Wednesday, February 12, 2025

*ಯೋಧನ ತಾಯ ಹರಕೆ*

ದಂಡಿನಿಂದ ದಣಿದು ಬಂದ
ಮಗನೆ ಮಲಗು ಸುಮ್ಮನೆ !
ನಿನ್ನ ಹಿರಿಮೆ ಗರಿಮೆಗಳಿಗೆ
ಸಣ್ಣದಿದು ಬಿಡು ನಮ್ಮನೆ

ನಿನ್ನ ಶೌರ್ಯ ಸಾಹಸಕ್ಕೆ
ಸಾಟಿ ಯಾರೂ ಇಲ್ಲ
‘ಮಾತೃಭೂಮಿಗಾಗಿ ಜೀವ ‘
ಬಿಡು ಚಿಂತೆಯನೆಲ್ಲ

ಹೆತ್ತ ಒಡಲು ಹೆಮ್ಮೆ ಕಡಲು
ನಿನ್ನ ದೇಶ ಪ್ರೇಮಕೆ
ಮತ್ತೆ ಜನುಮ ಎತ್ತಿ ಬರುವೆ
ನಿನ್ನಮ್ಮನಾಗುವುದಕೆ

ಬಿಸಿಲೆ ಇರಲಿ ಮಳೆಯೆ ಬರಲಿ
ಗುಡುಗು ಸಿಡಿಲು ಮಿಂಚುತಿರಲಿ
ನೋವ ಗೆಲಿದು ನುಗ್ಗುತಿರು
ಸಾವೆ ನಿನಗೆ ನಾಚುತಿರಲಿ

ನಿನಗೆ ಜನುಮ ಕೊಟ್ಟ ನಾನು
ತಾಯಿಯಾದೆ ಅಂದು
ಜೀವ ಜಗಕೆ ಸುಧೆಯ ಸುರಿದ
ಭುವಿಗೆ ಯಾರು ಮುಂದು?

ಯೋಧನೆಂಬ ಹಿರಿಮೆ ನಿನದು
ಜಗದಿ ಸರ್ವಮಾನ್ಯವು
ನಿನಗೆ ಹಾಲು ಕುಡಿಸಿ ತಣಿದ
ನನ್ನ ಎದೆಯು ಧನ್ಯವು!

#ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

ಪ್ರತಿಯೊಬ್ಬ ತಾಯಿಯ ಮನದಾಸೆ ಇದು.
ಆದರೆ ಇಂದು ಭಯೋತ್ಪಾದಕರ ದಾಳಿಯಲ್ಲಿ ಮಗನನ್ನು ಕಳೆದುಕೊಂಡ ತಾಯಿಯ ಅಳಲಿನ ಆಳಕಿಳಿಯಲಾದೀತೇ?
ಹೇ ತಾಯೇ ,
ನಿನ್ನ ತ್ಯಾಗಕೆ ನಾವೆಲ್ಲ ತೃಣ ಸಮಾನ!

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...