Wednesday, February 12, 2025

ಹೀಗೊಂದು ಮಾತುಕತೆ

ಮನೆಯಲ್ಲಿನ ಟಿ.ವಿ ಫ್ರಿಜ್ಜುಗಳು
ಹರಟೆಯಲ್ಲಿ ತೊಡಗಿದ್ದವು.
ಟಿವಿ ಯೊಂದಿಗೆ ಬಟ್ಟೆ ಒಗೆಯುವ ಯಂತ್ರವೂ ಬಂತು!

ಈಗ ಮನೆಯ ಒಡೆಯರು ನಾವೇ!
ಮಕ್ಕಳು ಶಾಲೆಗೆ, ಪೋಷಕರು ಕೆಲಸಕ್ಕೆ!
ಹಿರಿಯರೆಲ್ಲ ಆಶ್ರಮದೆಡೆಗೆ..
ಮುಗುಳುನಗೆ ಬೀರಿದವು ಉಳಿದವು!

“ತಿಂಗಳುಗಟ್ಟಲೆ ನನ್ನೊಳಗೆ ತಂದಿಟ್ಟು
ಮಕ್ಕಳಿಗೂ ಕೊಡದೆ, ತಾವೂ ತಿನ್ನದೆ
ಬಿಸಾಕಿ ಬಿಡುವರು ಮೂರ್ಖರು” ಫ್ರಿಜ್ಜೆಂದಿತು!

ಬಟನ್ ಕಿತ್ಹೋದರೂ, ಬಟ್ಟೆ ಹರಿದ್ಹೋದರೂ ಸರಿ
ನನ್ನೊಳಗೆ ತುರುಕಿ ಮೊಬೈಲ್ ನೋಡುವರು!
ಕೆಲವೊಮ್ಮೆ ಸ್ವಿಚ್ ಹಾಕಲೂ ಮರೆಯುವರು!
ವಾಷಿಂಗ್ ಮಷೀನ್ ರಾಗ ಹಾಡಿತು!

“ನನ್ನ ಮುಂದೆ ಕುಳಿತರೆ ಮುಗಿಯಿತು,
ಒಂದಾದ ಬಳಿಕ ಮೆಘಾ ಸೀರಿಯಲ್”
ರಿಮೋಟಿಗಾಗಿ ಕಚ್ಚಾಟ, ಹೊಡೆದಾಟ
ಊಟ, ತಿಂಡಿಯೂ ನನ್ನೆದುರೇ..
ಟಿ.ವಿ. ಹೆಮ್ಮೆಯಿಂದ ಉಲಿಯಿತು!

ಕಂಪ್ಯೂಟರ್ ಇಷ್ಟೊತ್ತು ಸುಮ್ಮನಿದ್ದು, ಈಗ
“ನೀವೇನೇ ಹೇಳಿ, ನಾನೇ ದೊಡ್ಡಣ್ಣ,
ಪ್ರಪಂಚವೆಲ್ಲಾ ನನ್ನೊಳಗೇ ಇದೆ
ಈಗ ನಿಮ್ಮನ್ನಾರು ಕೇಳರು!”

ಹಬ್ಬದಡುಗೆಯೂ ನನ್ನ ಮೂಲಕವೇ ಆರ್ಡರ್!
ಹೆಣ ಸುಡಲೂ ಆರ್ಡರ್!
ನೀನಾರಿಗಾದೆಯೋ ಎಲೆಮಾನವ!

 

@ಪ್ರೇಮ್@

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...