Monday, July 14, 2025

ಜೀವನ

ನೀನು ಸಿರಿವಂತನಾಗಿ ಬದುಕುವುದ ನಾ ನೋಡಲಾರೆ!
ನೀನು ಕಾರಿನಲ್ಲಿ ಕುಟುಂಬದೊಂದಿಗೆ ರಜಾ ದಿನಗಳಲಿ ಸುತ್ತುವುದ ನಾ ಸೈರಿಸಲಾರೆ!

ನೀನೇ ದುಡಿದ ಹಣದಿ ನಿನ್ಮ ಹೆಂಡತಿ ಮಕ್ಕಳಿಗೆ ಉಡುಗೊರೆ ಕೊಡುವುದ ನಾ ತಾಳಲಾರೆ!
ನಿನ್ನ ಸಂಬಳದ ಉಳಿತಾಯದಿ ನೀ ಕಟ್ಟಿಸಿದ ಬಹು ಮಹಡಿಯ ಮನೆಯ ನಾ ನೋಡಿ ಸುಮ್ಮನಿರಲಾರೆ!

ನೀ ವೃತ್ತಿಯಲಿ ಪದೋನ್ನತಿ ಪಡೆಯುವುದನು ನಾ ಅರಗಿಸಿಕೊಳ್ಳಲಾರೆ!
ನಿನ್ನ ಮನೆಗೆ ತಂಪಿನ ಪೆಟ್ಟಿಗೆ, ಸ್ಮಾರ್ಟ್ ಟಿವಿ, ಸ್ಪೀಕರ್, ಬಂದರೆ ನಾ ಅದು ಹೇಗೆ ಸುಮ್ಮನಿರುವೆ?

ನೀನೆನಗೆ ಸಂಬಂಧಿಯಲ್ಲ,
ಆದರೂ ಹೊಟ್ಟೆಕಿಚ್ಚು ಬಿಡಬೇಕಲ್ಲ!
ನಿನ್ನ ನಗೆ ಕೊಲ್ಲುವುದೆನ್ನ ಹೃದಯ!
ನೀ ನನಗಿಂತ ಮೇಲೇರಬಾರದು!

ನಿನ್ನ ಏಳಿಗೆಯ ಸಹಿಸದವನು ನಾನು!
ನಿನ್ನ ಎತ್ತರವ ಕಂಡು ಮೇಲೆ ಸಂತಸಪಟ್ಟು ಹರಸಿದರೂ ಮನದಲ್ಲೆ ಮರುಗುವವ ನಾನು!
ನೀ ನನ್ನ ಕಣ್ಣೆದುರಲ್ಲಿ ಬೆಳೆಯಬಾರದು!
ನೀ ನನಗಿಂತ ಮೇಲೇರಬಾರದು!

 

@ಪ್ರೇಮ್@

More from the blog

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...