Monday, January 26, 2026

ಮಾಡರ್ನ್ ಕವನ- ಮಿಂಚುಹುಳ

ಕತ್ತಲಲ್ಲಿ
ಬೆಳಕು ಹೊತ್ತ
ಮಿಂಚುಹುಳಕ್ಕೆ
ಇತ್ತೊಂದಿಷ್ಟು ಜಂಬ

ದಾರಿ ಹುಡುಕಿ
ಕುಂಡೆಯಲ್ಲೇ ಲೈಟ್ ಉರಿಸಿ
ಸಾಗುತ್ತಿದ್ದವು ಗುಂಪು ಗುಂಪಾಗಿ
ಆ ಮಿಂಚು ಹುಳುಗಳು
ಕತ್ತಲೆಯಲ್ಲಿ ಬೆಳಕಿನ ಹಂಗು
ನಮಗಿಲ್ಲೆಂಬ ಜಂಬದಿ

ಕಾಡೆಲ್ಲ ನಾಡಾದಾಗ
ಊರೆಲ್ಲ ದೀಪ ಬಂದಾಗ
ತನ್ನ ಬೆಳಕು ಏನು ಇಲ್ಲ ಅರಿವಾದದ್ದು
ರಾತ್ರಿಗೂ ಮಧ್ಯಾಹ್ನಕ್ಕೂ
ವ್ಯತ್ಯಾಸ ಇಲ್ಲದ ಕಾಲಬಂದಾಗ
ಮಿಂಚು ಹುಳದ ಜಂಬವೆಲ್ಲ ಕರಗಿತು..

ಬೀದಿ ದೀಪದ ಸುತ್ತ
ಸುತ್ತಿ ಸುತ್ತಿ
ಕಣ್ಣು ಕತ್ತಲೆ ಹೋಗಿ
ಬಿದ್ದು ಜೀವ ಕಳೆದು ಕೊಂಡಿತು
ದೀಪ ಉರಿಸಿ

ಶ್ರೇಷ್ಠನಾರು..
ಎದುರಾಳಿಯ ಗೆಲ್ಲುವ ತನಕ
ಮಾತ್ರ ಪಟ್ಟ..!

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...