Thursday, June 26, 2025

**** ಆಶಯ ****

**** ಆಶಯ ****

ಕಣ್ಣೆತ್ತಿದರೆ ವಿಶಾಲ
ಚಾದರವದು ಬೆಳಕು
ಮಳೆಯ ಆಗಸ….
ಸುತ್ತಲಿಹುದು ಹಚ್ಚ
ಹಸಿರು ಗಿಡ ಮರ
ಬಳ್ಳಿಗಳ ಬೊಕ್ಕಸ….

ಅಶ್ವತ್ಥ ಬೇವು ಮಾವು
ಕುಲಬಾಂಧವರು
ಧರೆಯ ಸಂಸಾರದಲಿ….
ಚರಾಚರ ಬದುಕಿನ
ಚೇತನ ಲಹರಿ ಕೊನರುತ್ತಿದೆ
ಬೀಸುವ ತಂಗಾಳಿಯಲಿ…

ಕರುಳಬಳ್ಳಿ ಬಾಂಧವ್ಯಕ್ಕೆ
ಸರಿಸಮಾನ ಹೊಸೆದಿದೆ
ನಿಸರ್ಗ ಸಂಬಂಧ….
ನಾಳಿನ ಉಸಿರಿಗೆ
ಇಂದಿನ ಹಸಿರು
ಬೆಸೆದಿದೆ ಋಣಾನುಬಂಧ….

ವರ್ತನೆಯ ನರ್ತನಕೆ
ಪರಿವರ್ತನೆಯ ಶೃಂಗಾರದ
ಲೇಪನ ಕರ್ಮದಲಿ….
ಅರಳಲು ಹವಣಿಸಿದ
ಅತ್ಯಮೂಲ್ಯ ಸಂಪತ್ತು
ನೆಲಕ್ಕುರುಳದಿರಲಿ….

ಬೇರು ಮೇಲಾಗಿ ಚದುರಿ
ಚೆಲ್ಲದಿರಲಿ ಬಾನೆತ್ತರ
ಮರದ ಜೀವ….
ಮುರಿದ ಗೂಡುಗಳು
ತತ್ತರಿಸಿ ಚಿತ್ರಿಸದಿರಲಿ
ಮಾಮರದ ಇಹವ….

ಮನುಜ ಏಕಾಂಗಿಯಲ್ಲ
ಪ್ರಕೃತಿದತ್ತ ಸಕಲ
ಜೀವರಾಶಿಗಳ ಒಡನಾಡಿ….
ತರುಲತೆಗಳ ಜತನದಿ
ಕಾಪಾಡುತ ತುಂಬೋಣ
ಪ್ರಕೃತಿಮಾತೆಯ ಉಡಿ….

 

@ ತುಳಸಿ ಕೈರಂಗಳ್ @

More from the blog

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಪ್ರಭಾಕರ ಪ್ರಭು ಆಗ್ರಹ..

ಬಂಟ್ವಾಳ : ರಾಜ್ಯದ ವಸತಿ ಇಲಾಖೆಯ ಅಧಿನದಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರಾದ ಬಿ. ಆರ್. ಪಾಟೀಲ್ ಯವರು ವಸತಿ ಸಚಿವರಾದ ಜಮೀರ್...