Thursday, February 13, 2025

ಮಾಡರ್ನ್ ಕವನ – ಟೈಮಿಂಗ್ಸ್

ಸಮಯದ ಹಿಂದೆ
ಓಡುವ
ಕಾಲದ ಸುತ್ತ…!?
ಅಲಾರಾಮ್ ಇಲ್ಲದ ಕಾಲವದು..
ಸೂರ್ಯನ ಚಲನೆಯನ್ನೇ ನೋಡಿ
ಸಮಯ ಹೇಳುತ್ತಿದ್ದರು.
ಕೋಳಿ ಕೂಗಿದಾಗಲೇ ಮುಂಜಾನೆ!
ಮುಂಜಾನೆ ಎದ್ದು
ಕೈ ಕೆಸರು ಮಾಡಿ
ತೃಪ್ತಿಕರವಾಗಿ ಉಣ್ಣುತ್ತಿದ್ದರು..
ನೆಮ್ಮದಿಯಾಗಿ ನಿದ್ದೆ ಮಾಡ್ತಿದ್ರು..
ಜೊತೆಯಾಗಿ ಬಾಳುತ್ತಿದ್ದರು.,
ಸಂಬಂಧಗಳಿಗೊಂದಿಷ್ಟು ಸಮಯ ಕೊಡ್ತಿದ್ರು..
ನಾನು ಅನ್ನುವುದಕ್ಕಿಂತ ಹೆಚ್ಚಾಗಿ ನಾವು ಅಂದವರು..!
ಬೆಳಗ್ಗೆ ಎದ್ಹೇಳಲು ಅಲಾರಾಮ್
ಇಡುವ ಕಾಲವಿದು.
ಎಲ್ಲದಕ್ಕೂ ಟೈಮಿಂಗ್ಸ್ ಇದೆ.,
ಊಟಕ್ಕೆ ,ನಿದ್ದೆಗೆ ,ಆಟಕ್ಕೆ, ಮಾತಿಗೆ,ಪ್ರೀತಿಗೆ..!
ಟೈಮ್ ಸೆನ್ಸ್ ಇಲ್ಲದವನು ಮನುಷ್ಯನಾಗಲ್ಲ!
ಒಮ್ಮೆ ದುಡ್ಡಿನ ಹಿಂದೆ
ಇನ್ನೊಮ್ಮೆ ನೆಮ್ಮದಿಯ ಹಿಂದೆ
ಓಡಿ ಓಡಿ ಹಿಂತಿರುಗಿದಾಗ
ಟೈಮ್ ಮಾತ್ರ ಕೈ ಕೊಟ್ಟಿರುತ್ತೆ..!
ರಾತ್ರಿಯನ್ನು ಹಗಲು ಮಾಡಿದ ಕಾಲದಲ್ಲಿ
ನಿದ್ದೆಯ ಟೈಮೇ ಗೊತ್ತಿಲ್ಲ,
ಊಟಕ್ಕೆ ಟೈಮೇ ಇಲ್ಲ.
ಬ್ಯಾಂಕ್ ತುಂಬಾ ಹಣ,
ಮೈ ತುಂಬಾ ಬಂಗಾರ,
ಮನೆ ತುಂಬಾ ಮೌನ….!
ಹೌದು ಮಾತುಗಳು ಹರಟೆಗಳು
ಮಾಡುವವರು
ನಾನ್‌ಸೆನ್ಸ್ ಪಿಪಲ್ ಗಳು
ಟೈಮ್ ಸೆನ್ಸ್ ಜೀವನದಲ್ಲಿ ಅತೀ ಮುಖ್ಯ
ಆದರೂ ಟೈಮ್ ಇಲ್ಲ ಯಾರಲ್ಲೂ
ಸೂರ್ಯ ಚಂದ್ರನಷ್ಟು
ಟೈಮ್ ಸೆನ್ಸ್ ಯಾರಿಗಿಲ್ಲ…!
✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...