Wednesday, July 9, 2025

*ಭಾವಯಾನ*- *ತಿರುವು*

ಹೀಗೊಂದು ತಿರುವು
ಬೇಕಾಗಿರಲಿಲ್ಲ ಬಾಳಿನಲಿ
ನಡೆದುಬಂದ ದಾರಿಯ
ನೆನಪು ಮಾತ್ರ ಮನದಲ್ಲಿ!

ನೀ ಮುಸ್ಲಿಂ, ನಾ ಹಿಂದು
ಮಾತೆಂದೂ ಬಂದಿರಲಿಲ್ಲ
ನಮ್ಮ ನಡುವಲಿ
ಚಿನ್ನಿದಾಂಡು, ಲಗೋರಿಯಲಿ
ಮೈ ಮರೆತಿದ್ದೆವು ಬಾಲ್ಯದಲಿ!

ನಮ್ಮನೆ ದೀಪಾವಳಿಗೆ ನೀನೇ ಅತಿಥಿ..
ನಿಮ್ಮನೆ ಈದ್ಮಿಲಾದ್ಗೆ ಮನೆಯವರಿಗೆಲ್ಲ
ನಾನೇ ಗೆಳತಿ!
ತುಪ್ಪದೂಟದ ಸವಿಯು ಮರೆತು ಹೋಗಿಲ್ಲ
ಪಾಯಸದ ಕಂಪು ಮಾಸಿ ಹೋಗಿಲ್ಲ!

ಬೆಳೆದುಬಿಟ್ಟೆವು ನೋಡು
ಸಮಾಜದ ಜೊತೆಗೆ ನಾವೂ ಕೂಡ
ಜಾತಿ, ಧರ್ಮದ ವಿಷಬೀಜ
ಹೆಮ್ಮರವಾಯಿತಲ್ಲ ಗೆಳೆಯಾ ?

ನೀ ನನ್ನ ನೋಡಿ ನಸುನಕ್ಕರೂ
ರುದ್ರತಾಂಡವ ಸುತ್ತಮುತ್ತಲೆಲ್ಲ..
ಸುಂದರ ಸ್ನೇಹ ಬಾಂಧವ್ಯಕೆ
ಜಾತಿಯೇ ಮುಳ್ಳಾಯಿತಲ್ಲ ?

ಪ್ರಪಂಚದ ಗೊಡವೆನೇ ನಮಗೆ ಬೇಡ
ಬಾ ಮತ್ತೊಮ್ಮೆ ಮಕ್ಕಳಾಗಿಬಿಡೋಣ
ರಕ್ತಪಿಪಾಸುಗಳ ಹಂಗೇ ನಮಗೆ ಬೇಡ
ಮುಗ್ಧತೆಯ ಲೋಕದಿ ಹಕ್ಕಿಗಳಂತೆ ವಿಹರಿಸೋಣ!!

 

*ಪ್ರಮೀಳಾ ರಾಜ್*

More from the blog

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ಸರಕಾರಿ ಕಿ. ಪ್ರಾ. ಶಾಲೆ ಏಮಾಜೆ : ‘ಅಕ್ಷಯ ಪಾತ್ರೆ’ ಕಾರ್ಯಕ್ರಮ ಉದ್ಘಾಟನೆ..

ಬಂಟ್ವಾಳ : ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಸೇವನೆಯ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರವು ಪೋಷಣಾ ಅಭಿಯಾನವನ್ನು ಜಾರಿಗೊಳಿಸಿದೆ. ಆ ಪ್ರಯುಕ್ತವಾಗಿ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದ. ಕ. ಜಿ....

ಬೊಂಡಾಲದಲ್ಲಿ ಉತ್ಸಾಹಿ ಉಚಿತ ಕಣ್ಣಿನ ತಪಸಣಾ ಶಿಬಿರ..

ಬಂಟ್ವಾಳ :ಉತ್ಸಾಹಿ ತರುಣ ವ್ರೃಂದ(ರಿ) ಬೊಂಡಾಲ ಹಾಗೂ ಕಾಮತ್ ಒಪ್ಟಿಕಲ್ಸ್, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಸಣಾ ಶಿಬಿರ ನಡೆಯಿತು. ಊರಿನ ಅನೇಕ ಹಿರಿಯರು, ಮಹಿಳೆಯರು ಹಾಗೂ ನಾಗರಿಕ ಬಂಧುಗಳು ಇದರ...