Tuesday, January 27, 2026

ಪ್ರಶ್ನೆಗಳು

ಗಡ ಗಡ ನಡುಗುವ ಚಳಿಯಲಿ
ಬಿಗಿದಪ್ಪಿದವಳು ನೀನೇ ಚೆಲುವೆ
ಪ್ರಶ್ನೆ ಹುಟ್ಟಿದ್ದೆ ಆವಾಗ.

ಕಲ್ಲು ಬಂಡೆಯ ತುತ್ತ ತುದಿಯಲಿ
ನಿಂತು ನಿನ್ನ ಹೆಸರ ಕೂಗಿದ್ದೆ
ಬೆಟ್ಟ ಗುಡ್ಡವೇ ನಕ್ಕಿತ್ತು ನೋಡು
ಪ್ರಶ್ನೆ ಹುಟ್ಟಿದ್ದೆ ಆವಾಗ

ಅಡ್ಡ ಮರದಲಿ ಕೆತ್ತಿ ಬಿಟ್ಟೆ
ನಿನ್ನ ನನ್ನ ಹೆಸರ ಚೆಲುವೆ
ಮರವೇ ಬಿದ್ದು ಬಿಟ್ಟಿತು ನೋಡು
ಪ್ರಶ್ನೆ ಹುಟ್ಟಿದೆ ಆವಾಗ

ಗುಡಿಯ ಗಂಟೆ ಬಾರಿಸಿ ಮುಗಿದೆ
ನೀನೆ ಎದೆಯ ರಾಣಿ ಆಗಲಿ ಎಂದಾಗ
ಕದವ ಮುಚ್ಚಿ ಬಿಟ್ಟ ಪೂಜಾರಿ
ಪ್ರಶ್ನೆ ಹುಟ್ಟಿದ್ದೆ ಅವಾಗ

ಪ್ರೀತಿ ಎಂದರೇನು ಗೆಳತಿ
ಬಿಗಿದಪ್ಪಿದರೆ ಪ್ರೀತಿಯೇ ಹೇಳು
ಜಗತ್ತೇ ಕೇಳುವ ಹಾಗೆ ಕೂಗಿದರೆ
ಇರುವುದೇ ಪ್ರೀತಿಯ ಬಾಳು

ಎದೆಯಲಿ ಹಚ್ಚೆ ಹಾಕಿದರೆ
ಮೂಡುವುದೇ ಪ್ರೀತಿಯ ಸಾಲು
ಗುಡಿಯಲಿ ಹರಕೆ ಹೊತ್ತರೆ
ಉಳಿಯುವುದೇ ಪ್ರೀತಿಯ ಅಮಲು
ಪ್ರಶ್ನೆಗಳು ಹುಟ್ಟಿವೆ ಇವಾಗ..

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...