Tuesday, July 15, 2025

*ಮನ-ಮರ್ಕಟ*

ಕಾಣದ, ದಾರಿಗಾಣದ
ದೇವರು ದೆವ್ವಗಳಿಗಾಗಿ
ಅಂಡಲೆವ ಭಂಡ ಮನವೇ!

ಅವಕಾಶದ ಮಡುವಿನಲಿ ಮುಳುಗಿ
ಆಗಸದಾಸೆಯ ಹೆದೆಗೆ ಏಣಿಯನಿರಿಸಿ
ಏರಲಾಗದ ಇಳಿಯಲಾಗದ
ಅತಂತ್ರಾವಸ್ಥೆಯಲೂ ಸ್ವತಂತ್ರ
ನೆಂಬ ಹಮ್ಮು ಬಿಮ್ಮುಗಳನು
ಆಂತರ್ಯದಲೆ ಮೈಗೂಡಿಸಿಕೊಂಡ
ನೀ ಮಹಾ ಖದೀಮ!

ಪ್ರಾಣ,ಶರೀರದ ಮೇಲೆಲ್ಲ ಎಗರಿ
ಎಲ್ಲೆಂದರಲ್ಲಿ ಕಪಟ ಮೋಸ ವಂಚನೆಯ
ಸೆರಗ ಹಾಸಿ ಅದರ ಮೇಲೆಯೇ
ಸತ್ಯ ನ್ಯಾಯ ಸಾಚಾತನದ
ಸವಾರಿಗೈದು ಒಳಿತು ಕೆಡುಕಿನ
ಭೇದಗಾಣದ ನಲ್ಮೊಗವ ಮೇಲೆತ್ತಿ
ಬಾನಿಗೆ ನಾದ ರವಾನಿಸುವ ನಿಜ ಶ್ವಾನ!

ಕರ್ಪೂರ ಗಂಧ ನೈವೇದ್ಯದಮಲನೆಲ್ಲ
ಒಳ ಹೊರಗೆ ತುಂಬಿ ಗಲೀಜು ಗಟಾರ
ಕೊಚ್ಚೆಯನೆಲ್ಲ ಎಲ್ಲೆಂದರಲ್ಲಿ ಹರಡಿ
ಬಾಣತುದಿಯ ಮಾಂಸವನೆಲ್ಲ ನೆಕ್ಕಿ
ಹೆಕ್ಕಿ ಉಕ್ಕೇರುವಾಗಲೇ ತಣ್ಣೀರು
ಸಿಂಪಡಿಸಿ ನೊರೆವಾಲ ಮದವ
ನಿಳಿಸೋ ಮಹಾ ಮಾಯಾವಿ!

ಎಲ್ಲರೆದೆಗಡಲಲೂ ನಿಲ್ಲದೆ ನಾಟ್ಯವಾಡಿ
ಅತಿಯಾಳದಲೆಲ್ಲ ತನ್ನಿರುವನಡಗಿಸಿ
ಏಳುಬೀಳುಗಳ ತಾಳಕೆ ಕುಣಿಸಿ ಮಣಿಸಿ
ಮೇಲೇಳದಂತೆ ಹೆಡೆಮುರಿಯ ಕಟ್ಟಿ
ಎದ್ದರೂ ಆ ಕ್ಷಣವೇ ಕುಗ್ಗಿ ಬಗ್ಗಿ ತಗ್ಗಿ
ರಸಾತಳದಲೇ ಉಸಿರುಗಟ್ಟಿಸಿ ಜೀವ
ರಾಶಿಗಳನೆಲ್ಲ ಕಪಿಮುಷ್ಟಿಯಲದುಮಿ
ಮನದುಂಬಿ ಮೆರೆವ ಮರ್ಕಟ!

#ನೀ.ಶ್ರೀಶೈಲ ಹುಲ್ಲೂರು

More from the blog

Bantwal : ಕುಸಿದು ಬೀಳುವ ಸ್ಥಿತಿಯಲ್ಲಿ ಸೂರು : ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ..

ಬಂಟ್ವಾಳ : ಮಳೆಗಾಲದಲ್ಲಂತೂ ಹೇಳತೀರದ ಪರಿಸ್ಥಿತಿ ಒಂದು ಕಡೆ ಮನೆ ಗೋಡೆ ಜರಿದು ಬಿದ್ದಿದ್ದರೆ, ಮತ್ತೊಂದೆಡೆ ಅಂಚುಗಳು ನೆಲಸಮವಾಗಿದೆ. ಗಂಡು ಮಕ್ಕಳಿಲ್ಲದೆ, ದಿಕ್ಕಿಲ್ಲದ ಈ ಬಡ ಕುಟುಂಬ ಇದೀಗ ಸಹಾಯಧನ ನಿರೀಕ್ಷೆಯಲ್ಲಿದೆ.!!!! ಹೌದು, ಮೇ.24ರಂದು...

ಮಜಿ ವೀರಕಂಬ ಶಾಲೆಯಲ್ಲಿ ಅಗ್ನಿ ನಂದಕವನ್ನು ಬಳಸುವ ಪ್ರಾಯೋಗಿಕ ಚಟುವಟಿಕೆ..

ಬಂಟ್ವಾಳ : ತರಗತಿಯ ಒಳಗೆ ಕಲಿಯುವ ಪಠ್ಯ ವಿಷಯಗಳು ಕೇವಲ ಸಿದ್ದಾಂತವನ್ನುಷ್ಟೇ ಕಲಿಸುತ್ತದೆ, ಆದರೆ ತರಗತಿ ಕೋಣೆಗಳ ಹೊರಗೆ ನಿತ್ಯ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಪ್ರಾಯೋಗಿಕ ಜ್ಞಾನವು ಮುಖ್ಯವಾಗಿದೆ ಈ ರೀತಿಯಾಗಿ ಅಗ್ನಿ...

ಆ. 24ರಂದು ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಸೀಸನ್ 3 ಮತ್ತು ನಮ್ಮೂರ ಟೆಕ್ನೀಶಿಯನ್..

ಬಂಟ್ವಾಳ : ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆ ಹತ್ತಲು ಅವಕಾಶ ಸಿಗುವುದು ಕೃಷ್ಣ ವೇಷದ ಮೂಲಕ. ಇಂತಹ ಅವಕಾಶವನ್ನು ಇಲ್ಲಿನ ಪೊಸಳ್ಳಿಯ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳವು ಕೃಷ್ಣ...

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...