Thursday, January 29, 2026

ಮಾಡರ್ನ್ ಕವನ- ಮುಖವಾಡ

ನಾನು
ಸಭ್ಯತೆ ಉಳ್ಳವನಂತೆ
ಕಾಣಬೇಕು
ಹೇಗೆ ತಿಳಿಸುವಿರಾ‌..!

ಕದ್ದು ತಿಂದದ್ದು
ತಲೆ ಒಡೆದು ಬದುಕಿದ್ದು
ಮೋಸ ಮಾಡುತ್ತ ಸಾಗಿದ್ದು
ಯಾವುದು ಗೊತ್ತಾಗಬಾರದು
ಅಂತಹ ಮುಖವಾಡ
ಇದ್ದರೆ ಹೇಳಿ
ನಿಮಗೊಂದಿಷ್ಟು ಪಾಲು ಕೊಡಲು
ಮರೆಯುವುದಿಲ್ಲ..
ನನ್ನ ಪಾಪ ಪುಣ್ಯದಲ್ಲಿ…!

ಬಡವನ ಹಸಿವಿನಲ್ಲಿ
ಹೆಣ್ಣಿನ ಕಣ್ಣೀರಿನಲ್ಲಿ
ನನ್ನ ಪಾಲಿರಬೇಕು
ನೆನೆದು ಗಹಿ ಗಹಿಸಿ ನಗಬೇಕು
ನಾನೇ ಕಾರಣವೆಂದು ಗೊತ್ತಾಗಬಾರದು
ಅಂತಹ ಉಡುಗೆ ತೊಡುಗೆ ಬೇಕು
ರಕ್ತದ ಕಳೆ ಅಂಟಬಾರದು
ಇದ್ದರೆ ತಿಳಿಸಿಕೊಡಿ
ಖಂಡಿತ ನಿಮಗೆ ಪಾಲು ಕೊಡುತ್ತೇನೆ
ಮಾಡಿದ ಕರ್ಮದಲ್ಲಿ

ನಾನು ಏನು ಮಾಡಿದರು
ಉಪಕಾರ ಮಾಡಿದವರನ್ನು
ಮರೆಯುವುದಿಲ್ಲ
ಸಭ್ಯನಾಗಿ ಕಾಣಲು
ಸಹಾಯ ಮಾಡಿದವರ
ಎಂದು ಮರೆಯುವುದಿಲ್ಲ…

ಏಕೆಂದರೆ
ನನಗೆ
ಸಭ್ಯತೆಯ ಮುಖವಾಡ ಬೇಕು
ಯಾರಲ್ಲಿ ಹೆಚ್ಚಿದೆ…!?

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...