Monday, January 26, 2026

*ಭಾವಯಾನ*- *ತಿರುವು*

ಹೀಗೊಂದು ತಿರುವು
ಬೇಕಾಗಿರಲಿಲ್ಲ ಬಾಳಿನಲಿ
ನಡೆದುಬಂದ ದಾರಿಯ
ನೆನಪು ಮಾತ್ರ ಮನದಲ್ಲಿ!

ನೀ ಮುಸ್ಲಿಂ, ನಾ ಹಿಂದು
ಮಾತೆಂದೂ ಬಂದಿರಲಿಲ್ಲ
ನಮ್ಮ ನಡುವಲಿ
ಚಿನ್ನಿದಾಂಡು, ಲಗೋರಿಯಲಿ
ಮೈ ಮರೆತಿದ್ದೆವು ಬಾಲ್ಯದಲಿ!

ನಮ್ಮನೆ ದೀಪಾವಳಿಗೆ ನೀನೇ ಅತಿಥಿ..
ನಿಮ್ಮನೆ ಈದ್ಮಿಲಾದ್ಗೆ ಮನೆಯವರಿಗೆಲ್ಲ
ನಾನೇ ಗೆಳತಿ!
ತುಪ್ಪದೂಟದ ಸವಿಯು ಮರೆತು ಹೋಗಿಲ್ಲ
ಪಾಯಸದ ಕಂಪು ಮಾಸಿ ಹೋಗಿಲ್ಲ!

ಬೆಳೆದುಬಿಟ್ಟೆವು ನೋಡು
ಸಮಾಜದ ಜೊತೆಗೆ ನಾವೂ ಕೂಡ
ಜಾತಿ, ಧರ್ಮದ ವಿಷಬೀಜ
ಹೆಮ್ಮರವಾಯಿತಲ್ಲ ಗೆಳೆಯಾ ?

ನೀ ನನ್ನ ನೋಡಿ ನಸುನಕ್ಕರೂ
ರುದ್ರತಾಂಡವ ಸುತ್ತಮುತ್ತಲೆಲ್ಲ..
ಸುಂದರ ಸ್ನೇಹ ಬಾಂಧವ್ಯಕೆ
ಜಾತಿಯೇ ಮುಳ್ಳಾಯಿತಲ್ಲ ?

ಪ್ರಪಂಚದ ಗೊಡವೆನೇ ನಮಗೆ ಬೇಡ
ಬಾ ಮತ್ತೊಮ್ಮೆ ಮಕ್ಕಳಾಗಿಬಿಡೋಣ
ರಕ್ತಪಿಪಾಸುಗಳ ಹಂಗೇ ನಮಗೆ ಬೇಡ
ಮುಗ್ಧತೆಯ ಲೋಕದಿ ಹಕ್ಕಿಗಳಂತೆ ವಿಹರಿಸೋಣ!!

 

*ಪ್ರಮೀಳಾ ರಾಜ್*

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...