Monday, February 2, 2026

*ಜನ ಜಾಗೃತಿ ಜಾಥಾ*

ಕೋಟಿ ಕೋಟಿ
ದುಡ್ಡು ಸುರಿದು
ಹಗಲು ಇರುಳು
ಬೆವರು ಬಸಿದು
ಗಲ್ಲಿ ಗಲ್ಲಿಯಲ್ಲೂ
ಬೀದಿ ಬೀದಿಯಲ್ಲೂ
ನಡೆಯುತ್ತಿವೆ ಅಂತೆ
ನೂರೆಂಟು ರೂಪದಲ್ಲೂ
ಜಾಥ ಜಾಥ ಜಾಥ…
ಜನ ಜಾಗೃತಿ ಜಾಥ…

ಗುಟ್ಕಾ ತಂಬಾಕು ಜಗೆಯಬೇಡಿ
ಕಂಡ ಕಂಡಲ್ಲಿ ಉಗುಳಬೇಡಿ
ಸಿಗರೇಟು ಸೇದಬೇಡಿ
ಎಲ್ಲೆಂದರಲ್ಲಿ ಹೊಗೆಯ ಬಿಡಬೇಡಿ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
ನೋಡೋ ಅಣ್ಣ ಚಿತ್ರವನ್ನು
ನಮ್ಮನ್ನು ಕೇಳೋನು
ಯಾವನಲೇ ನೀನು
ನಡೆ ನುಡಿ ಹಳೆ ಕೊಳೆ
ಹೊಡಿರೀ ಅಪ್ಪಾ ಹೊಡಿರೀ
ಇನ್ನೂ ಜೋರಾಗಿ ಚಪ್ಪಾಳೆ

ದೊಡ್ಡ ಆಂದೋಲನವಿದು
ಪ್ರಸ್ತುತತೆಯ ಅರಿವು
ನಿರಂತರ ಅಭಿಯಾನವಿದು
ಸ್ವಾಸ್ತತೆಯ ಉಳಿವು
ವಿವಿಧ ಕಾರ್ಯಕ್ರಮ
ನಿತ್ಯ ರೂಪಿಸಿಕೊಂಡು
ಸಂಘ ಸಂಸ್ಥೆ ಸರಕಾರಗಳು
ಸಮಸ್ಯೆಗಳನ್ನು ಸವಾಲಾಗಿಸಿಕೊಂಡು
ಅತ್ತ ಇತ್ತ ನಿಮಿತ್ತ
ಜನ ಜಾಗೃತಿ ಜಾಥ…

ಹಣ ಹೆಂಡಕ್ಕೆ ಮಾರಿಕೊಳ್ಳಬೇಡಿ
ನಿಮ್ಮ ಮತ ಯಾರಿಗೂ
ತಪ್ಪದೇ ವೋಟು ಹಾಕಿ
ಒಳ್ಳೆಯ ಅಭ್ಯರ್ಥಿಗೂ
ಟಿವಿ ಪೇಪರ್ ನೋಡಿದ್ದೆ ಬಂತು
ಜಾತಿ ನೋಡಿ ಗುದ್ದಿದೆ ನಾನಂತೂ
ಇದ್ದದ್ದೇ ಇದೆಲ್ಲಾ ಎಂದು
ಪ್ರಜ್ಞಾವಂತರಲ್ಲೂ ಆಲಸ್ಯ ತಂತು
ಆ ಪದ್ದತಿ ಈ ಪದ್ದತಿ
ಸಾಮಾಜಿಕ ಅನಿಷ್ಠಗಳು
ಹೋಗದೆಂದು ಕುಣಿಯುತ್ತಿವೆ
ತೈ ತೈ ತಕತೈ ಅಡಿಯಾಳು

ಹಾಗೆ ಅಂದರೆ ಏನು
ಹೇಳೋರು ಹೇಳತಾರೆ ಬಿಡು
ಹೀಗೆ ಮಾಡಿದರೆ ಹೆಂಗೆ
ಮಾಡೋರು ಮಾಡತಾರೆ ನೋಡು
ಯಾರೇಷ್ಟು ಹೇಳಿದರೂ ಅಷ್ಟೇ
ಮನಸ್ಸಿಗೆ ಬಂದಂತೆ ಸಾಪಲ್ಯ
ಪೂರ್ವಾಗ್ರಹಗಳ ಅಸಹಕಾರ
ಕಾಣಿಸುವುದು ಸಮಾಜಕ್ಕೆ ವೈಫಲ್ಯ
ಗೋತಾ ಗೋತಾ ಗೋತಾ
ಜನ ಜಾಗೃತಿ ಗೋತಾ…

*ಬಸವರಾಜ ಕಾಸೆ*

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...