Wednesday, July 9, 2025

*ಬೀರಬಲ್ಲನ ಕಿಚಡಿ*

ಚಳಿಗಾಲದಿ ಅಕಬರನು
ವಿಹಾರ ಬಯಸಿದ
ರಾಣಿ ತನ್ನ ಜೊತೆಗೆ ಬರಲು
ಖುಷಿಯಲಿ ನಡೆದ

ಕೊಳದಿ ಇಳಿದ ರಾಣಿ
ಒಡನೆ ಬೆಚ್ಚಿಬಿದ್ದಳು
ನೀರು ಬಹಳ ತಂಪು ಎಂದು
ಹೊರಗೆ ಬಂದಳು

ರಾತ್ರಿ ಪೂರ್ತಿ ನೀರಿನಲ್ಲಿ
ಇರುವ ಜಟ್ಟಿಗೆ
ಬಹುಮಾನ ನೀಡಿಬಿಡು
ಎಂದಳು ರಾಜಗೆ

ವಿಷಯ ತಿಳಿಸಲವನು
ಡಂಗುರವ ಹೊಡೆಸಿದ
ಒಪ್ಪಿ ಬಂದ ಮುದುಕನನ್ನು
ಕೊಳದಿ ಇಳಿಸಿದ

ರಾತ್ರಿಯೆಲ್ಲ ಮುದುಕನು
ನೀರಲ್ಲೆ ಕಳೆದನು
ಮುಂಜಾನೆ ಆಸ್ಥಾನದಿ
ಬಂದು ನಿಂತನು

ಹೇಗೆ ಸಾಧ್ಯವಾಯಿತೆಂದು
ರಾಜ ಕೇಳಿದ
‘ರಾಜದೀಪ ನೋಡುತಲಿ’
ಎಂದವನು ಹೇಳಿದ

ಬಹುಮಾನ ನೀಡಬೇಡಿ
ಎಂದನೊಬ್ಬನು
ಏಕೆ? ಎನುವ ರಾಜನಿಗೆ
ಅವನಿಂತೆಂದನು

ಚಳಿಯಾಗಿಲ್ಲವನಿಗೆ
ದೀಪದ ಬಿಸಿಗೆ
ಅದುಕಾರಣ ಬಹುಮಾನ
ಬೇಡ ಅವನಿಗೆ

ಬಹುಮಾನ ಕೊಡದೆ ರಾಜ
ಹಾಗೆ ಕಳಿಸಿದ
ಕೋಪಗೊಂಡ ಬೀರಬಲ್ಲ
ಮನದಿ ಶಪಿಸಿದ

ಮಾರನೆ ದಿನ ಆಸ್ಥಾನಕೆ
ಬಾರದೆ ಉಳಿದ
ರಾಜ ಅವನ ಮನೆಗೆ
ರಾಜಭಟರ ಕಳಿಸಿದ

ಕಿಚಡಿ ಮಾಡಿ ಬರುವೆನೆಂದು
ಬೀರಬಲ್ಲ ಹೇಳಿದ
ಸಂಜೆತನಕ ಬಾರದಿರಲು
ರಾಜ ತೆರಳಿದ

ರಾಜ ಹೋಗಿ ನೋಡಲಲ್ಲಿ
ಕಂಡಿತು ವಿಚಿತ್ರವು
ನೇತಾಡುವ ಗಡಿಗೆ ಮೇಲೆ!
ಕೆಳಗಡೆ ಉರಿಯು!!

ಬೀರಬಲ್ಲ ಇದೇನು
ನಿನ್ನ ಹುಚ್ಚಾಟವು?
ಕೆಳಗಿಡು ಗಡಿಗೆಯನು
ಆಗುವುದು ಕಿಚಡಿಯು

ಕೊಳದಿಂದ ತುಂಬ ದೂರ
ರಾಜ ದೀಪವು
ಮುದುಕನಿಗೆ ತಟ್ಟಿತ್ಹೇಗೆ
ಹೇಳಿ ಶಾಖವು?

ರಾಜನ ನುಡಿಗವನಿತ್ತ
ಜಾಣ ಉತ್ತರ
ಅದನು ಕೇಳಿ ರಾಜನಾದ
ಒಳಗೆ ತತ್ತರ

ಕಾಲಿಗೆ ತಾ ಬುದ್ಧಿ ಹೇಳಿ
ಹೊಕ್ಕನರಮನೆ
ಮುದುಕಗೆ ಬಹುಮಾನವಿತ್ತು
ಕುಳಿತ ಸುಮ್ಮನೆ

 

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ

More from the blog

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ಸರಕಾರಿ ಕಿ. ಪ್ರಾ. ಶಾಲೆ ಏಮಾಜೆ : ‘ಅಕ್ಷಯ ಪಾತ್ರೆ’ ಕಾರ್ಯಕ್ರಮ ಉದ್ಘಾಟನೆ..

ಬಂಟ್ವಾಳ : ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಸೇವನೆಯ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರವು ಪೋಷಣಾ ಅಭಿಯಾನವನ್ನು ಜಾರಿಗೊಳಿಸಿದೆ. ಆ ಪ್ರಯುಕ್ತವಾಗಿ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದ. ಕ. ಜಿ....