Monday, January 26, 2026

ಹನುಮನ ಉಪಾಯ

ಟೋಪಿಯ ಮಾರಲು ಬುಟ್ಟಿಯ ಹೊತ್ತು
ಹನುಮನು ಹೊರಟನು ಪಟ್ಟಣಕೆ
ಬಿರು ಬಿಸಿಲಿಗೆ ಬಾಯಾರಿತು ಎಂದು
ನಡೆದನು ಕೆರೆಯ ಅಂಗಳಕೆ

ನೀರನು ಕುಡಿದು ಮರದಡಿ ಕುಳಿತು
ವಿರಮಿಸಲು ಮೈಯೊಡ್ಡಿದನು
ತಣ್ಣೆಳಲಿಗೆ ತಂಗಾಳಿಗೆ ಕರಗಲು
ಸಣ್ಣಗೆ ನಿದ್ದೆಗೆ ಜಾರಿದನು

ಗಿಡದಲಿ ಕುಳಿತ ಮಂಗವು ಕೆಳಗೆ
ದಡ ದಡ ಇಳಿದು ಬಂದಿತು
ಬುಟ್ಟಿಯ ಎತ್ತಿ ಟೋಪಿಯನೆಲ್ಲ
ಮಂಗನ ಹಿಂಡಿಗೆ ಹಾಕಿತು

ತುಸು ಸಮಯದಲಿ ನಿದ್ದೆಯ ಮುಗಿಸಿ
ಹನುಮನು ಎದ್ದನು ದಡಬಡಿಸಿ
ಬುಟ್ಟಿಯೂ ಇಲ್ಲ ಟೋಪಿಗಳಿಲ್ಲ
ಗಾಬರಿಯಾದನು ತಳಮಳಿಸಿ

ಆ ಕಡೆ ಈ ಕಡೆ ಹುಡುಕಿದ ಅವನು
ಗಿಡದ ಮೇಲೆಯೂ ನೋಡಿದನು
ಟೋಪಿ ಹಾಕಿದ ಮಂಗನ ಹಿಂಡಿಗೆ
ಮನದಲೆ ಉಪಾಯ ಮಾಡಿದನು

ಟೋಪಿಯ ನೆಲಕೆ ಎಸೆದಾ ಹನುಮನ
ಮಂಗಗಳೆಲ್ಲವೂ ನೋಡಿದವು
ತಮ್ಮ ಟೋಪಿಯನೂ ನೆಲಕೇ ಎಸೆದು
ಅವನ ಹಾಗೆಯೇ ಮಾಡಿದವು

ಖುಷಿಯಲಿ ಹನುಮನು ಟೋಪಿಯ ಕೂಡಿಸಿ
ಮತ್ತೆ ಪಟ್ಟಣಕೆ ಸಾಗಿದನು
ಮಾರಿದ ಹಣವನು ಜೇಬಿಗೆ ಇಳಿಸುತ
ತನ್ನ ಬುದ್ಧಿಗೇ ಬಾಗಿದನು

 

#ನೀ.ಶ್ರೀಶೈಲ ಹುಲ್ಲೂರು

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...