Tuesday, July 15, 2025

ಬುದ್ಧಿಹೀನ ನಾಯಿ

ಆಸೆಬುರುಕ ನಾಯಿಯೊಂದು
ಅಲ್ಲಿ ಇಲ್ಲಿ ಅಲೆದು ಅಲೆದು
ಊಟ ಸಿಗದೆ ಪೆಚ್ಚು ಮೋರೆ
ಮಾಡಿಕೊಂಡಿತು

ಸಿಕ್ಕರೀಗ ತಿಂದುಬಿಡುವೆ
ಎಂದುಕೊಂಡು ನಡೆಯುವಾಗ
ದಾರಿಯಲ್ಲಿ ಎಲುಬನೊಂದ
ಕಂಡು ಹಿಗ್ಗಿತು

ಖುಷಿಯು ಹೆಚ್ಚಿ ಜಿಗಿದು ನೆಗೆದು
ಒಡನೆ ಹೋಗಿ ಅದನು ಕಚ್ಚಿ
ಓಟಕಿತ್ತ ರಭಸಕೆ ಜನ
ಬೆಚ್ಚಿ ಬಿದ್ದರು

ಎಲ್ಲ ನಾಯಿಗಳನು ದೂಡಿ
ಬಿಡದೆ ತಾನೆ ಓಡಿ ಓಡಿ
ನದಿಯ ದಡದಿ ಹೊರಟ ಅದನು
ನೋಡುತಿದ್ದರು

ಗಿಡದ ಕೆಳಗೆ ನಿಂತ ನಾಯಿ
ನೆರಳ ಸವಿಯನುಣುತ ಒಡನೆ
ನೀರು ಕುಡಿಯಲೆಂದು ನದಿಯ
ಕಡೆಗೆ ನಡೆಯಿತು

ನೀರೊಳಿರುವ ಬಿಂಬ ಕಂಡು
ಬೇರೆ ನಾಯಿ ಇದೆಂದುಕೊಂಡು
ತಪ್ಪು ತಿಳಿದ ಕ್ಷಣವೇ ಅದರ
ಎದೆಯು ಒಡೆಯಿತು

ಮರುಳುತನಕೆ ಮಾರು ಹೋಗಿ
ದುರುಳ ಬುದ್ಧಿ ತಲೆಗೆ ಏರಿ
ಹಸಿವ ಮರೆತು ಬೌ ಬೌ
ಎಂದು ಬೊಗಳಿತು

ತಿನ್ನಲೆಂದು ತಂದ ಎಲುಬು
ನೀರಿನಲ್ಲಿ ಮುಳುಗುತಿರಲು
ಕುಹಕಕಿದುವೆ ಶಿಕ್ಷೆ ಎಂದು
ತನ್ನ ತೆಗಳಿತು

 

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301
🌠9448591167

More from the blog

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...