Wednesday, February 12, 2025

ಉಪಾಯವಿರಲಿ ನಮ್ಮಲಿ

ಒಂದು ಕಾಡಲಿ ಮೇಕೆ ಎರಡು
ಗೆಳೆತನದ ಸವಿಯುಂಡವು
ಸ್ನೇಹದಲ್ಲಿಯೇ ಸ್ವರ್ಗವಿಹುದು
ಎನುವುದನು ಮನಗಂಡವು

ನೋಡಿ ಇವುಗಳ ಪ್ರಾಣಿ ಸಂಕುಲ
ಉರಿಯ ನುಂಗುತ ನಡೆಯಿತು
ಮೈತ್ರಿ ಕೆಡಿಸುವ ಕುಹಕದಾಟಕೆ
ಸಂಚನೊಂದನು ಹುಡುಕಿತು

ಜಗಳವಾಡಿಸಿ ಸ್ನೇಹ ಕದಡಲು
ಪಣವನಂದೇ ತೊಟ್ಟವು
ಒಬ್ಬರೆ ದಾಟುವ ಊರ ಸೇತುವೆ
ಮೇಲೆ ಎರಡನು ಬಿಟ್ಟವು

ಎದುರು ಬಂದರೂ ಮೇಕೆಗಳು
ತಾವಾಡಿಕೊಂಡವು ಕಿವಿಯಲಿ
ಜಗಳವಾಡದೆ ದಾರಿ ಹುಡುಕಿದ
ಉಪಾಯ ಮೆದ್ದವು ಸವಿಯಲಿ

ಒಂದು ಮೇಕೆಯು ಮಂಡೆಯೂರಿ
ತಾನು ಕುಳಿತಿತು ಹರುಷದಿ
ಇನ್ನೊಂದು ಮೇಕೆಯು ಮೇಲೆ ಜಿಗಿದು
ಇತ್ತ ಬಂದಿತು ಸರಸದಿ

ಮಣ್ಣುಗೂಡಿದ ತಮ್ಮುಪಾಯವ
ಹಳಿದು ನಡೆದವು ಪಶುಗಳು
ಖುಷಿಯ ಹೀರುತ ಮೇಕೆ ನಡೆದವು
ಸ್ನೇಹ ಪ್ರೇಮದ ಶಿಶುಗಳು

ನೀ.ಶ್ರೀಶೈಲ ಹುಲ್ಲೂರು ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...