Wednesday, June 25, 2025

***ಆಸರೆ***

 

ಬಿರು ಬಿಸಿಲ ಲೆಕ್ಕಿಸದೆ
ಬೆನ್ನ ಹಂದರದಿ ಹಾಯಾಗಿ
ನಿದ್ರಿಸಲು ಕಂದ….
ಭೂಮಾತೆಯ ಒಡಲಲಿ
ಬಿತ್ತುತ್ತಿರಲು ಬೀಜವನು
ಕವಲೊಡೆಯಲದು ಆನಂದ….

ಹಸಿದ ಹೊಟ್ಟೆಯಲಿ
ಉಕ್ಕುವ ಬಿಕ್ಕಳಿಕೆಗೆ
ತನುವು ಸೊರಗಿದೆ….
ಹೊತ್ತ ಸಂಸಾರದ ನೊಗ
ಎಳೆಯಲದು ತೋಳುಗಳು
ಮಂಡಿಗೆ ತಿನ್ನುತ್ತಿದೆ….

ಪುಡಿಗಾಸಿಲ್ಲ ಹಿಡಿಮುಷ್ಟಿಯಲಿ
ಕೂಳಿಲ್ಲದೆ ಬರಿದಾಗಿದೆ
ಬಾಳ ಜೋಳಿಗೆ….
ಹುಟ್ಟಿಸಿದ ದೇವನು
ಹುಲ್ಲು ಮೇಯಿಸನು
ಹುಲ್ಲುಕಡ್ಡಿ ಆಸರೆಯೆನಗೆ….

ಬಡತನವು ರಚ್ಚೆ ಹಿಡಿದು
ಕಚ್ಚುತ ಸಾರ ಹೀರಿದೆ
ಬದುಕಿನಲಿ….
ದಳ್ಳುರಿಯ ದಹಿಸಿ
ಫಲರೂಪದಿ ಆರ್ವಿಭವಿಸು
ಸತ್ವಭರಿತ ವಸುಧೆಯಲಿ….

ಹಿಡಿ ಅನ್ನಕ್ಕಾಗಿ
ಅನ್ಯರ ಮನೆಬಾಗಿಲಿಗೆ
ಕರ ತಟ್ಟಲಾರೆನು….
ಕೈಯದು ಕೆಸರಾಗಿ
ಬೆಣ್ಣೆಯು ಒಸರುವುದು
ಕಡೆದಾಗ ಮೊಸರನು….

ಕಲ್ಲು ಮುಳ್ಳಿನ
ಹಾದಿಯದು ಮುದವೆನಿಸಿದೆ
ಅಂಬಲಿಯ ಆಸೆಯಲಿ….
ತೆನೆ ತುಂಬಿ
ತೂಗಲು ಪಚ್ಚೆ ಪೈರು
ಹರುಷವದು ಮುಖಾರವಿಂದದಲಿ….

@ ತುಳಸಿ ಕೈರಂಗಳ್ @

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...