Wednesday, February 12, 2025

*ಸೋತ ಸಿಂಹ*

ಸಿಂಹವೊಂದು ಜಂಭದಿಂದ
ಕಾಡಲೆಲ್ಲ ತಿರುಗಿ ತಿರುಗಿ
ಪ್ರಾಣಿ ಪಕ್ಷಿಗಳನು ಕಾಡಿ
ಕಾಡಿಗೆಲ್ಲ ತಾನೆ
ರಾಜನೆಂದು ಬೀಗಿತು

ಪ್ರಾಣಿ ಪಕ್ಷಿ ಎಲ್ಲ ಬೆದರಿ
ಅದನು ಕಂಡ ಒಡನೆ ಚೆದುರಿ
ಓಡಿ ಹೋಗಿ ಮರೆಯಲೆಲ್ಲ
ಅವಿತುಕೊಂಡು ತಮ್ಮ
ಪ್ರಾಣ ಉಳಿಸಿಕೊಂಡವು

ನಿತ್ಯ ನರಕ ತಾಳದಾಗೆ
ಎಲ್ಲ ಸೇರಿ ಸಭೆಯ ಮಾಡಿ
ಬುದ್ಧಿ ಕಲಿಸೊ ದಾರಿ ಸಿಗದೆ
ಒಳಗೊಳಗೇ ಉಸಿರು
ಹಾಕಿ ಚಿಂತೆಗೊಂಡವು

ಒಂದು ದಿನವು ಬಾಲವೆತ್ತಿ
ಸಿಂಹ ತಾನು ತಿರುಗುತಿರಲು
ನೊಣವು ಬಂದು ಮೇಲೆ ಕುಳಿತು
ಸಿಂಹವನ್ನು ಪ್ರೀತಿಯಿಂದ
ನೋಡತೊಡಗಿತು

ಅದರ ಧೈರ್ಯ ಕಂಡು ಸಿಂಹ
ಉರಿದು ಬಿದ್ದು ಬಾಲ ಬಡಿದು
ನೊಣವು ಚದುರುವಂತೆ ಮಾಡಿ
ಖುಷಿಯಪಟ್ಟು ಮುಂದೆ ಮುಂದೆ
ಸಾಗತೊಡಗಿತು

ಬಿಡದ ನೊಣವು ಮತ್ತೆ ಹಾರಿ
ಅದರ ಮುಖದ ಮೇಲೆ ಏರಿ
ರೆಕ್ಕೆ ಬಡಿದು ಸ್ವರವ ತೆಗೆದು
ಗುಂಯ್ ಗುಂಯ್ ರಾಗವನ್ನು
ಹಾಡತೊಡಗಿತು

ಸಿಟ್ಟಿಗೆದ್ದ ಸಿಂಹ ತಾನು
ತನ್ನ ಪಂಜದಿಂದ ಹೊಡೆದು
ಮುಖಕೆ ಗಾಯ ಮಾಡಿಕೊಂಡು
ಹಾರಿ ಹೋದ ನೊಣದ ಕಡೆಗೆ
ನೋಡತೊಡಗಿತು

ಮತ್ತೆ ಕುಳಿತ ನೊಣಕೆ ಬಿಡದೆ
ಮತ್ತೆ ಬಡಿದು ಮುಖದ ತುಂಬ
ಗಾಯ ಮಾಡಿಕೊಂಡು ತಾನು
ನೊಣಕೆ ಸೋತು ಸಪ್ಪೆ ಮೋರೆ
ಹಾಕಿಕೊಂಡಿತು

ಬಲವು ತನ್ನಲಿದೆಯು ಎಂಬ
ಹಮ್ಮು ಬಿಮ್ಮು ಬೇಡ ನಮಗೆ
ಎಲ್ಲರೊಡನೆ ಬೆರೆತು ನಾವು
ಹಾಡಿ ಕುಣಿದು ಜಗವ ನಗಿಸಿ
ಸೊಗದಿ ಬಾಳುವ

 

#ನೀ.ಶ್ರೀಶೈಲ ಹುಲ್ಲೂರು

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...