Tuesday, January 27, 2026

ಮಾಡರ್ನ್ ಕವನ ವೋಟ್ ಹಾಕ್ತಿರಲ್ವ

ವೋಟ್‌ಗೆ ನಿಲ್ಲಬೇಕೆಂದಿರುವೆ,
ನೀವು ಬೆಂಬಲ
ಕೊಡುವಿರೆನ್ನುವ
ಭರವಸೆಯ ಮೇಲೆ..!

ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ನಿಮ್ಮ ಮತಗಳಿಂದಲೇ
ತುಂಬಿಸ ಬೇಕೆಂದಿರುವೆ
ನೀವು ಜೈಕಾರ ಕೂಗಿ
ಮಾಲೆ ಹಾಕಿ
ನನ್ನ ಆಶ್ವಾಸನೆಗಳಿಗೆ ಕಿವಿಕೊಟ್ಟು,
ನಂಬಿ ಮತ ನೀಡಿ..

ನನಗೂ ಕೆಲವು ಆಸೆಗಳಿವೆ
ಒಂದೆರಡು ಮನೆ
ಒಂದಷ್ಟು ಸೈಟು
ನಾಲ್ಕೈದು ಕಾರು
ಹೀಗೆ ಸಣ್ಣ ಪುಟ್ಟ ಆಸೆಗಳು
ರಾಜಕೀಯದಲ್ಲಿ ಮಾತ್ರ ಇವುಗಳನ್ನು
ಸುಲಭವಾಗಿ ಖರೀದಿಸಬಹುದು
ಇಷ್ಟವರೆಗೆ ಬಂದವರಲ್ಲಿ
ಹೆಚ್ಚಿನವರು ಅದೇ ಮಾಡಿದ್ದು
ನನಗೂ ಒಂದು ಅವಕಾಶ ಕೊಡಿ..

ಆಗಾಗ ಬಜೆಟ್ ನಲ್ಲಿ
ನಿಮ್ಮ ಜಾತಿಗೊಂದಿಷ್ಟು
ನಿಮ್ಮ ಧರ್ಮಕೊಂದಿಷ್ಟು
ನಿಮ್ಮ ಊರಿಗೊಂದಿಷ್ಟು
ಸವಲತ್ತುಗಳನ್ನು ಘೋಷಣೆ ಮಾಡುತ್ತೇನೆ
ವಿಶ್ವ ಬ್ಯಾಂಕ್ ನಲ್ಲಿ
ವಿದೇಶಗಳಲ್ಲಿ ಸಾಲ ಮಾಡಿಯಾದರು
ದೇಶದಲ್ಲಿ ಒಂದಿಷ್ಟು ಕೆಲಸ ಮಾಡಿಸ್ತಿನಿ
ಒಂದಷ್ಟು ನನ್ನ ಕಿಸೆ ತುಂಬಿಸ್ತಿನಿ
ನನಗೊತ್ತು ನೀವು ಮಾತಾಡುವುದಿಲ್ಲ ಎಂದು
ನಾನು ನಿಮ್ಮವನು..!

ಹೊಸ ಹೊಸ ಯೋಜನೆಗಳು
ಹೊಸ ಹೊಸ ಸವಲತ್ತುಗಳು
ಎಲ್ಲಾ ನಿಮಗಾಗಿ
ಸ್ವಲ್ಪ ನನಗಾಗಿ
ನಿಮಗೊತ್ತು ನಾನು ಒಳ್ಳೆಯವನು
ಎಷ್ಟು ತಿಂದರು ಸ್ವಲ್ಪ
ನಿಮಗೆ ನೀಡುವವನು

ವೋಟ್ ಮಾಡ್ತಿರಲ್ವ
ನೆನಪಿಡಿ ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ಹಸಿದವರ ಹೊಟ್ಟೆ ಅಲ್ಲ….!

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...