Thursday, June 26, 2025

ನನ್ನಮ್ಮ-ನನ್ನಮ್ಮ

ಅಮ್ಮನ ಹೊಟ್ಟೆಯೊಳಗಡಿಯಿಡುವ ಮುನ್ನವೇ
ಹಣೆಬರಹ ಬರೆದ ಪ್ರಕೃತಿ ನನ್ನಮ್ಮ//
ನವ ಮಾಸ ಹೊತ್ತು,ಹೆತ್ತು ಸಾಕಿ,
ಸಲಹಿ,ಬೆಳೆಸಿ ಬದುಕಲು ಕಲಿಸಿದ ನನ್ನಮ್ಮ//
ಮಳೆ,ಬೆಳೆ,ನೀರು,ಶುದ್ಧ ಗಾಳಿಯ ಒದಗಿಸಿದ
ಪರಿಸರ ಹಸಿರು ಮಾತೆ ನನ್ನಮ್ಮ//
ಹೊತ್ತು,ನೋಡಿ,ಸಲಹಿ,ಬೆಳೆಸಿ,ಬೈದು
ಹೊಟ್ಟೆ ತುಂಬಾ ತಿನ್ನಿಸಿ ಮುದ್ದಿಸಿದ ಅಜ್ಜಿಯೂ ನನ್ನಮ್ಮ//
ಹೊತ್ತು ಹೊತ್ತಿಗೆ ಸರಿಯಾಗಿ ನಮಗಾಗಿ ಬೇಯಿಸಿ,ಬಡಿಸಿ,
ಆರೋಗ್ಯ ಕೆಟ್ಟಾಗ ಹಪಹಪಿಸಿದ ಹಾಸ್ಟೆಲ್ ಆಂಟಿಯೂ ನನ್ನಮ್ಮ//
ಒಬ್ಬಳೇ ಅಡಿಗೆ ಗೊತ್ತಿಲ್ಲದೆ ಏನನ್ನೋ ಹೇಗೋ
ಬೇಯಿಸಿ ತಿನ್ನುವಾಗ ಆಗಾಗ ಬಂದು ಸಲಹೆ ಕೊಟ್ಟು ಕಲಿಸಿದ
ಪಕ್ಕದ ಮನೆಯಾಂಟಿ ನನ್ನಮ್ಮ//
ಎಲ್ಲೂ ದಿಕ್ಕು ಕಾಣದೆ,ಪರದೇಶಿಯಾಗಿ
ಯಾವುದೋ ಊರಲ್ಲಿ ಕೆಲಸಕ್ಕೆ ನಿಂತಾಗ
ಅನ್ನಪೂರ್ಣೇಶ್ವರಿಯಾದ ಪಿ.ಜಿ.ಆಂಟಿ ನನ್ನಮ್ಮ//
ಮಗು ಚಿಕ್ಕದಿರುವಾಗ, ಸಾಕಲು ಗೊತ್ತಿರದೆ ಪರದಾಡುತಲಿರುವಾಗ
ನನ್ನ ಮಗುವ ತನ್ನ ಮಗುವಂತೆ ಸಾಕಿದ ಯಾರದೋ ಅಜ್ಜಿ ನನ್ನಮ್ಮ//
ಈ ಲೋಕದ ಮಕ್ಕಳನೆಲ್ಲ ಪೊರೆವ
ಪ್ರೀತಿ ಕೊಟ್ಟು ಸಲಹುವ ದುರ್ಗಾ ಮಾತೆ ನನ್ನಮ್ಮ//
ಊಟಕ್ಕೆ,ಬಟ್ಟೆಗೆ ಹಣವ ಒದಗಿಸಿ ಕೊಟ್ಟು
ನನ್ನ ಕೆಲಸಕ್ಕೆ ಬದಲಾಗಿ ನನ್ನಲ್ಲಿಗೆ ಬರುವ ಲಕ್ಷ್ಮಿ
ನನ್ನಮ್ಮ//
ನನ್ನಲ್ಲಿರುವ ವಿದ್ಯೆಯದು ಹಗಲಿರುಳು ಜತೆಗಿಹುದು
ನಾ ಹೋದೆಡೆಯೆಲ್ಲ ಸಹಕರಿಸಿ ಸಾಕುವ ವಿದ್ಯಾ ಶಾರದೆ ನನ್ನಮ್ಮ//
ನನಗೆ ಉಸಿರಿತ್ತು ಕನ್ನಡ ಕಲಿಸಿ,ಕರುನಾಡಲಿ ಬೆಳೆಸುತಲಿರುವ
ಕನ್ನಡ ಮಾತೆ ಭುವನೇಶ್ವರಿ ನನ್ನಮ್ಮ//
ಮಾತೆಯ ಮಾತೆ, ಪ್ರಪಂಚದ ಯಾವ ಮೂಲೆಗೆ ತಿರುತಿರುಗಿದರೂ
ನಾನು ಭಾರತೀಯಳೆಂಬ ಹೆಮ್ಮೆಯ ಕೊಟ್ಟ ಭಾರತ ಮಾತೆ ನನ್ನಮ್ಮ//

@ಪ್ರೇಮ್@

More from the blog

Installation Ceremony : ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ..

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.26 ರಂದು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಪ್ರಭಾಕರ ಪ್ರಭು ಆಗ್ರಹ..

ಬಂಟ್ವಾಳ : ರಾಜ್ಯದ ವಸತಿ ಇಲಾಖೆಯ ಅಧಿನದಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರಾದ ಬಿ. ಆರ್. ಪಾಟೀಲ್ ಯವರು ವಸತಿ ಸಚಿವರಾದ ಜಮೀರ್...