Sunday, July 13, 2025

ಹೀಗೊಂದು ಮಾತುಕತೆ

ಮನೆಯಲ್ಲಿನ ಟಿ.ವಿ ಫ್ರಿಜ್ಜುಗಳು
ಹರಟೆಯಲ್ಲಿ ತೊಡಗಿದ್ದವು.
ಟಿವಿ ಯೊಂದಿಗೆ ಬಟ್ಟೆ ಒಗೆಯುವ ಯಂತ್ರವೂ ಬಂತು!

ಈಗ ಮನೆಯ ಒಡೆಯರು ನಾವೇ!
ಮಕ್ಕಳು ಶಾಲೆಗೆ, ಪೋಷಕರು ಕೆಲಸಕ್ಕೆ!
ಹಿರಿಯರೆಲ್ಲ ಆಶ್ರಮದೆಡೆಗೆ..
ಮುಗುಳುನಗೆ ಬೀರಿದವು ಉಳಿದವು!

“ತಿಂಗಳುಗಟ್ಟಲೆ ನನ್ನೊಳಗೆ ತಂದಿಟ್ಟು
ಮಕ್ಕಳಿಗೂ ಕೊಡದೆ, ತಾವೂ ತಿನ್ನದೆ
ಬಿಸಾಕಿ ಬಿಡುವರು ಮೂರ್ಖರು” ಫ್ರಿಜ್ಜೆಂದಿತು!

ಬಟನ್ ಕಿತ್ಹೋದರೂ, ಬಟ್ಟೆ ಹರಿದ್ಹೋದರೂ ಸರಿ
ನನ್ನೊಳಗೆ ತುರುಕಿ ಮೊಬೈಲ್ ನೋಡುವರು!
ಕೆಲವೊಮ್ಮೆ ಸ್ವಿಚ್ ಹಾಕಲೂ ಮರೆಯುವರು!
ವಾಷಿಂಗ್ ಮಷೀನ್ ರಾಗ ಹಾಡಿತು!

“ನನ್ನ ಮುಂದೆ ಕುಳಿತರೆ ಮುಗಿಯಿತು,
ಒಂದಾದ ಬಳಿಕ ಮೆಘಾ ಸೀರಿಯಲ್”
ರಿಮೋಟಿಗಾಗಿ ಕಚ್ಚಾಟ, ಹೊಡೆದಾಟ
ಊಟ, ತಿಂಡಿಯೂ ನನ್ನೆದುರೇ..
ಟಿ.ವಿ. ಹೆಮ್ಮೆಯಿಂದ ಉಲಿಯಿತು!

ಕಂಪ್ಯೂಟರ್ ಇಷ್ಟೊತ್ತು ಸುಮ್ಮನಿದ್ದು, ಈಗ
“ನೀವೇನೇ ಹೇಳಿ, ನಾನೇ ದೊಡ್ಡಣ್ಣ,
ಪ್ರಪಂಚವೆಲ್ಲಾ ನನ್ನೊಳಗೇ ಇದೆ
ಈಗ ನಿಮ್ಮನ್ನಾರು ಕೇಳರು!”

ಹಬ್ಬದಡುಗೆಯೂ ನನ್ನ ಮೂಲಕವೇ ಆರ್ಡರ್!
ಹೆಣ ಸುಡಲೂ ಆರ್ಡರ್!
ನೀನಾರಿಗಾದೆಯೋ ಎಲೆಮಾನವ!

 

@ಪ್ರೇಮ್@

More from the blog

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...