Saturday, July 12, 2025

ಮಾಡರ್ನ್ ಕವನ – ಹಣ ಮತ್ತು ಹೆಣ

ಹಣ ಎಂದಾಗ
ಹೆಣನೂ ಬಾಯಿಬಿಟ್ಟಿತ್ತು,
ಭೂ ಲೋಕದಲ್ಲಿ..
ಉದಾಹರಣೆಗಳಿವೆ..!

ನಿನ್ನೆ ಉಸಿರು ಕಾಪಾಡುವ
ಮುಗಿಲೆತ್ತರಕ್ಕೆ ಬೆಳೆದ ಕಟ್ಟಡದಲ್ಲಿ
ಜೀವ ಮರಣದ ಮಧ್ಯೆ
ಒದ್ದಾಡುತ್ತಿರುವಾಗ
ಜೀವ ಉಳಿಸಲು
ಇಂತಿಷ್ಟು ರೇಟ್ ಫಿಕ್ಸ್ ಲಿಸ್ಟ್
ತೋರಿಸಲಾಯಿತು.,
ಆಯ್ಕೆ ನಿಮ್ಮದು..!
ಸತ್ತರೆ ಹಣ ಕಟ್ಟಿ ಹೆಣ
ಕೊಂಡು ಹೋಗಬೇಕು..
ಗ್ಯಾರಂಟಿ ಕೊಡಲ್ಲ..!

ಈಗ ಎಲ್ಲದಕ್ಕೂ ರೇಟ್ ಇದೆ
ತಿನ್ನೋ ಆಹಾರಕ್ಕೆ
ಕುಡಿಯುವ ನೀರಿಗೆ
ಮುಂದೆ ಗಾಳಿಗೂ ಬರಬಹುದು..
ನಿದ್ದೆಗೂ ರೇಟ್ ಫಿಕ್ಸ್ ಮಾಡಿದರೆ
ವಿಸ್ಮಯ ಅನ್ನಬೇಡಿ..
“ಇಲ್ಲಿ ಇಂತಿಷ್ಟು ಹಣಕ್ಕೆ
ನೆಮ್ಮದಿಯ ನಿದ್ದೆ ಭರಿಸಲಾಗುವುದು..”
ಬೋರ್ಡ್ ನೇತು ಹಾಕಬಹುದು
ಕೆಳಗೆ ಸಣ್ಣದಾಗಿ ಬರೆದಿರಬಹುದು
“ನಿಮ್ಮ ನಿಮ್ಮ ಬೆಲೆ ಬಾಳುವ ವಸ್ತುಗಳಿಗೆ
ನೀವೇ ಜವಾಬ್ದಾರರು”..!

ಹಣ ಒಂದಿದ್ದರೆ ಸಾಕು
ನಿಮ್ಮ ಸತ್ತ ಮುತ್ತಾತನನ್ನು
ಮಾತಾಡಿಸುತ್ತೇವೆ.!
ಅಲ್ಲಲ್ಲಿ ತಾತ ಮುತ್ತಾತನಲ್ಲಿ
ಮಾತಾಡಿಸಬಲ್ಲ ಮಾಂತ್ರಿಕರು
ಮುಂದೆ ಬರಬಹುದು..
ಅಲ್ಲಲ್ಲಿ ಜ್ಯೋತಿಷ್ಯಾಲಯ
ಇದ್ದ ಹಾಗೆ
ನಿಮ್ಮ ಕೈ ನೋಡಿ ಭವಿಷ್ಯ ಹೇಳ್ತೀವಿ ಹೇಳಿದಂತೆ
ನಿಮ್ಮ ತಾತ ಮುತ್ತಾತನ ಫೋಟೋ ತೋರಿಸಿ
ಅವರ ಜೊತೆ ಮಾತಾಡಿಸಿ ಕೊಡಲಾಗುವುದೆಂದು.,
ಅಡಿ ಬರಹಗಳಿರಬಹುದು..!?
“ಕಂಡಿಷನ್ಸ್ ಅಪ್ಲೈ”

ದುಡ್ಡು
ಹೆಚ್ಚಾಗಿದೆ..
ಮಾನವೀಯತೆಯನ್ನು ಕಳೆಯುವಷ್ಟು
ಅಹಂನನ್ನು ಹುಟ್ಟು ಹಾಕಿಸುವಷ್ಟು
ಸತ್ಯವನ್ನು ಸಾಯಿಸುವಷ್ಟು..!

ಎಷ್ಟೇ ಹಣ ಇದ್ದರೂ
ಹೆಣ ಆಗಲೇಬೇಕು…!

 

ಯತೀಶ್ ಕಾಮಾಜೆ

More from the blog

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...