Thursday, June 26, 2025

*ಭಾವಯಾನ* – *ಸುಕೋಮಲೆ*

ಚೆಂದ ಚೆಂದದ ಚೆಂದವಲ್ಲಿ ನೀನು

ಚೆಂದದ ನಗುವಿನ ತಾರೆಯೆ…

ತುಂಟ ಕಂಗಳ ಚೆಲುವ ನೋಟಕೆ

ಚಂದಿರ ತಾನು ಸೋತನೆ?

 

ಕೆನ್ನೆ ಚುಂಬಿಪ ಮುಂಗುರುಳು

ನಗುವಿಗೆ ಮರೆಯಾಯ್ತು ಕಾರಿರುಳು….

ಕೊರಳನು ತಬ್ಬಿದ ಹೊನ್ನಿನ ಮಾಲೆಯು

ಚೆಲುವಿಗೆ ಮನಸೋತು ಜನಿಸಿದ ಕವಿತೆಯು!!

 

ಕಪ್ಪನೆ ನೀಳ ಕೇಶರಾಷಿಯನು

ಸಿಂಗರಿಸಿ ನಕ್ಕಿತು ಮಲ್ಲಿಗೆಯು

ನೀ ಮಿಗಿಲೋ,ನಾ ಮಿಗಿಲೋ ಬಣ್ಣದಲ್ಲಿ

ಒಳಗೊಳಗೆ ಸ್ಪರ್ಧೆಯು ಕುಸುಮ ಕೋಮಲೆಯಲ್ಲಿ!!

 

ಕೆಂಪನೆ ವರ್ಣದ ಮದರಂಗಿಯು

ನಾಳೆಗಳ ಕನಸುಗಳಿಗೆ ಬಣ್ಣ ತುಂಬಿದೆ…

ನೀನುಟ್ಟ ಚೆಂದದ ಜರತಾರಿ ಸೀರೆ

ನಿನ್ನಯ ಸೌಂದರ್ಯಕೆ ಮೆರುಗು ನೀಡಿದೆ!!

 

ಚೆಲುವ ಚೆನ್ನಿಕೆ ನನ್ನ ಓ ಹೊನ್ನ ತಾರೆ

ಎಂದೆಂದೂ ನಗುತಿರು ಬಾಳ ಹೊಸಿಲಲ್ಲಿ…..

ತುಟಿಯಲ್ಲಿ ಮಿನುಗುವ ಆ ಮಂದಹಾಸ

ಕಡೆವರೆಗೂ ಉಳಿಯಲಿ ಬದುಕಿನಲಿ!!

 

*ಪ್ರಮೀಳಾ ರಾಜ್*

More from the blog

ವಿಟ್ಲ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ವಿಟ್ಲ ವರ್ತಕರ ಸಂಘದಿಂದ ತಯಾರಿಸಲಾದ ಪ್ಲಾಸ್ಟಿಕ್ ನಿಷೇಧದ ಸ್ಟಿಕ್ಕರ್ ನ್ನು ವರ್ತಕರ ಸಂಘದ ಸಹಕಾರದೊಂದಿಗೆ ವಿಟ್ಲ ಪೇಟೆಯ...

Installation Ceremony : ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ..

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.26 ರಂದು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...