Thursday, June 26, 2025

-ಮಕ್ಕಳ ಕವನ- ‌‌ *ನಮ್ಮೂರ್ ಕೆರೆ*

ಬಾರೊ ಗೆಳೆಯ ತೋರಿಸ್ತೀನಿ

ಅಂದದ ನಮ್ಮೂರ್ ಕೆರೆಯ

ಸಂಜೆ ಗಾಳೀಲಿ ನೋಡೋದ್ ಚೆಂದ

ಏರಿ ಇಳಿವ ತೆರೆಯ

 

ಗುಡ್ಡದ್ ಪಕ್ಕದಿ ಮುಳುಗೋ ಸೂರ್ಯ

ನೋಡು ಎಂಥ ಭವ್ಯ

ಕೆರೇಲ್ ಮುಳುಗಿ ಏಳೋ ಅವನು

ನಿಜಕು ಅಗ್ನಿ ದಿವ್ಯ

 

ಬಾತುಗಳಾಡೋ ಆಟ ನೋಡು

ಕಣ್ಣಿಗ್ ಅದುವೇ ಹಬ್ಬ

ಈಜು ಸಾಕಾದ್ ಮೇಲೆ ಏರ್ತವೆ

ಮರಿಗಳೊಡನೆ ದಿಬ್ಬ

 

ಬಿಳಿ ಕೆಂಪು ಕಮಲ ನೋಡು

ಮಣೀತಾವೆ ನಲಿದು

ಮೀನುಗಳೆಲ್ಲ ಸ್ವರ್ಗ ಸುಖದಿ

ಕುಣೀತಾವೆ ಉಲಿದು

 

ಊರು ಬಿಟ್ಟು ಹೋಗೋದ್ ಬೇಡ

ಎಷ್ಟೇ ಕಲಿತ್ರೂ ನಾವು

ಕೆರೆಯ ದಡದಿ ಕೇಯ್ಮೆ ಮಾಡಿ

ಮರೆಯೋಣೆಲ್ಲ ನೋವು

 

#ನೀ.ಶ್ರೀಶೈಲ ಹುಲ್ಲೂರು

ಮಂದಹಾಸ ಬಸವೇಶ್ವರ ವೃತ್ತ

ಜಮಖಂಡಿ – 587301

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...