Tuesday, January 27, 2026

ಮಾಡರ್ನ್ ಕವನ – ಟೈಮಿಂಗ್ಸ್

ಸಮಯದ ಹಿಂದೆ
ಓಡುವ
ಕಾಲದ ಸುತ್ತ…!?
ಅಲಾರಾಮ್ ಇಲ್ಲದ ಕಾಲವದು..
ಸೂರ್ಯನ ಚಲನೆಯನ್ನೇ ನೋಡಿ
ಸಮಯ ಹೇಳುತ್ತಿದ್ದರು.
ಕೋಳಿ ಕೂಗಿದಾಗಲೇ ಮುಂಜಾನೆ!
ಮುಂಜಾನೆ ಎದ್ದು
ಕೈ ಕೆಸರು ಮಾಡಿ
ತೃಪ್ತಿಕರವಾಗಿ ಉಣ್ಣುತ್ತಿದ್ದರು..
ನೆಮ್ಮದಿಯಾಗಿ ನಿದ್ದೆ ಮಾಡ್ತಿದ್ರು..
ಜೊತೆಯಾಗಿ ಬಾಳುತ್ತಿದ್ದರು.,
ಸಂಬಂಧಗಳಿಗೊಂದಿಷ್ಟು ಸಮಯ ಕೊಡ್ತಿದ್ರು..
ನಾನು ಅನ್ನುವುದಕ್ಕಿಂತ ಹೆಚ್ಚಾಗಿ ನಾವು ಅಂದವರು..!
ಬೆಳಗ್ಗೆ ಎದ್ಹೇಳಲು ಅಲಾರಾಮ್
ಇಡುವ ಕಾಲವಿದು.
ಎಲ್ಲದಕ್ಕೂ ಟೈಮಿಂಗ್ಸ್ ಇದೆ.,
ಊಟಕ್ಕೆ ,ನಿದ್ದೆಗೆ ,ಆಟಕ್ಕೆ, ಮಾತಿಗೆ,ಪ್ರೀತಿಗೆ..!
ಟೈಮ್ ಸೆನ್ಸ್ ಇಲ್ಲದವನು ಮನುಷ್ಯನಾಗಲ್ಲ!
ಒಮ್ಮೆ ದುಡ್ಡಿನ ಹಿಂದೆ
ಇನ್ನೊಮ್ಮೆ ನೆಮ್ಮದಿಯ ಹಿಂದೆ
ಓಡಿ ಓಡಿ ಹಿಂತಿರುಗಿದಾಗ
ಟೈಮ್ ಮಾತ್ರ ಕೈ ಕೊಟ್ಟಿರುತ್ತೆ..!
ರಾತ್ರಿಯನ್ನು ಹಗಲು ಮಾಡಿದ ಕಾಲದಲ್ಲಿ
ನಿದ್ದೆಯ ಟೈಮೇ ಗೊತ್ತಿಲ್ಲ,
ಊಟಕ್ಕೆ ಟೈಮೇ ಇಲ್ಲ.
ಬ್ಯಾಂಕ್ ತುಂಬಾ ಹಣ,
ಮೈ ತುಂಬಾ ಬಂಗಾರ,
ಮನೆ ತುಂಬಾ ಮೌನ….!
ಹೌದು ಮಾತುಗಳು ಹರಟೆಗಳು
ಮಾಡುವವರು
ನಾನ್‌ಸೆನ್ಸ್ ಪಿಪಲ್ ಗಳು
ಟೈಮ್ ಸೆನ್ಸ್ ಜೀವನದಲ್ಲಿ ಅತೀ ಮುಖ್ಯ
ಆದರೂ ಟೈಮ್ ಇಲ್ಲ ಯಾರಲ್ಲೂ
ಸೂರ್ಯ ಚಂದ್ರನಷ್ಟು
ಟೈಮ್ ಸೆನ್ಸ್ ಯಾರಿಗಿಲ್ಲ…!
✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...