Wednesday, June 25, 2025

ಮಾಡರ್ನ್ ಕವನ-ಕಾರಣಗಳು

ಕಂಬನಿ ಸುರಿಸಿದ
ಕಾರಣಗಳು
ಒಂದಷ್ಟು ಇವೆ..
ಲೆಕ್ಕಕ್ಕೆ ಸಿಗದಷ್ಟು…!

ಆ ಬಿಗ್ ಬಜಾರ್
ಸಿಟಿ ಸೆಂಟರ್ ನ
ದ್ವಾರಪಾಲಕನಿಗೂ ನಾವು ಪರಿಚಯ
ಆಗಾಗ ಹೆಗಲ ಮೇಲೆ ಕೈ ಹಾಕಿ
ಹೋದ ದಿನಗಳಿಗೆ
ಲೆಕ್ಕ ಎಲ್ಲಿ ಹೇಳು..?
ದಿನ ನೋಡಿದವನಿಗೆ ಪರಚಯವಾಗದಿರುವುದೇ..?
ಇಂದು ನಾ ಒಬ್ಬನೇ ಹೋದಾಗ
ನಿನ್ನ ಹುಡುಕುತ್ತಿದ್ದಾನೆ..!
ನೆನೆದು ಕಣ್ಣೀರು
ಸುರಿಸದಿರಲಿ ಹೇಗೆ ಹೇಳು..?

ಆ ಕಡಲ ತೀರದಲ್ಲಿ
ಸಂಜೆಯ ಹೊತ್ತಲ್ಲಿ
ನಾ ಮರಳು ರಾಶಿಯಲ್ಲಿ
ಕೂತು
ನೀ ಕಡಲ ಅಲೆಯಲ್ಲಿ ಆಡುವುದ ನೋಡಿ
ನಗುತ್ತಿದ್ದೆ
ನೀನೊಂದು ಮಗುವಂತೆ ಕಾಣುತ್ತಿದ್ದೆ
ಬೊಗಸೆ ನೀರು ತಂದು
ನನ್ನ ಮುಖಕ್ಕೆ ಚೆಲ್ಲುತ್ತಿದ್ದೆ..!
ಇಂದು ನಾ ಒಬ್ಬಂಟಿಯಾಗಿ ದಡದಲ್ಲಿ ನಿಂತಾಗ
ಕಡಲಲಿ ನಿನ್ನ ಮೊಗದ ಚಿತ್ರ ತೇಲಿ ಬಂದಂತಾಗುತ್ತಿದೆ..!
ಕಣ್ಣೀರು ಹಾಗೆ ಕೆನ್ನೆಯಲಿ ಜಾರುತ್ತಿದೆ..!

ಉಳಿದಿರುವುದು
ಬರಿ ನೆನಪು ಕಣೇ
ಮತ್ತೆ ಮತ್ತೆ ಕಾಡುವ ನೆನಪು
“ಪ್ರೀತಿ ಎಂದರೆ ಮೋಸ”
ಎನ್ನುವ ಅರ್ಥಕ್ಕೆ ಬಂದುಬಿಟ್ಟೇ ಕಣೇ..

ಈ ಕಣ್ಣೀರಿಗೆ
ಕಾರಣ ನೀನು ಎಂದು ಹೇಳುವುದಿಲ್ಲ..
ಇದಕ್ಕೆಲ್ಲ ಕಾರಣ ಪ್ರೀತಿ..!
ಪ್ರೀತಿ ಎಂದರೆ ಕಣ್ಣೀರು…
ಕಣ್ಣೀರು ಎಂದರೆ ಪ್ರೀತಿ..!

 

✍ ಯತೀಶ್ ಕಾಮಾಜೆ

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...