Thursday, June 26, 2025

*** ಕೊರೋನಾ***

 

ಎರವಲು ಪಡೆದಂತೆ ಎರಗುತಿದೆ ಕರುನಾಡ ತುಂಬೆಲ್ಲಾ ಕೊರೋನಾ….
ಆರ್ಭಟದ ಕೆನ್ನಾಲಿಗೆಯ ಆರಿಸಲು ಅರಸುತಿದೆ ತಾಯ್ನಾಡು ದಾರೀನಾ….

ಊಹೆಗೂ ನಿಲುಕದ ವೂಹಾನ್ ನೆಂಟನ ಮರಣ ಮೃದಂಗ….
ರುದ್ರ ರೌದ್ರತೆಯ ದುಂದುಭಿಯಲಿ ಜಗವಾಗಿದೆ ದಾರವಿರದ ಪತಂಗ….

ಮದವೇರಿದ ಗಜದಂತೆ ರಾಜಗಾಂಭೀರ್ಯದಿ
ಬಂದ ಮಾಯಾರೂಪಿಯ ತಲ್ಲಣ….
ಮನುಜನ ಜೀವನ ಯಾತ್ರೆ ಬೆಂದು ನರಳಿದ ರೂಪವದು ವಿಲಕ್ಷಣ…

ತೂಗಿ ನೋಡಲು ತೂಗದು ತೂಗು ತಕ್ಕಡಿಯಲಿ ಭಾರವಿಲ್ಲ!….
ಹೊರಿಸಿದ ತೂಕವ ಹೊರಲು ಜೀವ ಜಂತುಗಳ ಕಾಯದಿ ಬಲವಿಲ್ಲ..

ವೈರಾಣುವಿನ ಮೈಲಿಗೆಯ ಕೊಚ್ಚೆಯಲಿ
ಬಿದ್ದು ತತ್ತರಿಸಿದ ಕಾಲವಿದು….
ಲೋಕವ ಕಾಡುವ ಕಂಟಕವ ತೊಲಗಿಸಿ ಮಡಿ ಮೀಯಿಸು ನೀನೆಂದು….

ಮೊರೆಯದು ನಿನಗರ್ಪಿಸುವೆ ಮೋರೆಯಲಿ
ದುಗುಡವ ಕಾಣಲಾರೆಯಾ ಕರುಣಾಸಿಂಧು…
ಧಮನಿ ಧಮನಿಯಲಿ ಸೇರ ಹಂಬಲಿಸುವ
ಅಣುವ ದಮನಿಸು ನೀ ದೀನಬಂಧು….

@ ತುಳಸಿ ಕೈರಂಗಳ್@

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...