Friday, January 30, 2026

ಮಾಡರ್ನ್‌ ಕವನ ಕಲಿತದ್ದು ಹೆಚ್ಚಾಗಿ

ಚಕ್ರ ಕಂಡು ಹಿಡಿದಲ್ಲಿಂದ
ಮಂಗಳನ ಅಂಗಳಕ್ಕೆ
ಹೋದ
ಕಥೆ ಇದು..!

ಚಡ್ಡಿ ಇಲ್ದೆ ಓಡಾಡುತ್ತಿದ್ದವನಿಗೆ
ಸೊಂಟಕ್ಕೆ ಅಡ್ಡ ಕಟ್ಡಿಕೊಂಡಾಗ
ನಾಚಿಕೆ ಶುರುವಾಯ್ತು
ಬರಿ ಕಾಲಲ್ಲೇ ಓಡಾಡಿದವನಿಗೆ
ಚಕ್ರ ಕಂಡು ಹಿಡಿದಾಗ
ಅಹಂ ಹುಟ್ಟಿಕೊಂಡಿತು
ಅಲ್ಲಿ ವರೆಗೂ ಕಾಡು ಪ್ರಾಣಿ
ನಾನು ಒಂದೇ ಎಂದು ತಿಳಿದಿದ್ದ…!!

ಒಂದೊಂದು ಗೆರೆ ಎಳೆದವನು
ಅಕ್ಷರ ಸೃಷ್ಟಿಸಿದ,
ಬದುಕಿಗೊಂದು ಅಧ್ಯಯನ
ಬೇಕೆಂದ..
ಅಧ್ಯಯನ ಮಾಡದ ಯಾವ ಪ್ರಾಣಿಯು
ನಾಶವಾಗಲಿಲ್ಲ..!!

ದಿನ ಹೋದಂತೆ ಬುದ್ದಿವಂತ ಎನಿಸಿಕೊಂಡ
ಕೊಟ್ಟು ತೆಗೆದು ಕೊಳ್ಳುವ ಮನುಷ್ಯ
ಸಂಪಾದಿಸಲು ಕಲಿತ
ಹಣದ ಹಿಂದೆ ಬಿದ್ದ
ಶ್ರೀಮಂತ ಅನಿಸಿಕೊಳ್ಳುವ
ಚಟಕ್ಕೆ ಬಿದ್ದ..
ನೆಮ್ಮದಿಗೆ ಅವನ ಕಾಲಿಂದಲೇ
ಜಾಡಿಸಿ ಒದ್ದ.!

ಭೂಮಿಯೆಲ್ಲ ಅದೇನು ಹುಡುಕಾಡಿದ.
ಸಂಶೋಧನೆ ಹೆಸರಲ್ಲಿ
ತನ್ನ ಹೆಸರು ಬರೆದಿಟ್ಟ
ನೆಲ ಅಗೆದು ನೋಡಿದ
ಪಾತಾಳ ಇಣುಕಿ ನೋಡಿದ
ಸಮುದ್ರವ ಇಳಿದು ನೋಡಿದ
ಆದರು ತೃಪ್ತಿ ಇಲ್ಲ
ಆಕಾಶ ನೋಡಿದ..!

ಆಕಾಶಕ್ಕೆತ್ತರಕ್ಕೆ ಜಿಗಿದು ಬಿಟ್ಟ
ಬಾಹ್ಯಾಕಾಶಕ್ಕೆ ಕಣ್ಣು ಹಾಯಿಸಿದ
ಕೊನೆಗೆ ಬಾಹ್ಯಾಕಾಶಕ್ಕೆ ನಡೆದೇ ಬಿಟ್ಟ
ಚಂದ್ರನ ತುಳಿದು ಬಿಟ್ಟ
ಮಂಗಳನ ಅಂಗಳಕ್ಕೂ ಕಾಲಿರಿಸಿಯೇ ಬಿಟ್ಟ…

ಬುದ್ದಿವಂತನಂತೆ ಇವನು
ಪುಸ್ತಕದ ಬದನೆಕಾಯಿ ಓದಿಕೊಂಡು..
ನಿನ್ನೆ ಹುಟ್ಟಿದ ಬೆಕ್ಕುಮರಿಗೆ
ಮೀನಿನ ಪರಿಚಯ ಇತ್ತು
ಯಾವ ಅಧ್ಯಯನ ಇತ್ತದಕ್ಕೆ

ಜೀವನದ ಪಾಠವೇ
ಬೇರೆ
ಇನ್ನೂ ಅಧ್ಯಯನ ಮಾಡಲಿಲ್ಲ…!

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...