Thursday, February 13, 2025

*ಸತ್ತ ಕಾರಣ*

ಸಾವು ? ಸಾವು
ಬರಬಾರದಿತ್ತು ಅವನಿಗೆ
ಹೀಗೆ ಎಲ್ಲ ಕಳಚಿ ಬೆತ್ತಲೆ
ಮಾಡಿ ಹೋಗಬಾರದಿತ್ತು
ಅದೂ ಎಲ್ಲರೆದುರು ಝಗ
ಮಗಿಸುವ ಸುಡು ಹಗಲಿನಲಿ!

ಪಾ…ಪ!
ಬೆತ್ತಲೆಯಾಟಕೆ ಸೋತು
ಅದಕೆ ಗೂಟ ಜಡಿದೇ
ಮಠದಂಗಳದಿ ಆಳವಾಗಿ
ಬೇರು ಬಿಟ್ಟು ಗರ್ಭ ಗುಡಿಯ
ಒಳಗಡೆ ನಿರ್ಭಾವದಿ ಕುಳಿತ!

ದೇವರ ದಿಟ್ಟಿಸುತ
ತನ್ನಾಸೆಯ ಹೂ
ಹಣ್ಣು ಕಾಯಿಗಳನೆಲ್ಲ
ಬಂದವರ ನೊಂದವರ
ಉಡಿಯಲಿ ಮಡಿಲಲಿ
ಹಾಕಿ ಪುನೀತನಾದ !

ಇಂಥ ಜೀವಕೆ
ಸಾವು ಬರಬಾರದಿತ್ತು!
ಯಾರ್ಯಾರನ್ನೋ ಹೇಗ್ಹೇಗೋ
ಹೊತ್ತೊಯ್ಯುವ ಯಮ
ಸುಮ್ಮನಿದ್ದರೂ ಕಿತಾಪತಿ
ಚಿತ್ರಗುಪ್ತನ ಕಾರುಬಾರಿಗೆ
ಲಗಾಮು ಹಾಕಲಿಲ್ಲ ಅಂತೀರಾ ?

ಇಲ್ಲ ಇಲ್ಲ ..
ಯಮ ಹಾಕಿದ ಲಗಾಮು
ಚಿತ್ರಗುಪ್ತ ಅವನ ಕೋಣನಿಗೆ
ಹಾಕಿ ಯಮನನ್ನೇ ಯಾಮಾರಿಸಿ
ಇವನ ಕೋಮಲ ಕೊರಳಿಗೆ
ಕಳಚದ ನೇಣು ಬಿಗಿದ!

ಬಿಳಿ ಹಾಳೆಯಲಿ ಕರಿಯ
ಅಕ್ಷರಗಳ ಬರೆದ ಯಮನ
ಹೆಸರಿನ ಚೀಟಿಯನು ಅವನ
ಮೇಜಿನ ಮೇಲಿಟ್ಟು ಓಡಿದ
ಮೋಜು ನೋಡಿದ !

ಅಂತೂ ಇಂತೂ
ತಲೆ ಕೆರೆವವರ ಕೈಗೆ ಬೆಣಚು
ಗಲ್ಲನಿಟ್ಟು ಸತ್ತವನಿಗೊಂದು
ದಾರಿ ತೋರಿ ಮಾಯವಾದ !
ಮುಂದಿನ ಕರ್ಮ-ಕ್ರಮ
(ಆ)ರಕ್ಷಕರಿಗೇ ಬಿಟ್ಟ!

 

#ನೀ.ಶ್ರೀ ಶೈಲ ಹುಲ್ಲೂರು

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...