Thursday, February 13, 2025

*ಭಾವಯಾನ* *ನೆನಪುಗಳ ಸೌರಭ*

ದೂರದ ಆಗಸದಲಿ ಒಂಟಿನಕ್ಷತ್ರವೊಂದು
ಅಮಾವಾಸ್ಯೆಯ ರಾತ್ರಿಯಲೂ
ಫಳಫಳನೆ ಹೊಳೆಯುತ್ತಿದೆ..
ಅದು ನೀನೆ ಇರಬಹುದೇನೋ ಎಂಬ
ಭಾವ ಮನಕೆ…!

ಮಧ್ಯರಾತ್ರಿಯವರೆಗೂ ಅದರೊಡನೆ ಸಂಭಾಷಿಸುತ್ತೇನೆ…
ಕಣ್ಮುಚ್ಚದೆ ದಿಟ್ಟಿಸಿ ನೋಡುತ್ತಿರುತ್ತೇನೆ..
ನಕ್ಷತ್ರ ನಿನ್ನ ನೈಜರೂಪವ
ತೋರಿಸುವುದೇನೋ ಎಂಬ ಆಸೆ ನನಗೆ…!

ಹೂಗಳ ಪರಿಚಯ ನನಗಿಲ್ಲ…
ಅದಾವುದೋ ಬಿಳಿಯ ಬಣ್ಣದ ಹೂಗಳ ಸೌರಭವ
ಮನದಣಿಯೆ ಆಸ್ವಾದಿಸುತ್ತೇನೆ
ಅಂದೊಮ್ಮೆ ನಿನ್ನ ಹೊಂಬಣ್ಣದ ತನುವಿನ
ಕಂಪನು ಅನುಭವಿಸಿದ ನೆನಪು…
ಬಿಳಿಯ ಹೂಗಳ ಸೌರಭದಲೂ
ನಿನ್ನದೇ ನೆರಳು…!

ಸಂಗೀತದ ಸಪ್ತಸ್ವರಗಳು ಯಾವುದೆಂದೇ ತಿಳಿದಿಲ್ಲ…
ಏಕಾಂತ ಮೌನದಲಿ ಭಾವನೆಗಳ ಗೀತೆಯೊಂದ ಕೇಳಿದಾಗ
ಮೈಮರೆತುಬಿಡುತ್ತೇನೆ…
ಸಂಗೀತದ ಆಲಾಪದಲ್ಲಿ ನಿನ್ನದೇ… ನಿನ್ನದೇ ಮುಗ್ಧ ನಗು !

 

*ಪ್ರಮೀಳಾ ರಾಜ್*

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...