Thursday, February 13, 2025

ಮಾಡರ್ನ್ ಕವನ ವೋಟ್ ಹಾಕ್ತಿರಲ್ವ

ವೋಟ್‌ಗೆ ನಿಲ್ಲಬೇಕೆಂದಿರುವೆ,
ನೀವು ಬೆಂಬಲ
ಕೊಡುವಿರೆನ್ನುವ
ಭರವಸೆಯ ಮೇಲೆ..!

ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ನಿಮ್ಮ ಮತಗಳಿಂದಲೇ
ತುಂಬಿಸ ಬೇಕೆಂದಿರುವೆ
ನೀವು ಜೈಕಾರ ಕೂಗಿ
ಮಾಲೆ ಹಾಕಿ
ನನ್ನ ಆಶ್ವಾಸನೆಗಳಿಗೆ ಕಿವಿಕೊಟ್ಟು,
ನಂಬಿ ಮತ ನೀಡಿ..

ನನಗೂ ಕೆಲವು ಆಸೆಗಳಿವೆ
ಒಂದೆರಡು ಮನೆ
ಒಂದಷ್ಟು ಸೈಟು
ನಾಲ್ಕೈದು ಕಾರು
ಹೀಗೆ ಸಣ್ಣ ಪುಟ್ಟ ಆಸೆಗಳು
ರಾಜಕೀಯದಲ್ಲಿ ಮಾತ್ರ ಇವುಗಳನ್ನು
ಸುಲಭವಾಗಿ ಖರೀದಿಸಬಹುದು
ಇಷ್ಟವರೆಗೆ ಬಂದವರಲ್ಲಿ
ಹೆಚ್ಚಿನವರು ಅದೇ ಮಾಡಿದ್ದು
ನನಗೂ ಒಂದು ಅವಕಾಶ ಕೊಡಿ..

ಆಗಾಗ ಬಜೆಟ್ ನಲ್ಲಿ
ನಿಮ್ಮ ಜಾತಿಗೊಂದಿಷ್ಟು
ನಿಮ್ಮ ಧರ್ಮಕೊಂದಿಷ್ಟು
ನಿಮ್ಮ ಊರಿಗೊಂದಿಷ್ಟು
ಸವಲತ್ತುಗಳನ್ನು ಘೋಷಣೆ ಮಾಡುತ್ತೇನೆ
ವಿಶ್ವ ಬ್ಯಾಂಕ್ ನಲ್ಲಿ
ವಿದೇಶಗಳಲ್ಲಿ ಸಾಲ ಮಾಡಿಯಾದರು
ದೇಶದಲ್ಲಿ ಒಂದಿಷ್ಟು ಕೆಲಸ ಮಾಡಿಸ್ತಿನಿ
ಒಂದಷ್ಟು ನನ್ನ ಕಿಸೆ ತುಂಬಿಸ್ತಿನಿ
ನನಗೊತ್ತು ನೀವು ಮಾತಾಡುವುದಿಲ್ಲ ಎಂದು
ನಾನು ನಿಮ್ಮವನು..!

ಹೊಸ ಹೊಸ ಯೋಜನೆಗಳು
ಹೊಸ ಹೊಸ ಸವಲತ್ತುಗಳು
ಎಲ್ಲಾ ನಿಮಗಾಗಿ
ಸ್ವಲ್ಪ ನನಗಾಗಿ
ನಿಮಗೊತ್ತು ನಾನು ಒಳ್ಳೆಯವನು
ಎಷ್ಟು ತಿಂದರು ಸ್ವಲ್ಪ
ನಿಮಗೆ ನೀಡುವವನು

ವೋಟ್ ಮಾಡ್ತಿರಲ್ವ
ನೆನಪಿಡಿ ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ಹಸಿದವರ ಹೊಟ್ಟೆ ಅಲ್ಲ….!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...