Monday, January 26, 2026

ಜೀವನ

ನೀನು ಸಿರಿವಂತನಾಗಿ ಬದುಕುವುದ ನಾ ನೋಡಲಾರೆ!
ನೀನು ಕಾರಿನಲ್ಲಿ ಕುಟುಂಬದೊಂದಿಗೆ ರಜಾ ದಿನಗಳಲಿ ಸುತ್ತುವುದ ನಾ ಸೈರಿಸಲಾರೆ!

ನೀನೇ ದುಡಿದ ಹಣದಿ ನಿನ್ಮ ಹೆಂಡತಿ ಮಕ್ಕಳಿಗೆ ಉಡುಗೊರೆ ಕೊಡುವುದ ನಾ ತಾಳಲಾರೆ!
ನಿನ್ನ ಸಂಬಳದ ಉಳಿತಾಯದಿ ನೀ ಕಟ್ಟಿಸಿದ ಬಹು ಮಹಡಿಯ ಮನೆಯ ನಾ ನೋಡಿ ಸುಮ್ಮನಿರಲಾರೆ!

ನೀ ವೃತ್ತಿಯಲಿ ಪದೋನ್ನತಿ ಪಡೆಯುವುದನು ನಾ ಅರಗಿಸಿಕೊಳ್ಳಲಾರೆ!
ನಿನ್ನ ಮನೆಗೆ ತಂಪಿನ ಪೆಟ್ಟಿಗೆ, ಸ್ಮಾರ್ಟ್ ಟಿವಿ, ಸ್ಪೀಕರ್, ಬಂದರೆ ನಾ ಅದು ಹೇಗೆ ಸುಮ್ಮನಿರುವೆ?

ನೀನೆನಗೆ ಸಂಬಂಧಿಯಲ್ಲ,
ಆದರೂ ಹೊಟ್ಟೆಕಿಚ್ಚು ಬಿಡಬೇಕಲ್ಲ!
ನಿನ್ನ ನಗೆ ಕೊಲ್ಲುವುದೆನ್ನ ಹೃದಯ!
ನೀ ನನಗಿಂತ ಮೇಲೇರಬಾರದು!

ನಿನ್ನ ಏಳಿಗೆಯ ಸಹಿಸದವನು ನಾನು!
ನಿನ್ನ ಎತ್ತರವ ಕಂಡು ಮೇಲೆ ಸಂತಸಪಟ್ಟು ಹರಸಿದರೂ ಮನದಲ್ಲೆ ಮರುಗುವವ ನಾನು!
ನೀ ನನ್ನ ಕಣ್ಣೆದುರಲ್ಲಿ ಬೆಳೆಯಬಾರದು!
ನೀ ನನಗಿಂತ ಮೇಲೇರಬಾರದು!

 

@ಪ್ರೇಮ್@

More from the blog

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...

ವಿಟ್ಲ ಜಾತ್ರೋತ್ಸವದಲ್ಲಿ ಮನರಂಜಿಸಿದ ವಿಟ್ಲೋತ್ಸವ..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಲಾವಧಿ ಜಾತ್ರೋತ್ಸವದಲ್ಲಿ ಮಂಗಳವಾರ ರಾತ್ರಿ ದೇವರ ಹೂ ತೇರು ಉತ್ಸವ ನಡೆಯಿತು. ವಿಆರ್ ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ 33...

ಮಾಣಿ : ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮ..

ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ಸಂಘ ಸಂಸ್ಥೆಗಳ ಜಂಟಿ...