Thursday, January 29, 2026

*ಯೋಧನ ತಾಯ ಹರಕೆ*

*ಯೋಧನ ತಾಯ ಹರಕೆ*

 

ದಂಡಿನಿಂದ ದಣಿದು ಬಂದ

ಮಗನೆ ಮಲಗು ಸುಮ್ಮನೆ !

ನಿನ್ನ ಹಿರಿಮೆ ಗರಿಮೆಗಳಿಗೆ

ಸಣ್ಣದಿದು ಬಿಡು ನಮ್ಮನೆ

 

ನಿನ್ನ ಶೌರ್ಯ ಸಾಹಸಕ್ಕೆ

ಸಾಟಿ ಯಾರೂ ಇಲ್ಲ

‘ಮಾತೃಭೂಮಿಗಾಗಿ ಜೀವ ‘

ಬಿಡು ಚಿಂತೆಯನೆಲ್ಲ

 

ಹೆತ್ತ ಒಡಲು ಹೆಮ್ಮೆ ಕಡಲು

ನಿನ್ನ ದೇಶ ಪ್ರೇಮಕೆ

ಮತ್ತೆ ಜನುಮ ಎತ್ತಿ ಬರುವೆ

ನಿನ್ನಮ್ಮನಾಗುವುದಕೆ

 

ಬಿಸಿಲೆ ಇರಲಿ ಮಳೆಯೆ ಬರಲಿ

ಗುಡುಗು ಸಿಡಿಲು ಮಿಂಚುತಿರಲಿ

ನೋವ ಗೆಲಿದು ನುಗ್ಗುತಿರು

ಸಾವೆ ನಿನಗೆ ನಾಚುತಿರಲಿ

 

ನಿನಗೆ ಜನುಮ ಕೊಟ್ಟ ನಾನು

ತಾಯಿಯಾದೆ ಅಂದು

ಜೀವ ಜಗಕೆ ಸುಧೆಯ ಸುರಿದ

ಭುವಿಗೆ ಯಾರು ಮುಂದು?

 

ಯೋಧನೆಂಬ ಹಿರಿಮೆ ನಿನದು

ಜಗದಿ ಸರ್ವಮಾನ್ಯವು

ನಿನಗೆ ಹಾಲು ಕುಡಿಸಿ ತಣಿದ

ನನ್ನ ಎದೆಯು ಧನ್ಯವು!

 

#ನೀ. ಶ್ರೀಶೈಲ ಹುಲ್ಲೂರು

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...