Thursday, February 13, 2025

*ಮೂರ್ಖ ಮಂಗ*

ರಾಜನು ಒಂದು ಮಂಗವ ಸಾಕಿದ
ಸಲುಗೆಯಿಂದಿದ್ದನು ಅದರ ಜೊತೆ
ಸಿಂಹಾಸನದಲಿ ಕುಳಿತರೂ ಅವನು
ಅದುವೂ ಕುಳಿತಿತು ಕೇಳಿ ಕತೆ

ದಂಡಿಗೆ ಹೊರಟರೆ ತಾನೂ ಹೊರಟಿತು
ರಾಜನ ಪಡಿನೆಳಲಿನ ಹಾಗೆ
ಒಂದು ದಿನವದು ರಾಜನು ಮಲಗಿದ
ತಾಳದಾಯಿತು ಬಿಸಿಲ ಧಗೆ

ಬೆವರಿದ ರಾಜನ ನೋಡಿತು ಮಂಗವು
ಕೂಡಲೇ ತಂದಿತು ಬೀಸಣಿಕೆ
ಮುಖದ ಮೇಲಿನ ನೊಣ ಓಡಿಸಲು
ಮಾಡಿತು ಒಂದು ಹವಣಿಕೆ

ಬೀಸಣಿಕೆಯನು ಬೀಸಿದ ಭರಕೆ
ನೊಣವದು ಹಾರಿತು ಒಂದು ಕಡೆ
ಬಿಡದೇ ಬಂದಿತು ಪದೆ ಪದೆ ಕುಳಿತಿತು
ಮಂಗನು ತೋರಿತು ಜಾಣ ನಡೆ

ರಾಜನ ಪಕ್ಕದ ಖಡ್ಗವ ಹಿಡಿದು
ನೊಣಕೆ ಕೊಟ್ಟಿತು ಎಚ್ಚರಿಕೆ
ಕತ್ತರಿಸದೆ ಬಿಡೆ ನಿನ್ನನು ಈ ಸಲ
ಬರೆದುಕೊ ಬೇಕಿರೆ ಮುಚ್ಚಳಿಕೆ

ಬುರ್ರನೆ ಹಾರಿ ಬಂದಿತು ನೊಣವು
ಕುಳಿತಿತು ರಾಜನ ಕತ್ತಿನಲಿ
‘ಕಚ್ಚನೆ’ಕಡಿಯಿತು ಮಂಗವು ಕೂಡಲೆ
ರೋಷಾವೇಶದ ಮತ್ತಿನಲಿ

ನೊಣವೂ ಹಾರಿತು ಪ್ರಾಣವೂ ಹೋಯಿತು
ರುಂಡವು ಬಿದ್ದಿತು ಒಂದು ಕಡೆ
ಮೂರ್ಖ ಮಂಗನ ಸ್ನೇಹವ ಮಾಡಿ
ರಾಜನು ತಪ್ಪಿದ ಜಾಣ ನಡೆ

ಸ್ನೇಹವ ಮಾಡುವ ಮೊದಲೇ ಎಲ್ಲರೂ
ಯೋಚಿಸುವುದನು ಮರೆಯದಿರಿ
ಘಟಿಸುವ ಮುಂಚೆಯೇ ಎಚ್ಚರವಿರುವ
ನೈಜ ಬುದ್ಧಿಯನು ತೊರೆಯದಿರಿ

 

#ನೀ.ಶ್ರೀಶೈಲ ಹುಲ್ಲೂರು

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...