Saturday, July 12, 2025

ಮಾಡರ್ನ್ ಕವನ-ಕೀ ಸಿಗಬಹದೇ

ವಾಕಿಂಗ್ ಹೋಗಿ
ಬಂದಾಗ ಮನೆ ಕೀ ಇಲ್ಲ
ಹುಡುಕಾಡಿ ಸುಸ್ತಾಗಿ
ಮತ್ತೆ ವಾಕಿಂಗ್
ಹೋಗಿ ಬಂದ ದಾರಿಗೆ
ಕಣ್ಹಾಯಿಸುತ್ತ ಸಾಗಿದೆ..

ಕಣ್ಣುಗಳಿಗೆ ಕಾಣ ಸಿಕ್ಕಿದ್ದು
ಚಾಕಲೇಟ್ ಪ್ಲಾಸ್ಟಿಕ್ ಗಳು
ಅಂದು ಹತ್ತು ಪೈಸೆಯ ಚಾಕಲೇಟ್ ನಿಂದ
ಹಿಡಿದು
ಇಂದಿನ ನೂರು ಇನ್ನೂರು
ಬೆಲೆಯ ಚಾಕಲೇಟ್ ಪ್ಲಾಸ್ಟಿಕ್ ಇತ್ತು
ಕೆಲವು
ಅರ್ಧ ಮಣ್ಣಲ್ಲಿ ಕರಗಿತ್ತು
ಇನ್ನೂ ಕೆಲವು ಹಾಗೆ ಇತ್ತು
ಆ ಸಿಲ್ವರ್ ಬಣ್ಣ
ನನ್ನ ಕೀಯೇನೋ ಅನ್ನುವಂತಾಗಿ
ಬಗ್ಗಿ ಪರೀಕ್ಷಿಸುವಂತೆ ಮಾಡುತ್ತಿತ್ತು..

ಅಲ್ಲೊಂದು ಇಲ್ಲೊಂದು
ಮಿನರಲ್ ವಾಟರ್ ಡಬ್ಬ
ಅದೇನೋ ಫ್ಯಾಂಟಾ,ಮಾಜಾ
ಪೆಪ್ಸಿ ,ಕೋಕೊ ಕೋಲ
ಹೀಗೆ ಕೆಲವು ಹೆಸರಿನ ಬಾಟಲಿಗಳು
ಲೇಸ್, ಕುರ್ಕುರೆ,
ಬಿಸ್ಕತ್ತ್ ಪ್ಯಾಕೆಟ್ಗಳು..
ಕೆಲವು ಮಣ್ಣು ಮೆತ್ತಿಕೊಂಡಿದ್ದವು
ಇನ್ನೂ ಕೆಲವು ಹೊಸತಂತಿತ್ತು..

ಈ ಗುಟ್ಕಾ ಕವರ್ಗಳಂತು
ಅಲ್ಲಲ್ಲಿ ಬಿದ್ದಿದ್ದವು
ಅವುಗಳ ಹೆಸರು ತಿಳಿದದ್ದೇ ಆಗ
ಸಿದ್ದು,ಮಾರುತಿ,ವಿಮಲ್
ಕೂಲ್ ಲಿಪ್,ಮಧು
ಏನೆಲ್ಲಾ ಹೆಸರು..
ಅವುಗಳು ಅಷ್ಟೇ
ಹಳೇ ಚಂದ ಚಿತ್ರಗಳಿಂದ ಹಿಡಿದು
ಇಂದಿನ ಕ್ಯಾನ್ಸರ್ ಬಾಯಿ ತನಕದ
ಚಿತ್ರಗಳ ಪ್ಲಾಸ್ಟಿಕ್ ಗಳು
ಹಾಗೆ ಇದ್ದುವು..!

ಹೋದ ದಾರಿಗೆ ಸುಂಕ ಇಲ್ಲ
ಎಂಬಂತೆ ಸುಸ್ತಾಗಿ
ಕೂತಾಗ ಕುಂಡೆಗೆ ಚುಚ್ಚಿದಂತಾಗ
ನೆನಪಾದದ್ದು
ಹಿಂದಿನ ಕಿಸೆಯಲ್ಲಿ ಇಟ್ಟದ್ದು
ಆ ಕಿಸೆ ಬಿಟ್ಟು
ಬೇರೆ ಎಲ್ಲಾ ಕಡೆ ಹುಡುಕಿದ್ದು..

ಸಿಕ್ಕಿತು
ಮನೆಯ ಕೀ..
ಸಿಗಬಹುದೇ
ಪ್ಲಾಸ್ಟಿಕ್ ಬಂದ್ ಮಾಡುವ ಕೀ..!?

 

✍ಯತೀಶ್ ಕಾಮಾಜೆ

More from the blog

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...