Thursday, February 13, 2025

*ಪರಿಶ್ರಮದ ಫಲ*

ಕಾಯಿಲೆ ಬಿದ್ದನು ಗುಂಡಪ್ಪ
ಅವನಿಗೆ ಎರಡು ಗಂಡಪ್ಪ
ಬೇಡಿದರಿಬ್ಬರು ದೇವರನು
ದೇವಾ ಕಾಯೋ ನಮ್ಮಪ್ಪ!

ಶಾಮನ ಸೇವೆಗೆ ಭೀಮನ ಸೇವೆಗೆ
ಸ್ಪಂದಿಸಲಿಲ್ಲ ಚಿಕಿತ್ಸೆಗೆ
ಸಾವು ತನಗೆ ನಿಶ್ಚಿತವೆಂದು
ಮಕ್ಕಳ ಕರೆದನು ತನ್ನೆಡೆಗೆ

ಹೊಲದಲಿ ನಿಧಿಯನು ಹೂತಿಹೆ ನಾನು
ಸೋಮಾರಿಯಾಗದಿರೆಂದನು
ಧೈರ್ಯದಿ ಅಗೆದು ಪಡೆಯಿರಿ ನೀವು
ಎನುತಾ ಕಣ್ಣು ಮುಚ್ಚಿದನು

ಮಕ್ಕಳಿಬ್ಬರು ಹೊರಟರು ಹೊಲಕೆ
ಇಬ್ಬರ ಕೈಯಲು ಗುದ್ದಲಿ ಸಲಿಕೆ
ಹೊಲವನು ಅಗೆದರೂ ನಿಧಿ ಸಿಗದಾಯಿತು
ಉಳಿಯಿತು ಹಾಗೆಯೇ ಹೆಬ್ಬಯಕೆ

ಸುರಿಯಿತು ಮಳೆಯು ಹಸಿಯಾಯಿತು ಇಳೆ
ಕಣ್ಮನ ತುಂಬಿತು ಹಸಿರು ಬೆಳೆ
ಕಾಳನು ಮಾರಿ ಪಡೆದರು ಹಣವನು
ಮೂಡಿತು ಮೊಗದಲಿ ಶ್ರಮದ ಕಳೆ

ವರುಷೊರವು ತಾ ಫಸಲೂ ಬೆಳೆಯಿತು
ಅಪ್ಪನ ಮಾತಿನ ಅರ್ಥವು ಹೊಳೆಯಿತು
ಕೈ ಕೆಸರಾದರೆ ಬಾಯ್ಮೊಸರೆಂಬ
ಗಾದೆಯ ಮರ್ಮವು ತಿಳಿಯಿತು

 

#ನೀ. ಶ್ರೀಶೈಲ ಹುಲ್ಲೂರು

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...