Wednesday, July 9, 2025

**** ಪಯಣ****

 

ಏರಿಳಿತಗಳ ಹಾದಿಯಲಿ
ಅನವರತದಿ ಸಾಗಿದೆ
ಬಾಳ ಕಥನ….
ಜೀವಂತ ಕಾಯಗಳ
ಜೀವಂತಿಕೆಯ ತುಡಿತ
ಮಿಡಿತ ನಿತ್ಯ ನೂತನ….

ಇಟ್ಟ ದಿಟ್ಟ ಹೆಜ್ಜೆಯಲಿ
ಬೆಳಕು ಕತ್ತಲನು ಮೆಟ್ಟಿ
ನಡೆದ ಕುರುಹುಗಳಿವೆ….
ಎದೆಯಾಳದಿ ಪವಡಿಸಿದ
ದುಮ್ಮಾನ ಸಮ್ಮಾನಗಳ
ಸಮ್ಮಿಲನಗಳಿವೆ….

ನಗೆ ಬುಗ್ಗೆ ತವಕ ಪುಳಕ
ಪರಿಧಿಯ ಎಲ್ಲೆ ಮೀರಿ
ಪಯಣಿಸುತ್ತಿದೆ….
ತನು ಮನ ಚಿಲುಮೆ ಚೈತನ್ಯದ
ಚಿತ್ತಾರವನು ಎಲ್ಲೆಡೆ
ಬಿತ್ತರಿಸುತ್ತಿದೆ….

ಅರ್ಥಗರ್ಭಿತ ಅಂತರ್ಗತ
ಭಾವದ ಹೊನಲು ಸುಧೆಯಾಗಿ
ಹರಿಯುತ್ತಿದೆ….
ನೆಮ್ಮದಿ ನಿಶ್ಚಿಂತೆಯಲಿ
ಬದುಕ ನಾವೆ ತೀರದುದ್ದಕ್ಕೂ
ಸಾಗುತ್ತಿದೆ….

ನೆನಪುಗಳ ತರಂಗದಿ
ಭರವಸೆಯ ಬೆಳಕಿನಲಿ
ಬೆಸೆದ ಪಯಣ….
ರಂಗಿನಾಟದಿ ಆದಿ ಅಂತ್ಯದ
ನಡೆಯೊಳು ಬಾಳಬುತ್ತಿಯ
ಮಧುರಯಾನ….

ಮಗ್ಗುಲು ಬದಲಿಸದೆ
ಹೆಗ್ಗಳಿಕೆಯ ಹೆಗಲೇರಲಿ
ಬಾಳ ಹೊತ್ತಗೆ….
ಅಲ್ಪಕಾಲದ ಪಾದದ
ಗುರುತು ಗೋಚರಿಸಲಿ
ಬೆಳಕ ತೆರೆಗೆ…..

@ ತುಳಸಿ ಕೈರಂಗಳ್ @

More from the blog

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...