Tuesday, July 15, 2025

**** ಜೀವಾಳ ****

ಮೋಡಗಳ ಗುದ್ದಾಟದಲಿ ಸಿಡಿಲು ಆರ್ಭಟಿಸಲು ಕಿವಿ ತಮಟೆ ತೂತು….
ಸೀಳಿ ಬಂದ ಕೋಲ್ಮಿಂಚ ಬೆಳಕಿಗೆ
ಕವಿದ ಕತ್ತಲೆಯು ಹೂತು….

ಆರುತಿಹ ಬೆಂಕಿಯ ಊದುಕೊಳವೆಯಲಿ
ಊದಿ ಕಣ್ಣೊರೆಸಲು….
ಏರುತಿಹ ಹಸಿವಿನ ಬೇನೆಗೆ
ಕಂದನ ಅಳುವಿನ ತೊದಲು…..

ಹಾಕಿದ ಮೂರು ಕಲ್ಲುಗಳೆಡೆಯಲಿ
ಧಗ ಧಗ ಉರಿದ ಬೆಂಕಿ….
ಇಟ್ಟ ಮಣ್ಣಿನ ಗಡಿಗೆಯೊಳಗೆ
ಬೇಯ್ದು ಅನ್ನವಾದ ಅಕ್ಕಿ….

ದುಂಡು ಬಟ್ಟಲ ನಡುವೆ ಮುತ್ತಿನಂತಹ
ತಿಳಿಗಂಜಿ ಸಂತಸದಿ ನಕ್ಕಿತು….
ಬರಿದು ಹೊಟ್ಟೆಯ ಒಳಗಣ ಹಸಿವಿನಾರ್ಭಟ ಕ್ಷಣದಲಿ ಇಂಗಿತು….

ಕಿಲ ಕಿಲ ನಗುತ ಕಂದನವ
ಹೊರ ಹೊರಟ ಚೆಲ್ಲಾಟಕೆ….
ಹನಿ ಹನಿ ಹುಸಿನಗೆಯಲಿ ಬಂದನವ
ಮಳೆರಾಯ ಧರಣಿ ಮಂಡಲಕೆ….

ನಲುಗಿದ ಒಡಲು ಮರುಗಿದ ಮನ
ತಂಪಾಗಿ ತಣಿಯಿತು ಉಮ್ಮಳ….
ಸಮರಸದಲಿ ಬೆರೆತು ಒಡಗೂಡುವಿಕೆಯೇ
ಬದುಕಿನ ಜೀವಾಳ….

@ ತುಳಸಿ ಕೈರಂಗಳ್ @

More from the blog

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...