Wednesday, February 12, 2025

ಕೊರಗುವ ಕಾಲ ದೂರಿಲ್ಲ- ಮರಗುವ ಕಾಲ ದೂರಿಲ್ಲ.

ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ
ಕೊರಗುತ ಮರಗುತ
ನಮ್ಮನೆ ನಾವು ಶಪಿಸುವ ಕಾಲ ದೂರಿಲ್ಲ
ಪರಿತಪಿಸುವ ಕಾಲ‌ ದೂರಿಲ್ಲ.

ಸರ್ಕಾರಿ ನೌಕರ ನಾವಲ್ಲ
ಸೇವಾ ಭದ್ರತೆ ನಮಗಿಲ್ಲ
ಪಿಂಚಣಿಯಂತೂ ಪಡೆಯಲ್ಲ
ಗೊತ್ತಿದ್ದರೂ ಕೆಲಸ ಬಿಟ್ಟಿಲ್ಲ
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ

ಕನಿಷ್ಟ ಸಂಬಳ ನಮಗಿಲ್ಲ
ನಿರ್ದಿಷ್ಟ ಸಮಯ ನಮಗಿಲ್ಲ
ಹಗಲೂ ರಾತ್ರಿ ದುಡಿಯುವ ನಮಗೆ
ಶಹಬ್ಬಾಸ ಅನ್ನುವ ಜನರಿಲ್ಲ
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ

ಪಂಚಾಯಿತಿ ಕೆಲಸ ದಿನವೆಲ್ಲ
ರಾತ್ರಿಯಾದರೂ ಸುಖವಿಲ್ಲ
ನಿಗದಿತ ಸಮಯಕೆ ಸಂಬಳ ಸಿಗದೆ, ಸಾಲಗಾರರು ನಾವೆಲ್ಲ..
ಸಾಲಗಾರರು ನಾವೆಲ್ಲ.

ಬೈಗುಳದಿಂದಲೆ ದಿನಕಳೆಯುವ ನಮಗೆ
ಹೊಗಳಿಗೆ ಮಾತು ಹಿಡಸಲ್ಲ
ಕಾರಣ ಹೊಗುಳುವ ಜನವೆ ಇಲ್ವಲ್ಲ.

ಕೂಡಿ ನಡೆದರೆ ಬಾಳು ಹಸನ
ಕೂಡುವ ಜನರೂ ನಾವಲ್ಲ
ಕೂಡಿದರೂ, ಕೆಲವೆ ಕ್ಷಣದಲಿ ಬೇರೆಲ್ಲ.ನಮಗೆ ಕೂಡಿ ನಡೆಯುವ ಗುಣವಿಲ್ಲ…
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ.

*ರಚನೆ: ಸುರೇಶ ಅಳ್ಳಿಮೋರೆ*
*Sponsored By: KRGPNSS_RDPR*

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...