Thursday, February 13, 2025

ಗಜಲ್ 47

ನಿನ್ನೆ ಇಂದುಗಳು ಎಂದು ಹುಸಿ ಆಗಿ ಹೋಗದ ಸತ್ಯವು ನಾಳೆ/
ಬೆಳಿಗ್ಗೆಯಿಂದ ಸಂಜೆವರೆಗೆ ಪಡುವ ಪರಿಶ್ರಮದ ಫಲವೂ ನಾಳೆ//

ಸ್ವಂತಿಕೆ ಇರದ ಕನಸುಗಳು ಅಪೂರ್ಣ ಹೆಪ್ಪು ಹಾಕಲಿಟ್ಟ ರಾತ್ರಿ ಹಾಲು/
ಒಡೆಯುವ ಮುನ್ನ ಮೊಸರಾಗುವ ನನಸಿನ ಪ್ರಯತ್ನವೂ ನಾಳೆ //

ಬೀಜ ತಂದು ಸಸಿಯ ನೆಟ್ಟು ಪೋಷಿಸಿ ಬೆಳೆಯುವೆವು ಭತ್ತ/
ನಿರಂತರ ಆರೈಕೆಯ ಲಾಭ ಕೈಗೆ ಬಾಯಿಗೆ ಬರುವವು ನಾಳೆ//

ಮುಂದೊಂದು ದಿನ ಎನ್ನುವ ಭರವಸೆ ತರುವ ಖುಷಿ ಸಾಕಷ್ಟು/
ಆಸೆಗಳು ಹುಟ್ಟಿಕೊಂಡು ಸವೆಸಿ ಹಾದಿ ಹಸಿರಾಗುವವೂ ನಾಳೆ//

ಸವಾಲುಗಳಿಗೆ ಎದೆಯೊಡ್ಡಿ ಎದುರಿಸುವ ಛಲದಲ್ಲಿ ಬಿಡದ ಹಂಬಲ/
ಕುಸಿಯದಂತೆ ಎತ್ತಿ ಹಿಡಿಯಬಲ್ಲ ಸಹನೆ ಉಕ್ಕಿನ ಬಲವೂ ನಾಳೆ//

ಭವಿಷ್ಯ ಇಲ್ಲವೆಂದಾದರೆ ಬಾಳು ಎಲ್ಲಾ ಸಮಯ ನರಕ ಯಾತನೆ/
ದಿನಾಲೂ ಅರಳಿ ಬಾಡುವ ಮಲ್ಲಿಗೆ ಮತ್ತೆ ಚಿಗುರುವವು ನಾಳೆ//

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...