Tuesday, July 15, 2025

*ಭಾವಯಾನ….*- *ಅಸಹಾಯಕಿ*

ಎದೆಯ ಗೂಡಿನಲಿ ಬಚ್ಚಿಟ್ಟ ನೆನಪುಗಳನು
ಮನದಿಂದಾಚೆ ಕಳಿಸಬೇಕಿದೆ…
ಕಣ್ಣ ಕೊನೆಯಲ್ಲಿ ಫಳಕ್ಕೆಂದು ಚಿಮ್ಮಲು
ತುದಿಗಾಲಲಿ ನಿಂತ ಕಂಬನಿಯನ್ನು ಮರೆಮಾಚಬೇಕಿದೆ…!

ಪಿಸುಗುಟ್ಟಿದ ನೂರು ಮಾತುಗಳನು ಮನದೊಳಗೆನೇ ಹೂತು ಹಾಕಬೇಕಿದೆ…
ನಿನ್ನೆದೆಗೊರಗಿ ನಾ ಕಟ್ಟಿದ ಕನಸಿನ ಮಹಲನು
ಕೈಯಾರೆ ನಾನೇ ಕೆಡವಬೇಕಿದೆ…!

ಪ್ರೀತಿಯ ನೀರುಣಿಸಿ ಬೆಳೆಸಿದ
ಒಲವ ಬಳ್ಳಿಯನು ಕರುಣೆಯಿಲ್ಲದೆ ಕತ್ತರಿಸಬೇಕಿದೆ…
ನಿನ್ನೊಲವಿಂದ ನನ್ನೊಳಗೆ ಮೊಳೆತ ಬಯಕೆಗಳನು
ನಾನೇ ಕತ್ತು ಹಿಸುಕಿ ಸಾಯಿಸಬೇಕಿದೆ…!

ಸೋತು ಹೋಗಿರುವೆ ಕೈಲಾದ ಪ್ರಯತ್ನ ಮಾಡಿ..
ಕೈ ಮುಗಿದು ಬೇಡುತ್ತಿರುವೆ…
ನನ್ನೊಳಗೆ ಕುಳಿತ ನೀನು ನನ್ನಿಂದ ದೂರ ಹೋಗಿಬಿಡು…
ನಿತ್ಯ ಬಸವಳಿವ ಈ ಬಡಪಾಯಿ ಹೃದಯಕ್ಕೆ
ಭಾವ ತಲ್ಲಣಗಳಿಂದ ಮುಕ್ತಿ ನೀಡು…!

 

  • *ಪ್ರಮೀಳಾ ರಾಜ್*

 

More from the blog

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...