Wednesday, February 12, 2025

ಮಾಡರ್ನ್ ಕವನ-ಹೊಸ ವರುಷ

ಕ್ಯಾಲೆಂಡರ್ ಬದಲಾಯಿಸಿದಾಗ
ಎರಡು ಮನೆಯಲ್ಲಾದ
ಘಟನೆ…?

ಒಂದು ಮನೆಯಲ್ಲಿ
ಅದೇ ಹಳೆ ಮೊಳೆಗೆ
ಜೋತು ಬಿದ್ದ ಕ್ಯಾಲೆಂಡರ್
ತೆಗೆದಾಗ
ಅದರಲ್ಲಿ ಸೂಜಿ ಕಂಡಿತು
ಆಗಲೇ ನೆನಪಾದದ್ದು..!
ಗಂಡನ ಅಂಗಿಯ ಬಟನ್ ಮತ್ತೆ
ಅಂಟಿಸಬೇಕಾದದ್ದು..
ಬೆನ್ನು ಹರಿದ ಮಗನ ಅಂಗಿಯ
ಜೋಡಿಸಬೇಕಾದದ್ದು..
ಮೈ ಕೈ ತುಂಬಿದ ಮಗಳ ಬಟ್ಟೆಯ
ಸ್ಟಿಚ್ ಬಿಡಿಸಬೇಕಾದದ್ದು..
ಜೊತೆಗೆ
ಶೆಟ್ಟರಂಗಡಿಯ ಸಾಲ ಹೊಸವರುಷಕ್ಕೆ
ತೀರಿಸುತ್ತೇನೆ ಅಂದದ್ದು..
ಮದುವೆ ಅನಿವರ್ಸರಿ ಮತ್ತೆ ಬಂದದ್ದು
ಎಲ್ಲವೂ ಮುಗಿಯಲಾರದ ಕಥೆಗಳು..!
ಹೊಸ ಕ್ಯಾಲೆಂಡರ್ ಗೆ
ಹಳೇ ಸೂಜಿ ಚುಚ್ಚಿಸಿ ನೇತು ಹಾಕಿದಳು..!

ಇನ್ನೊಂದು ಮನೆಯಲ್ಲಿ
ಈ ವರ್ಷ ಕ್ಯಾಲೆಂಡರ್ ಜಾಗವೇ
ಬದಲಾಯಿಸುವ ಬಯಕೆ
ಗಂಡನಿಕೆ ಸರ್ಪ್ರೈಸ್ ಗಿಪ್ಟ್ ಕೊಡುವ ಯೋಚನೆ
ಮಗನಿಗೆ ಕೇಳುತ್ತಿದ್ದ ಬೈಕ್ ನೀಡುವ ಯೋಜನೆ..
ಮಗಳಿಗೆ ಮಾಲ್ ನಲ್ಲಿ
ಹೊಸ ಡಿಸೈನ್
ಹೊಕ್ಕಳು ಕಾಣುವ
ಡ್ರೆಸ್ ಕೊಡಿಸುವ ಚಿಂತನೆ..
ಮನೆಯಲ್ಲೇ ಗುಂಡು ಪಾರ್ಟಿಯೋ
ರೆಸ್ಟೋರೆಂಟ್ ನಲ್ಲಿ ಆಚರಣೆಯೋ
ಅದೇ ಕನ್ಫ್ಯೂಸ್..
ಹೊಸ ಕ್ಯಾಲೆಂಡರ್ ಹೊಸ ಜಾಗಕ್ಕೆ
ನೇತು ಹಾಕಿದಳು..

ಆಚರಿಸಿ ನಿಮ್ಮ ಯೋಗ್ಯತೆಗೆ
ತಕ್ಕಂತೆ
ಏಕೆಂದರೆ ಇದು
ಕ್ಯಾಲೆಂಡರ್ ನ ಹೊಸ ವರ್ಷ..!

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...