Saturday, July 5, 2025

ಮಾಡರ್ನ್ ಕವನ ವೋಟ್ ಹಾಕ್ತಿರಲ್ವ

ವೋಟ್‌ಗೆ ನಿಲ್ಲಬೇಕೆಂದಿರುವೆ,
ನೀವು ಬೆಂಬಲ
ಕೊಡುವಿರೆನ್ನುವ
ಭರವಸೆಯ ಮೇಲೆ..!

ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ನಿಮ್ಮ ಮತಗಳಿಂದಲೇ
ತುಂಬಿಸ ಬೇಕೆಂದಿರುವೆ
ನೀವು ಜೈಕಾರ ಕೂಗಿ
ಮಾಲೆ ಹಾಕಿ
ನನ್ನ ಆಶ್ವಾಸನೆಗಳಿಗೆ ಕಿವಿಕೊಟ್ಟು,
ನಂಬಿ ಮತ ನೀಡಿ..

ನನಗೂ ಕೆಲವು ಆಸೆಗಳಿವೆ
ಒಂದೆರಡು ಮನೆ
ಒಂದಷ್ಟು ಸೈಟು
ನಾಲ್ಕೈದು ಕಾರು
ಹೀಗೆ ಸಣ್ಣ ಪುಟ್ಟ ಆಸೆಗಳು
ರಾಜಕೀಯದಲ್ಲಿ ಮಾತ್ರ ಇವುಗಳನ್ನು
ಸುಲಭವಾಗಿ ಖರೀದಿಸಬಹುದು
ಇಷ್ಟವರೆಗೆ ಬಂದವರಲ್ಲಿ
ಹೆಚ್ಚಿನವರು ಅದೇ ಮಾಡಿದ್ದು
ನನಗೂ ಒಂದು ಅವಕಾಶ ಕೊಡಿ..

ಆಗಾಗ ಬಜೆಟ್ ನಲ್ಲಿ
ನಿಮ್ಮ ಜಾತಿಗೊಂದಿಷ್ಟು
ನಿಮ್ಮ ಧರ್ಮಕೊಂದಿಷ್ಟು
ನಿಮ್ಮ ಊರಿಗೊಂದಿಷ್ಟು
ಸವಲತ್ತುಗಳನ್ನು ಘೋಷಣೆ ಮಾಡುತ್ತೇನೆ
ವಿಶ್ವ ಬ್ಯಾಂಕ್ ನಲ್ಲಿ
ವಿದೇಶಗಳಲ್ಲಿ ಸಾಲ ಮಾಡಿಯಾದರು
ದೇಶದಲ್ಲಿ ಒಂದಿಷ್ಟು ಕೆಲಸ ಮಾಡಿಸ್ತಿನಿ
ಒಂದಷ್ಟು ನನ್ನ ಕಿಸೆ ತುಂಬಿಸ್ತಿನಿ
ನನಗೊತ್ತು ನೀವು ಮಾತಾಡುವುದಿಲ್ಲ ಎಂದು
ನಾನು ನಿಮ್ಮವನು..!

ಹೊಸ ಹೊಸ ಯೋಜನೆಗಳು
ಹೊಸ ಹೊಸ ಸವಲತ್ತುಗಳು
ಎಲ್ಲಾ ನಿಮಗಾಗಿ
ಸ್ವಲ್ಪ ನನಗಾಗಿ
ನಿಮಗೊತ್ತು ನಾನು ಒಳ್ಳೆಯವನು
ಎಷ್ಟು ತಿಂದರು ಸ್ವಲ್ಪ
ನಿಮಗೆ ನೀಡುವವನು

ವೋಟ್ ಮಾಡ್ತಿರಲ್ವ
ನೆನಪಿಡಿ ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ಹಸಿದವರ ಹೊಟ್ಟೆ ಅಲ್ಲ….!

 

✍ಯತೀಶ್ ಕಾಮಾಜೆ

More from the blog

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...

ಜು.06ರಂದು ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದೇರುಗಳ ಗರಡಿ ಕುತ್ತಿಲ ವಠಾರದಲ್ಲಿ “ಕೆಸರ್ ಡ್ ಒಂಜಿ ದಿನ” ಕಾರ್ಯಕ್ರಮ

ಬಂಟ್ವಾಳ : ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದೇರುಗಳ ಗರಡಿ ಕುತ್ತಿಲ ಇದರ ವಠಾರದಲ್ಲಿ ಜು.06 ಆದಿತ್ಯವಾರದಂದು "ಕೆಸರ್ ಡ್ ಒಂಜಿ ದಿನ" ಕಾರ್ಯಕ್ರಮ ನಡೆಯಲಿದೆ. ದಿ| ರತ್ನಾಕರ ಕರ್ಕೇರ ಕುಟುಂಬ ಟ್ರಸ್ಟ್ (ರಿ.) ಕುತ್ತಿಲಗುತ್ತು, ಶ್ರೀರಾಮಾಂಜನೇಯ...

Rain Alert : ಕರಾವಳಿಯಲ್ಲಿ ಮುಂದುವರಿದ ಮಳೆ ಅಬ್ಬರ – ಎರಡು ದಿನ ಆರೆಂಜ್ ಅಲರ್ಟ್..

ಮಂಗಳೂರು : ಇನ್ನೂ 2 ದಿನ ರಾಜ್ಯದಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯ ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ...

ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ: ಬೇಬಿ ಕುಂದರ್….

ಬಂಟ್ವಾಳ : ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಜನರ ಸಮಸ್ಯೆ ಪರಿಹಾರ ಮಾಡುತ್ತೇನೆ, ಭ್ರಷ್ಟಾಚಾರ ರಹಿತ ಕೆಲಸಕ್ಕೆ ಒತ್ತು ನೀಡುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ‌ಕುಂದರ್ ತಿಳಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದ...