Thursday, February 13, 2025

ಮಾಡರ್ನ್ ಕವನ-ಕಾರಣಗಳು

ಕಂಬನಿ ಸುರಿಸಿದ
ಕಾರಣಗಳು
ಒಂದಷ್ಟು ಇವೆ..
ಲೆಕ್ಕಕ್ಕೆ ಸಿಗದಷ್ಟು…!

ಆ ಬಿಗ್ ಬಜಾರ್
ಸಿಟಿ ಸೆಂಟರ್ ನ
ದ್ವಾರಪಾಲಕನಿಗೂ ನಾವು ಪರಿಚಯ
ಆಗಾಗ ಹೆಗಲ ಮೇಲೆ ಕೈ ಹಾಕಿ
ಹೋದ ದಿನಗಳಿಗೆ
ಲೆಕ್ಕ ಎಲ್ಲಿ ಹೇಳು..?
ದಿನ ನೋಡಿದವನಿಗೆ ಪರಚಯವಾಗದಿರುವುದೇ..?
ಇಂದು ನಾ ಒಬ್ಬನೇ ಹೋದಾಗ
ನಿನ್ನ ಹುಡುಕುತ್ತಿದ್ದಾನೆ..!
ನೆನೆದು ಕಣ್ಣೀರು
ಸುರಿಸದಿರಲಿ ಹೇಗೆ ಹೇಳು..?

ಆ ಕಡಲ ತೀರದಲ್ಲಿ
ಸಂಜೆಯ ಹೊತ್ತಲ್ಲಿ
ನಾ ಮರಳು ರಾಶಿಯಲ್ಲಿ
ಕೂತು
ನೀ ಕಡಲ ಅಲೆಯಲ್ಲಿ ಆಡುವುದ ನೋಡಿ
ನಗುತ್ತಿದ್ದೆ
ನೀನೊಂದು ಮಗುವಂತೆ ಕಾಣುತ್ತಿದ್ದೆ
ಬೊಗಸೆ ನೀರು ತಂದು
ನನ್ನ ಮುಖಕ್ಕೆ ಚೆಲ್ಲುತ್ತಿದ್ದೆ..!
ಇಂದು ನಾ ಒಬ್ಬಂಟಿಯಾಗಿ ದಡದಲ್ಲಿ ನಿಂತಾಗ
ಕಡಲಲಿ ನಿನ್ನ ಮೊಗದ ಚಿತ್ರ ತೇಲಿ ಬಂದಂತಾಗುತ್ತಿದೆ..!
ಕಣ್ಣೀರು ಹಾಗೆ ಕೆನ್ನೆಯಲಿ ಜಾರುತ್ತಿದೆ..!

ಉಳಿದಿರುವುದು
ಬರಿ ನೆನಪು ಕಣೇ
ಮತ್ತೆ ಮತ್ತೆ ಕಾಡುವ ನೆನಪು
“ಪ್ರೀತಿ ಎಂದರೆ ಮೋಸ”
ಎನ್ನುವ ಅರ್ಥಕ್ಕೆ ಬಂದುಬಿಟ್ಟೇ ಕಣೇ..

ಈ ಕಣ್ಣೀರಿಗೆ
ಕಾರಣ ನೀನು ಎಂದು ಹೇಳುವುದಿಲ್ಲ..
ಇದಕ್ಕೆಲ್ಲ ಕಾರಣ ಪ್ರೀತಿ..!
ಪ್ರೀತಿ ಎಂದರೆ ಕಣ್ಣೀರು…
ಕಣ್ಣೀರು ಎಂದರೆ ಪ್ರೀತಿ..!

 

✍ ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...