Wednesday, February 12, 2025

*ಮನ-ಮರ್ಕಟ*

ಕಾಣದ, ದಾರಿಗಾಣದ
ದೇವರು ದೆವ್ವಗಳಿಗಾಗಿ
ಅಂಡಲೆವ ಭಂಡ ಮನವೇ!

ಅವಕಾಶದ ಮಡುವಿನಲಿ ಮುಳುಗಿ
ಆಗಸದಾಸೆಯ ಹೆದೆಗೆ ಏಣಿಯನಿರಿಸಿ
ಏರಲಾಗದ ಇಳಿಯಲಾಗದ
ಅತಂತ್ರಾವಸ್ಥೆಯಲೂ ಸ್ವತಂತ್ರ
ನೆಂಬ ಹಮ್ಮು ಬಿಮ್ಮುಗಳನು
ಆಂತರ್ಯದಲೆ ಮೈಗೂಡಿಸಿಕೊಂಡ
ನೀ ಮಹಾ ಖದೀಮ!

ಪ್ರಾಣ,ಶರೀರದ ಮೇಲೆಲ್ಲ ಎಗರಿ
ಎಲ್ಲೆಂದರಲ್ಲಿ ಕಪಟ ಮೋಸ ವಂಚನೆಯ
ಸೆರಗ ಹಾಸಿ ಅದರ ಮೇಲೆಯೇ
ಸತ್ಯ ನ್ಯಾಯ ಸಾಚಾತನದ
ಸವಾರಿಗೈದು ಒಳಿತು ಕೆಡುಕಿನ
ಭೇದಗಾಣದ ನಲ್ಮೊಗವ ಮೇಲೆತ್ತಿ
ಬಾನಿಗೆ ನಾದ ರವಾನಿಸುವ ನಿಜ ಶ್ವಾನ!

ಕರ್ಪೂರ ಗಂಧ ನೈವೇದ್ಯದಮಲನೆಲ್ಲ
ಒಳ ಹೊರಗೆ ತುಂಬಿ ಗಲೀಜು ಗಟಾರ
ಕೊಚ್ಚೆಯನೆಲ್ಲ ಎಲ್ಲೆಂದರಲ್ಲಿ ಹರಡಿ
ಬಾಣತುದಿಯ ಮಾಂಸವನೆಲ್ಲ ನೆಕ್ಕಿ
ಹೆಕ್ಕಿ ಉಕ್ಕೇರುವಾಗಲೇ ತಣ್ಣೀರು
ಸಿಂಪಡಿಸಿ ನೊರೆವಾಲ ಮದವ
ನಿಳಿಸೋ ಮಹಾ ಮಾಯಾವಿ!

ಎಲ್ಲರೆದೆಗಡಲಲೂ ನಿಲ್ಲದೆ ನಾಟ್ಯವಾಡಿ
ಅತಿಯಾಳದಲೆಲ್ಲ ತನ್ನಿರುವನಡಗಿಸಿ
ಏಳುಬೀಳುಗಳ ತಾಳಕೆ ಕುಣಿಸಿ ಮಣಿಸಿ
ಮೇಲೇಳದಂತೆ ಹೆಡೆಮುರಿಯ ಕಟ್ಟಿ
ಎದ್ದರೂ ಆ ಕ್ಷಣವೇ ಕುಗ್ಗಿ ಬಗ್ಗಿ ತಗ್ಗಿ
ರಸಾತಳದಲೇ ಉಸಿರುಗಟ್ಟಿಸಿ ಜೀವ
ರಾಶಿಗಳನೆಲ್ಲ ಕಪಿಮುಷ್ಟಿಯಲದುಮಿ
ಮನದುಂಬಿ ಮೆರೆವ ಮರ್ಕಟ!

#ನೀ.ಶ್ರೀಶೈಲ ಹುಲ್ಲೂರು

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...