Monday, June 30, 2025

ಕೊರಗುವ ಕಾಲ ದೂರಿಲ್ಲ- ಮರಗುವ ಕಾಲ ದೂರಿಲ್ಲ.

ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ
ಕೊರಗುತ ಮರಗುತ
ನಮ್ಮನೆ ನಾವು ಶಪಿಸುವ ಕಾಲ ದೂರಿಲ್ಲ
ಪರಿತಪಿಸುವ ಕಾಲ‌ ದೂರಿಲ್ಲ.

ಸರ್ಕಾರಿ ನೌಕರ ನಾವಲ್ಲ
ಸೇವಾ ಭದ್ರತೆ ನಮಗಿಲ್ಲ
ಪಿಂಚಣಿಯಂತೂ ಪಡೆಯಲ್ಲ
ಗೊತ್ತಿದ್ದರೂ ಕೆಲಸ ಬಿಟ್ಟಿಲ್ಲ
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ

ಕನಿಷ್ಟ ಸಂಬಳ ನಮಗಿಲ್ಲ
ನಿರ್ದಿಷ್ಟ ಸಮಯ ನಮಗಿಲ್ಲ
ಹಗಲೂ ರಾತ್ರಿ ದುಡಿಯುವ ನಮಗೆ
ಶಹಬ್ಬಾಸ ಅನ್ನುವ ಜನರಿಲ್ಲ
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ

ಪಂಚಾಯಿತಿ ಕೆಲಸ ದಿನವೆಲ್ಲ
ರಾತ್ರಿಯಾದರೂ ಸುಖವಿಲ್ಲ
ನಿಗದಿತ ಸಮಯಕೆ ಸಂಬಳ ಸಿಗದೆ, ಸಾಲಗಾರರು ನಾವೆಲ್ಲ..
ಸಾಲಗಾರರು ನಾವೆಲ್ಲ.

ಬೈಗುಳದಿಂದಲೆ ದಿನಕಳೆಯುವ ನಮಗೆ
ಹೊಗಳಿಗೆ ಮಾತು ಹಿಡಸಲ್ಲ
ಕಾರಣ ಹೊಗುಳುವ ಜನವೆ ಇಲ್ವಲ್ಲ.

ಕೂಡಿ ನಡೆದರೆ ಬಾಳು ಹಸನ
ಕೂಡುವ ಜನರೂ ನಾವಲ್ಲ
ಕೂಡಿದರೂ, ಕೆಲವೆ ಕ್ಷಣದಲಿ ಬೇರೆಲ್ಲ.ನಮಗೆ ಕೂಡಿ ನಡೆಯುವ ಗುಣವಿಲ್ಲ…
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ.

*ರಚನೆ: ಸುರೇಶ ಅಳ್ಳಿಮೋರೆ*
*Sponsored By: KRGPNSS_RDPR*

More from the blog

Farewell : ಬೀಳ್ಕೊಡುಗೆ ಸಮಾರಂಭ..

ಕೊಯಿಲ : ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 14 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಗೈದು, ನಿವೃತ್ತಿ ಹೊಂದಿರುವ ಶ್ರೀ. ರಮೇಶ್ ಮಯ್ಯ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ 14 ವರ್ಷ ಕರ್ತವ್ಯ...

ಅಂಚೆ ಗ್ರಾಹಕರಿಗೆ ಗುಡ್ ನ್ಯೂಸ್ : ಪೋಸ್ಟ್ ಆಫೀಸ್ ಗಳಲ್ಲಿ ಇನ್ನುಂದೆ ಡಿಜಿಟಲ್ ಪಾವತಿ ಶುರು!

ಭಾರತೀಯ ಪೋಸ್ಟ್ ಇಲಾಖೆ ಆಧುನಿಕ ತಂತ್ರಜ್ಞಾನದೊಂದಿಗೆ ಜನರಿಗೆ ವೇಗದ, ಸುರಕ್ಷಿತ ಸೇವೆಗಳನ್ನು ಒದಗಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿ, ಆಗಸ್ಟ್‌ನಿಂದ ದೇಶಾದ್ಯಂತ ಪೋಸ್ಟ್ ಆಫೀಸ್‌ಗಳಲ್ಲಿ UPI ಮೂಲಕ ಪಾವತಿ ಸೌಲಭ್ಯ ಜಾರಿಗೆ...

Police Hat : ರಾಜ್ಯದ ಪೊಲೀಸ್ ಪೇದೆಗಳಿಗೆ ಹೊಸ ಟೋಪಿ..!  

ರಾಜ್ಯದ ಪೊಲೀಸ್ ಹಾಗೂ ಮುಖ್ಯ ಪೇದೆಗಳ ಟೋಪಿಯಲ್ಲಿ ಬದಲಾವಣೆಯಾಗಲಿದೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ಪೊಲೀಸರು ಬಳಸುವ...

ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಾನುಪಲ್ಕೆ : ಶಾಲಾ ಮಂತ್ರಿಮಂಡಲ ಪ್ರಮಾಣವಚನ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಸರಕಾರಿ ಹಿ ಪ್ರಾ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಮಂತ್ರಿಗಳಿಗೆ ಪ್ರಮಾಣವಚನ ವನ್ನು ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್...