Wednesday, February 4, 2026

*ಹನ್ನೆರಡು ಜನ ಬುದ್ಧಿವಂತರು*

ಪೆದ್ದ ಗೆಳೆಯರು ಸೇರಿದರು
ಪ್ರವಾಸ ಯೋಜನೆ ಮಾಡಿದರು
ಎಂಕ ತಿಂಮ ಕಾಶೀಮನು ಸೇರಿ
ಹನ್ನೆರಡೂ ಜನ ಕೂಡಿದರು

ಮಂದಿರ ಮಸೀದಿ ಚರ್ಚನು ಸುತ್ತಿ
ನದಿ ಸಾಗರದಿ ಈಜಿದರು
ಅಣೆಕಟ್ಟು ಮೃಗಾಲಯ ತಿರುಗಿ
ಖುಷಿಯಲಿ ಎಲ್ಲ ತೇಲಿದರು

ಪ್ರವಾಸ ಮುಗಿಸಿ ಹೊರಟರು ಎಲ್ಲ
ಹಾಡುತ ಪಾಡುತ ಊರ ಕಡೆ
ಎಂಕನ ತಲೆಯಲಿ ಏನೋ ಹೊಳೆಯಿತು
‘ಎಣಿಸದೆ ನಾನು ನಿಮ್ಮ ಬಿಡೆ’

ಎಣಿಸಿದ ಎಂಕನು ಅಳತೊಡಗಿದನು
ನಾವಿರುವುದು ಹನ್ನೊಂದೆ ಜನ
ತಾ ಎಣಿಸುವೆನು ಎಂದಾ ತಿಂಮನು
ಎಣಿಸಿ ಹೇಳಿದ ಹನ್ನೊಂದೆ ಜನ

ಅವನೂ ಎಣಿಸಿದ ಇವನೂ ಎಣಿಸಿದ
ಎಲ್ಲರೂ ಎಣಿಸಿ ನೋಡಿದರು
ಹನ್ನೆರಡಲ್ಲ ಹನ್ನೊಂದಾಯಿತು
ಯಾರೇ ಎಣಿಸಿ ನೋಡಿದರು

ಎಲ್ಲರೂ ಸೇರಿ ಅಳತೊಡಗಿದರು
ಕಳೆದ ಗೆಳೆಯನ ಅಗಲಿಕೆಗೆ
ಇವರನು ನೋಡಿದ ಹಿರಿಯನು ಬಂದನು
ಕಾರಣ ಕೇಳಿದ ಅಳುವಿಕೆಗೆ

ಬಂದ ಗೆಳೆಯರಲಿ ಒಬ್ಬನೆ ಇಲ್ಲ
ಹೇಳಿದರೆಲ್ಲ ತಮ್ಮ ಕತೆ
ಹಿರಿಯನು ಸಾಲಲಿ ನಿಲಿಸಿದ ಅವರನು
ಎಣಿಸುವೆನಿರಿ ನಾ ಬೇಡ ವ್ಯಥೆ

ಎಣಿಸಿ ನೋಡಲು ಹನ್ನೆರಡೂ ಜನ
ಇರುವುದ ತಿಳಿದು ಹೇಳಿದನು
ನೀವೇ ಎಣಿಸಿರಿ ಒಂದು.. ಎರಡು..
ಬರುವುದೆ ನಿಮಗೆ? ಕೇಳಿದನು

ಎಣಿಸಲು ತಾವೇ ಹನ್ನೆರಡೂ ಜನ
ಇರುವುದ ಕಂಡು ಹಿಗ್ಗಿದರು
ತಂಮನು. ಬಿಟ್ಟೇ ಎಣಿಸಿದ ತಪ್ಪಿಗೆ
ನಾಚಿಕೆಯಿಂದ ಕುಗ್ಗಿದರು

 

#ನೀ.ಶ್ರೀಶೈಲ ಹುಲ್ಲೂರು

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...