Wednesday, February 12, 2025

ಮಾಡರ್ನ್ ಕವನ – ಬದಲಾವಣೆ

ಈಗೀಗ
ಕೈ ಬೆರಳುಗಳೇ
ಹೆಚ್ಚು ಮಾತಾಡುತ್ತಿತ್ತು
ಧ್ವನಿಯ ಪ್ರಾಮುಖ್ಯತೆ ಕಳೆದು ಕೊಂಡಿತ್ತು..!!
ನಿನಗೆ ಎರಡು ನಾಲಿಗೆ ಎನ್ನುವಂತಿಲ್ಲ
ಯಾಕೆಂದರೆ ಮಾತಾಡುತ್ತಿರುವುದು ಹತ್ತು ಬೆರಳುಗಳು..!!

ಮನೆಯ ಸಾಮಾನುಗಳಿಗೆ
ಅದಾಗಲೇ ಆನ್ ಲೈನ್ ಸಹಕರಿಸುತ್ತಿತ್ತು
ಒಂದೇ ಒಂದು ಆರ್ಡರ್ ಕೊಟ್ಟರೆ ಸಾಕು..
ಬೆರಳ ತುದಿಯಲ್ಲಿ..
ಸೊಂಟದ ,ಎದೆಯ ಸೈಜ್ ಗೊತ್ತಿರಬೇಕಷ್ಟೇ
ನಿಕ್ಕರ್ ನಿಂದ ಹಿಡಿದು ಹೊದಿಕೆವರೆಗೆ
ಆರ್ಡರ್ ಕೊಡಬಹುದು..!
ಅಪ್ಪ ಮನೆ ಮುಟ್ಟುವ ಮೊದಲೇ
ಮೆಸೇಜ್ ಹೋಗುತ್ತಿತ್ತು
ಅರ್ಜೆಂಟಾಗಿ ಹಾಲು
ಫ್ರೆಶ್ ಆಗಿ ಮೀನು..
ಬೇಕೆಂದು..
ಬೇರೆ ಎಲ್ಲಾ ಆನ್ ಲೈನ್ ನಲ್ಲಿ..!

ಟೀಚರ್ ಈಗ ಗಂಟಲು ಹರಿಯುವಂತೆ
ಪಾಠ ಮಾಡುತ್ತಿಲ್ಲ..!
ಎಲ್ಲರ ಕೈಯಲ್ಲಿ ಟ್ಯಾಬ್ ಇದೆ.
ಕರಿ ಬೋರ್ಡ್ ಬದಲು
ಸ್ಮಾರ್ಟ್ ಬೋರ್ಡ್ ಬಂದಿದೆ.
ಟೀಚರಮ್ಮ ಕೈಯಾಡಿಸಿದರೆ ಸಾಕು
ಚಿತ್ರಗಳು ತೆರೆಯುತ್ತದೆ,
ಅವುಗಳೇ ವಿವರಣೆ ಕೊಡುತ್ತದೆ.
ಗುರು ಶಿಷ್ಯರ ಮಧ್ಯೆ ಸಣ್ಣಗೆ ನಗು ಬಿಟ್ಟರೆ
ಮಾತುಕಥೆ ಗಳಿಲ್ಲ..!
ರಜೆ ಬೇಕಾದರೆ ರಜಾ ಅರ್ಜಿ ಸಲ್ಲಿಸಲು
ನಡುಗುತ್ತ ಆಫೀಸ್ ರೂಮ್ ಕಾಲಿಡಲಿಲ್ಲ..
ಒಂದೇ ಒಂದು ಮೆಸೇಜ್ ಸಾಕು
ಅದಕ್ಕೂ ಅಪ್ಲಿಕೇಶನ್ ಇದೆ..!

ಅಪ್ಪ ಅಮ್ಮನದೊಂದು ರೂಮ್
ಮಗನೊಂದು ರೂಮ್
ಇವರ ಮಧ್ಯೆ ಒಂದೊಂದು ಮಾತು
ಮೆಸೇಜ್ ರೂಪದಲ್ಲಿ
ಅಸಲಿಗೆ ಮಗನಿಗೆ ಅಪ್ಪನ
ಗಡಸು ಧ್ವನಿಯ ಪರಿಚಯವೇ ಇರಲಿಲ್ಲ..!
ಅಮ್ಮನ ಮಮತೆಯ ಸ್ವರವು ತಿಳಿದೇ ಇಲ್ಲ..!

ವಿಷದ ಬಾಟಲಿ
ಹತ್ತಿರ ಹಿಡಿದು ಸೆಲ್ಫಿ ಹಾಕಿ
ಸ್ಟೇಟಸ್ ನಲ್ಲೊಂದು ಲೈನ್
ಅದೇ ಹಳೆಯ ಗೆರೆ
“ನನ್ನ ಸಾವಿಗೆ ನಾನೇ ಕಾರಣ”

ಪುಣ್ಯ
ಸಾವೊಂದು ಬದಲಾಗಲಿಲ್ಲ…!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...