Wednesday, July 9, 2025

*ಸೋತ ಸಿಂಹ*

ಸಿಂಹವೊಂದು ಜಂಭದಿಂದ
ಕಾಡಲೆಲ್ಲ ತಿರುಗಿ ತಿರುಗಿ
ಪ್ರಾಣಿ ಪಕ್ಷಿಗಳನು ಕಾಡಿ
ಕಾಡಿಗೆಲ್ಲ ತಾನೆ
ರಾಜನೆಂದು ಬೀಗಿತು

ಪ್ರಾಣಿ ಪಕ್ಷಿ ಎಲ್ಲ ಬೆದರಿ
ಅದನು ಕಂಡ ಒಡನೆ ಚೆದುರಿ
ಓಡಿ ಹೋಗಿ ಮರೆಯಲೆಲ್ಲ
ಅವಿತುಕೊಂಡು ತಮ್ಮ
ಪ್ರಾಣ ಉಳಿಸಿಕೊಂಡವು

ನಿತ್ಯ ನರಕ ತಾಳದಾಗೆ
ಎಲ್ಲ ಸೇರಿ ಸಭೆಯ ಮಾಡಿ
ಬುದ್ಧಿ ಕಲಿಸೊ ದಾರಿ ಸಿಗದೆ
ಒಳಗೊಳಗೇ ಉಸಿರು
ಹಾಕಿ ಚಿಂತೆಗೊಂಡವು

ಒಂದು ದಿನವು ಬಾಲವೆತ್ತಿ
ಸಿಂಹ ತಾನು ತಿರುಗುತಿರಲು
ನೊಣವು ಬಂದು ಮೇಲೆ ಕುಳಿತು
ಸಿಂಹವನ್ನು ಪ್ರೀತಿಯಿಂದ
ನೋಡತೊಡಗಿತು

ಅದರ ಧೈರ್ಯ ಕಂಡು ಸಿಂಹ
ಉರಿದು ಬಿದ್ದು ಬಾಲ ಬಡಿದು
ನೊಣವು ಚದುರುವಂತೆ ಮಾಡಿ
ಖುಷಿಯಪಟ್ಟು ಮುಂದೆ ಮುಂದೆ
ಸಾಗತೊಡಗಿತು

ಬಿಡದ ನೊಣವು ಮತ್ತೆ ಹಾರಿ
ಅದರ ಮುಖದ ಮೇಲೆ ಏರಿ
ರೆಕ್ಕೆ ಬಡಿದು ಸ್ವರವ ತೆಗೆದು
ಗುಂಯ್ ಗುಂಯ್ ರಾಗವನ್ನು
ಹಾಡತೊಡಗಿತು

ಸಿಟ್ಟಿಗೆದ್ದ ಸಿಂಹ ತಾನು
ತನ್ನ ಪಂಜದಿಂದ ಹೊಡೆದು
ಮುಖಕೆ ಗಾಯ ಮಾಡಿಕೊಂಡು
ಹಾರಿ ಹೋದ ನೊಣದ ಕಡೆಗೆ
ನೋಡತೊಡಗಿತು

ಮತ್ತೆ ಕುಳಿತ ನೊಣಕೆ ಬಿಡದೆ
ಮತ್ತೆ ಬಡಿದು ಮುಖದ ತುಂಬ
ಗಾಯ ಮಾಡಿಕೊಂಡು ತಾನು
ನೊಣಕೆ ಸೋತು ಸಪ್ಪೆ ಮೋರೆ
ಹಾಕಿಕೊಂಡಿತು

ಬಲವು ತನ್ನಲಿದೆಯು ಎಂಬ
ಹಮ್ಮು ಬಿಮ್ಮು ಬೇಡ ನಮಗೆ
ಎಲ್ಲರೊಡನೆ ಬೆರೆತು ನಾವು
ಹಾಡಿ ಕುಣಿದು ಜಗವ ನಗಿಸಿ
ಸೊಗದಿ ಬಾಳುವ

 

#ನೀ.ಶ್ರೀಶೈಲ ಹುಲ್ಲೂರು

More from the blog

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ಸರಕಾರಿ ಕಿ. ಪ್ರಾ. ಶಾಲೆ ಏಮಾಜೆ : ‘ಅಕ್ಷಯ ಪಾತ್ರೆ’ ಕಾರ್ಯಕ್ರಮ ಉದ್ಘಾಟನೆ..

ಬಂಟ್ವಾಳ : ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಸೇವನೆಯ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರವು ಪೋಷಣಾ ಅಭಿಯಾನವನ್ನು ಜಾರಿಗೊಳಿಸಿದೆ. ಆ ಪ್ರಯುಕ್ತವಾಗಿ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದ. ಕ. ಜಿ....