Thursday, July 10, 2025

ಮಾಡರ್ನ್ ಕವನ – ಬದಲಾವಣೆ

ಈಗೀಗ
ಕೈ ಬೆರಳುಗಳೇ
ಹೆಚ್ಚು ಮಾತಾಡುತ್ತಿತ್ತು
ಧ್ವನಿಯ ಪ್ರಾಮುಖ್ಯತೆ ಕಳೆದು ಕೊಂಡಿತ್ತು..!!
ನಿನಗೆ ಎರಡು ನಾಲಿಗೆ ಎನ್ನುವಂತಿಲ್ಲ
ಯಾಕೆಂದರೆ ಮಾತಾಡುತ್ತಿರುವುದು ಹತ್ತು ಬೆರಳುಗಳು..!!

ಮನೆಯ ಸಾಮಾನುಗಳಿಗೆ
ಅದಾಗಲೇ ಆನ್ ಲೈನ್ ಸಹಕರಿಸುತ್ತಿತ್ತು
ಒಂದೇ ಒಂದು ಆರ್ಡರ್ ಕೊಟ್ಟರೆ ಸಾಕು..
ಬೆರಳ ತುದಿಯಲ್ಲಿ..
ಸೊಂಟದ ,ಎದೆಯ ಸೈಜ್ ಗೊತ್ತಿರಬೇಕಷ್ಟೇ
ನಿಕ್ಕರ್ ನಿಂದ ಹಿಡಿದು ಹೊದಿಕೆವರೆಗೆ
ಆರ್ಡರ್ ಕೊಡಬಹುದು..!
ಅಪ್ಪ ಮನೆ ಮುಟ್ಟುವ ಮೊದಲೇ
ಮೆಸೇಜ್ ಹೋಗುತ್ತಿತ್ತು
ಅರ್ಜೆಂಟಾಗಿ ಹಾಲು
ಫ್ರೆಶ್ ಆಗಿ ಮೀನು..
ಬೇಕೆಂದು..
ಬೇರೆ ಎಲ್ಲಾ ಆನ್ ಲೈನ್ ನಲ್ಲಿ..!

ಟೀಚರ್ ಈಗ ಗಂಟಲು ಹರಿಯುವಂತೆ
ಪಾಠ ಮಾಡುತ್ತಿಲ್ಲ..!
ಎಲ್ಲರ ಕೈಯಲ್ಲಿ ಟ್ಯಾಬ್ ಇದೆ.
ಕರಿ ಬೋರ್ಡ್ ಬದಲು
ಸ್ಮಾರ್ಟ್ ಬೋರ್ಡ್ ಬಂದಿದೆ.
ಟೀಚರಮ್ಮ ಕೈಯಾಡಿಸಿದರೆ ಸಾಕು
ಚಿತ್ರಗಳು ತೆರೆಯುತ್ತದೆ,
ಅವುಗಳೇ ವಿವರಣೆ ಕೊಡುತ್ತದೆ.
ಗುರು ಶಿಷ್ಯರ ಮಧ್ಯೆ ಸಣ್ಣಗೆ ನಗು ಬಿಟ್ಟರೆ
ಮಾತುಕಥೆ ಗಳಿಲ್ಲ..!
ರಜೆ ಬೇಕಾದರೆ ರಜಾ ಅರ್ಜಿ ಸಲ್ಲಿಸಲು
ನಡುಗುತ್ತ ಆಫೀಸ್ ರೂಮ್ ಕಾಲಿಡಲಿಲ್ಲ..
ಒಂದೇ ಒಂದು ಮೆಸೇಜ್ ಸಾಕು
ಅದಕ್ಕೂ ಅಪ್ಲಿಕೇಶನ್ ಇದೆ..!

ಅಪ್ಪ ಅಮ್ಮನದೊಂದು ರೂಮ್
ಮಗನೊಂದು ರೂಮ್
ಇವರ ಮಧ್ಯೆ ಒಂದೊಂದು ಮಾತು
ಮೆಸೇಜ್ ರೂಪದಲ್ಲಿ
ಅಸಲಿಗೆ ಮಗನಿಗೆ ಅಪ್ಪನ
ಗಡಸು ಧ್ವನಿಯ ಪರಿಚಯವೇ ಇರಲಿಲ್ಲ..!
ಅಮ್ಮನ ಮಮತೆಯ ಸ್ವರವು ತಿಳಿದೇ ಇಲ್ಲ..!

ವಿಷದ ಬಾಟಲಿ
ಹತ್ತಿರ ಹಿಡಿದು ಸೆಲ್ಫಿ ಹಾಕಿ
ಸ್ಟೇಟಸ್ ನಲ್ಲೊಂದು ಲೈನ್
ಅದೇ ಹಳೆಯ ಗೆರೆ
“ನನ್ನ ಸಾವಿಗೆ ನಾನೇ ಕಾರಣ”

ಪುಣ್ಯ
ಸಾವೊಂದು ಬದಲಾಗಲಿಲ್ಲ…!

 

✍ಯತೀಶ್ ಕಾಮಾಜೆ

More from the blog

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...