Thursday, July 10, 2025

*ದುಂಡು ಮಲ್ಲಿಗೆ*

ಹಚ್ಚ ಹಸುರಿನ ಗಿಡದೆ,
ಸಂತಸದಿಂದ ಬೆಳೆದಳೀ ಮಲ್ಲಿಗೇ,
ದುಂಬಿಯ ಕೂಗಿ ಕರೆದಿಹಳಾಕೆ
ನವ ವಸಂತನ ಆಗಮನಕೆ,

ಏಳು ಸುತ್ತಿನ ರೇಖುಗಳಲಿ
ಮರಳಿ ಅರಳುತಲಿದೆ ನಗೆಯು,
ಸಪ್ತ ಮಾತೃಕೆಯರ ತೆರದಿ,
ಹೊರ ಹೊಮ್ಮುತಿದೇ ಈ ಸುವಾಸನೆ,,

ಆಘ್ರಾಣಿಸಲೊಂದು ಖುಷಿಯಾಗಿ
ಮೈ ಮರೆತಿಹಳು ಚೆಲುವೆ,
ಉಲ್ಲಾಸದಿ ತೇಲುತಲಿ ಗರಿಬಿಚ್ಚಿ
ಅಂದವ ತಂದಳವಳು ಅರಿವಿಲ್ಲದೆ,

ನೀಲಿಯಾ ಆಗಸದಲ್ಲಿ
ಹರಿದಾಡಿದ ಬೆಳ್ಳಿಮೋಡಗಳಂತೆ,
ಯಾರ ಆಸರೇ, ಭಯವು ಇಲ್ಲದೆ
ಘಮ ಘಮಿಸುತ ಹೂ ಗಳ ರಾಣಿ..

ಕೇದಿಗೆ, ಸಂಪಿಗೆಗಳು
ಹೊಸ ಪರಿಮಳವ ಬೀರುತಿರೆ,
ನಾನೇನ ಕಡಿಮೆಯೆಂದು ಎದೆ ಉಬ್ಬಿಸಿರೆ,
ಅವಳೊನಪಿನ ಉಲ್ಲಾಸ ಹೆಚ್ಚಾಯಿತು,

ಮನದಂಗಳದಿ ಮೂಡಿ ಬಾರೆ,
ನೀ ಏಳು ಸುತ್ತಿನಾ ದುಂಡು ಮಲ್ಲಿಗೆ,
ಸುಂದರವಾದ ಮನಸ್ಸಿನಲ್ಲಿ
ನೀ ಬಾರೆ ಸೂಜಿಗಾದ ಮಲ್ಲಿಗೆ…

 

✍ *ರವೀ ಚಿನಾ ಹಳ್ಳಿ*

More from the blog

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...