Monday, January 26, 2026

ಪಯಣ

ಬದಲಿಸಿ ದಿಕ್ಕು
ಗಾಳಿಯಲ್ಲಿ ಗುದ್ದು
ನೀಲಾಗಾಸಕ್ಕೂ ತೋರು
ಉತ್ಸಾಹದ ಮುದ್ದು
ಓಹೋ ಈ ಪಯಣ
ಸದಾ ನಾಳೆಯ ಕಡೆ
ನಿರಂತರ ಮುಂದೆ
ನುಗ್ಗಿ ನಡೆ ನಡೆ

ಇದ್ದರೆ ಏನು
ನೂರು ತಿರುವುಗಳು
ಬಂದರೆ ಏನು
ಬೇಕಾದಷ್ಟು ಅಡ್ಡಾದಿಡ್ಡಿಗಳು
ಟೊಂಕ ಕಟ್ಟಿ
ಎದುರಿಸುವ ಕೈಗಳು
ಅಕ್ಕ ಪಕ್ಕವುಂಟು
ನಾವೀಗ ಹಕ್ಕಿಗಳು

ಅದೆಷ್ಟು ದೂರ
ಇರಲಿ ದಾರಿ
ಮಾಡುವೆವು ನಾವು
ಸವಾಲುಗಳ ಸವಾರಿ
ಅಷ್ಪಿಷ್ಟು ಹುಡುಗಾಟ
ಕುತೂಹಲದ ನೋಟ
ರೋಚಕ ಒಡನಾಟ
ಸ್ನೇಹದ ಪರಿಪಾಟ

ಅಂತ್ಯ ಎಲ್ಲುಂಟು
ಆರಂಭವೇ ಉದ್ದಕ್ಕೂ
ತೆಗದುಕೋ ಸುಲಭವಾಗಿ
ಸಂತಸವೇ ಎಲ್ಲಾದಕ್ಕೂ
ನೊಂದ ಮನಗಳಿಗೆ
ಅಕ್ಕರೆಯೇ ಸಮಾಧಾನ
ಪ್ರೀತಿಯ ಜಮಾನ
ನಗುವೇ ಜಾಯಮಾನ

 

*ಬಸವರಾಜ ಕಾಸೆ*

More from the blog

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...

ವಿಟ್ಲ ಜಾತ್ರೋತ್ಸವದಲ್ಲಿ ಮನರಂಜಿಸಿದ ವಿಟ್ಲೋತ್ಸವ..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಲಾವಧಿ ಜಾತ್ರೋತ್ಸವದಲ್ಲಿ ಮಂಗಳವಾರ ರಾತ್ರಿ ದೇವರ ಹೂ ತೇರು ಉತ್ಸವ ನಡೆಯಿತು. ವಿಆರ್ ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ 33...

ಮಾಣಿ : ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮ..

ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ಸಂಘ ಸಂಸ್ಥೆಗಳ ಜಂಟಿ...