Saturday, January 31, 2026

*ನಾನು ಯೋಧ*

ಅಗಲಿದ ವೀರ ಯೋಧರಿಗೆ ವೀರಾಂಜಲಿ!
ಸೇನೆಯಲಿ ಜೀವದ ಹಂಗು ತೊರೆದು
ಹೋರಾಡಿದ ಯೋಧರಿಗೆ ಅರ್ಪಣೆ!
(ನನ್ನ’ಕಟ್ಟಿರುವೆ ಸಾಲು’ಸಂಕಲನದ ಕವನ)

*ನಾನು ಯೋಧ*

ಬಾಣ ಬಿರುಸು
ಗಳೊಂದು ನಾಟವು
ಗಟ್ಟಿ ಎದೆಯೆನದು
ಸೋಲದಿರುವುದೆ
ಎನ್ನ ಗರಿಮೆಯು
ದಿಟ್ಟ ನಿಲುವೆನದು

ಉದಿತ ಮಾರ್ಗವು
ವಿದಿತವೆಲ್ಲವು
ಜಟ್ಟಿ ತನುವೆನದು
ಕುದಿವ ಬಿಂದುವ
ನೊದವಿ ಸಾಗುವ
ನೆಟ್ಟ ಮನವೆನದು

ತೇಲು ಬಾಣವ
ಕೈಲಿ ಹಿಡಿಯುವ
ಶೂರ ಪಡೆಯೆನದು
ಹಾರು ಹಕ್ಯಿಯ
ಪುಕ್ಕ ಎಣಿಸುವ
ಧೀರ ನಡೆಯೆನದು

ಬೆಳ್ಳಿ ಚುಕ್ಕಿಯ
ಅಂಗೈಲಿ ಧರಿಸುವ
ಭವ್ಯ ಬಲವೆನದು
ಹಿಮಾಲಯವ
ಮುಂಗೈಲಿ ಭರಿಸುವ
ದಿವ್ಯ ಛಲವೆನದು

ಸಾವ ಸಿರಿಯನೆ
ಕೊಳ್ಳೆ ಹೊಡೆಯುವ
ಪರಮ ಗುರಿಯೆನದು
ಮತ್ತೆ ಈ ಮಣ್ಣಲಿ
ಜನ್ಮ ತಳೆಯುವ
ಪುಣ್ಯ ಸಿರಿಯೆನದು

 

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...