Tuesday, July 8, 2025

*ಎಲ್ಲಿದೆ? ಕೈ ಎತ್ತಿ ಹೇಳಿ *

ಅಲ್ಲವೋ ಅಲ್ಲ
ಇದು ಪ್ರಜಾಪ್ರಭುತ್ವ
ಇದೆಲ್ಲ ಕಾಳ ಧನಿಕರ
ಮಜಾಪ್ರಭುತ್ವ!

ಯಾವ ಬಡವನೂ
ಎದುರಿಸಲಾರ ಚುನಾವಣೆ
ಧನದಾಹಿಗಳದೇ
ನೋಡಿದಲ್ಲೆಲ್ಲ ಚಿತಾವಣೆ

ಅವರ ಹಿಂದೆಯೇ
ಹೊರಟಿದೆ ಕುರಿಮಂದೆ
ನೋಡ್ತಾನೇ ಇಲ್ಲ ಬಡವ
ಏನಿದೆ ಮುಂದೆ?

ಎಂಜಲು ನಾಯಿಯಂತೆ
ಇವನು ಅವರ ಹಿಂದೆ
ಜಾತಿ ಹಣ ಹೆಂಡ
ಈಗ ಇವರ ತಂದೆ

ಸುಖಿಸುವರೀಗ ಎಲ್ಲ
ಐದು ದಿನದ ಮೋಜು
ಕೊಡುತ್ತಾರವರು ಹೀಗೇ
ಐದು ವರ್ಷ ನೋಡುವ ಪೋಜು

ನಂಬಿ ಹೊರಟಿದೆ
ಪಾ.. ಪ, ಮುಗ್ಧ ಬಡಪಾಯಿ!
ಎಂದೆಂದೂ ಇವ ಸಿರಿವಂತನ
ನಂಬುಗೆಯ ನಾಯಿ!

ಕಾಣುತ್ತೇನ್ರೀ ಎಲ್ಲಾದರೂ
ಈ ಭವ್ಯ ದೇಶದಿ ಪ್ರಜಾರಾಜ್ಯ?
ದೊಡ್ಡ ದೊಡ್ಡ ಮಿಕಗಳೇ
ಮೆರೆಯುತ್ತಿರುವುದು ಎಂಥ ಚೋದ್ಯ!

 

#ನೀ. ಶ್ರೀಶೈಲ ಹುಲ್ಲೂರು

More from the blog

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ಸರಕಾರಿ ಕಿ. ಪ್ರಾ. ಶಾಲೆ ಏಮಾಜೆ : ‘ಅಕ್ಷಯ ಪಾತ್ರೆ’ ಕಾರ್ಯಕ್ರಮ ಉದ್ಘಾಟನೆ..

ಬಂಟ್ವಾಳ : ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಸೇವನೆಯ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರವು ಪೋಷಣಾ ಅಭಿಯಾನವನ್ನು ಜಾರಿಗೊಳಿಸಿದೆ. ಆ ಪ್ರಯುಕ್ತವಾಗಿ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದ. ಕ. ಜಿ....

ಬೊಂಡಾಲದಲ್ಲಿ ಉತ್ಸಾಹಿ ಉಚಿತ ಕಣ್ಣಿನ ತಪಸಣಾ ಶಿಬಿರ..

ಬಂಟ್ವಾಳ :ಉತ್ಸಾಹಿ ತರುಣ ವ್ರೃಂದ(ರಿ) ಬೊಂಡಾಲ ಹಾಗೂ ಕಾಮತ್ ಒಪ್ಟಿಕಲ್ಸ್, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಸಣಾ ಶಿಬಿರ ನಡೆಯಿತು. ಊರಿನ ಅನೇಕ ಹಿರಿಯರು, ಮಹಿಳೆಯರು ಹಾಗೂ ನಾಗರಿಕ ಬಂಧುಗಳು ಇದರ...