Monday, July 14, 2025

*ಮೂರ್ಖ ಮಂಗ*

ರಾಜನು ಒಂದು ಮಂಗವ ಸಾಕಿದ
ಸಲುಗೆಯಿಂದಿದ್ದನು ಅದರ ಜೊತೆ
ಸಿಂಹಾಸನದಲಿ ಕುಳಿತರೂ ಅವನು
ಅದುವೂ ಕುಳಿತಿತು ಕೇಳಿ ಕತೆ

ದಂಡಿಗೆ ಹೊರಟರೆ ತಾನೂ ಹೊರಟಿತು
ರಾಜನ ಪಡಿನೆಳಲಿನ ಹಾಗೆ
ಒಂದು ದಿನವದು ರಾಜನು ಮಲಗಿದ
ತಾಳದಾಯಿತು ಬಿಸಿಲ ಧಗೆ

ಬೆವರಿದ ರಾಜನ ನೋಡಿತು ಮಂಗವು
ಕೂಡಲೇ ತಂದಿತು ಬೀಸಣಿಕೆ
ಮುಖದ ಮೇಲಿನ ನೊಣ ಓಡಿಸಲು
ಮಾಡಿತು ಒಂದು ಹವಣಿಕೆ

ಬೀಸಣಿಕೆಯನು ಬೀಸಿದ ಭರಕೆ
ನೊಣವದು ಹಾರಿತು ಒಂದು ಕಡೆ
ಬಿಡದೇ ಬಂದಿತು ಪದೆ ಪದೆ ಕುಳಿತಿತು
ಮಂಗನು ತೋರಿತು ಜಾಣ ನಡೆ

ರಾಜನ ಪಕ್ಕದ ಖಡ್ಗವ ಹಿಡಿದು
ನೊಣಕೆ ಕೊಟ್ಟಿತು ಎಚ್ಚರಿಕೆ
ಕತ್ತರಿಸದೆ ಬಿಡೆ ನಿನ್ನನು ಈ ಸಲ
ಬರೆದುಕೊ ಬೇಕಿರೆ ಮುಚ್ಚಳಿಕೆ

ಬುರ್ರನೆ ಹಾರಿ ಬಂದಿತು ನೊಣವು
ಕುಳಿತಿತು ರಾಜನ ಕತ್ತಿನಲಿ
‘ಕಚ್ಚನೆ’ಕಡಿಯಿತು ಮಂಗವು ಕೂಡಲೆ
ರೋಷಾವೇಶದ ಮತ್ತಿನಲಿ

ನೊಣವೂ ಹಾರಿತು ಪ್ರಾಣವೂ ಹೋಯಿತು
ರುಂಡವು ಬಿದ್ದಿತು ಒಂದು ಕಡೆ
ಮೂರ್ಖ ಮಂಗನ ಸ್ನೇಹವ ಮಾಡಿ
ರಾಜನು ತಪ್ಪಿದ ಜಾಣ ನಡೆ

ಸ್ನೇಹವ ಮಾಡುವ ಮೊದಲೇ ಎಲ್ಲರೂ
ಯೋಚಿಸುವುದನು ಮರೆಯದಿರಿ
ಘಟಿಸುವ ಮುಂಚೆಯೇ ಎಚ್ಚರವಿರುವ
ನೈಜ ಬುದ್ಧಿಯನು ತೊರೆಯದಿರಿ

 

#ನೀ.ಶ್ರೀಶೈಲ ಹುಲ್ಲೂರು

More from the blog

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...