್ಕಿತು
ಮನೆಯ ಕೀ..
ಸಿಗಬಹುದೇ
ಪ್ಲಾಸ್ಟಿಕ್ ಬಂದ್ ಮಾಡುವ ಕೀ..!?

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...