Friday, January 30, 2026

*ಸಿಡಿದೇಳು ಸಾಕಿನ್ನು*

ನಿನ್ನೊಳದನಿಯ ನಾಲಿಗೆ ಸೀಳಿ
ತಮ್ಮ ತೆವಲಿನಂಗಳದಿ ಬಿಡದೆ ಹರಡಿ
ಸಂಭ್ರಮಪಡುವ ಪಡಪೋಸಿ ಬುದ್ಧಿಯಲೇ
ಮನಸಾರೆ ಮೀಯುವ ಮಾನವಂತರು!

ನಿನ್ನೊಲವ ಪರಮ ಗುರಿಯ ಚೂಪು
ಗೆರೆಯ ಪಲ್ಲವಿಸಿ ಅದರಲೇ ಪವಡಿಸಿ
ದಿಕ್ತಟವ ದಿಕ್ಕುಗೆಡಿಸಿ ಸೊಕ್ಕಿನಲೆ
ಯಲಿ ನಿತ್ಯ ನಿಗುರುತಿರುವ ನೀತಿವಂತರು!

ನಿನ್ನೊಡಲುರಿಯ ಕೆನ್ನಾಲಿಗೆಯ
ಕತ್ತು ಹಿಚುಕಿ ದೋಚಿ ಬೆತ್ತಲೆಯಾಗಿಸಿ
ನೇಣಿಗೇರಿಸಿ ಉನ್ಮತ್ತತೆಯಲಿ ಹಾಡಿ
ಕುಣಿದು ತೇಲಿ ನಲಿವ ದಿವ್ಯ ಪುಣ್ಯವಂತರು!

ನಿನ್ನುಸಿರ ಹಾಡಿಯ ಬೆವರ ಚಪ್ಪರದಡಿ
ಪಾಯ ತೋಡಿ ತಮ್ಮ ಕುಡಿಗಳ ಮಹಲ
ಮಂಟಪಕೆ ವಂದಿ ಮಾಗಧರೊಂದಿಗೆ ಬಾಜಾ
ಭಜಂತ್ರಿ ಸಮೇತ ಧುಮ್ಮಿಕ್ಕುವ ಸತ್ಯವಂತರು!

ನಿನ್ನ ತೋಳ್ಬಲದ ಕಸುವನೆಲ್ಲ ನುಂಗಿ
ನೀರ್ಗುಡಿದು ಪುಂಗಿಯೂದುವ ಮಂಗ
ಬುಧ್ಧಿಯ ಎಡಬಿಡಂಗಿತನದಲೇ ಶತ ಶತ
ಮಾನಗಳ ಭವ್ಯ ಗೋರಿ ಕಟ್ಟಿದ ಭಾಗ್ಯವಂತರು!

ನೀ ಬೀಳು ನಡೆಯಡಿ ನಲುಗುವವರೆಗೂ
ಇವರು ಖೂಳ ಹುಡಿ ಹಾರಿಸುತ್ತಲೇ ನಲಿವರು
ಗಟ್ಟಿಯಾಗಿ ಜಗಜಟ್ಟಿಯಾಗಿ ಮೆಟ್ಟಿ ಬಿಡು
ನೆಟ್ಟಗಾಗಲಿ ಈ ಭ್ರಷ್ಟ ದಟ್ಟದರಿದ್ರ ಪಟ್ಟಭದ್ರರು!

 

#ನೀ.ಶ್ರೀಶೈಲ ಹುಲ್ಲೂರು

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...